Tuesday 20 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 196 - 200

 ಸರ್ವೇಷು ತೇಷು ವಿಜಿತೇಷ್ವಭಿಜಗ್ಮಿವಾನ್ ಸ ಯೋದ್ಧುಂ ಬೃಹದ್ರಥಸುತೋsಪ್ಯಮುನಾ ರಥೇನ ।

ತಂ ಚೈವ ರಾಮವರತೋ ವಿರಥಂ ವಿಶಸ್ತ್ರಂ ಚಕ್ರೇ ಸ ಚೈನಮಥ ಮುಷ್ಟಿಭಿರಭ್ಯುಪೇತೌ ॥೧೯.೧೯೬॥

ಎಲ್ಲಾ ರಾಜರುಗಳು ಸೋಲುತ್ತಿರಲು,ಜರಾಸಂಧ ಮಾಡಿದ ಕರ್ಣನ ಮೇಲೆ ಆಕ್ರಮಣ,

ಭಾರ್ಗವರಾಮನ ವರಬಲದಿಂದ ಕರ್ಣ ಜರಾಸಂಧನ ಮಾಡಿದ ರಥ - ಆಯುಧಹೀನ.

ಬ್ರಹ್ಮವರಬಲದಿಂದ ಜರಾಸಂಧನೂ ಕರ್ಣನ ಮಾಡಿದ ರಥ ಆಯುಧಹೀನ,

ರಥ ಆಯುಧಹೀನರಾದ ಮೇಲೆ ಮುಷ್ಠಿಯುದ್ಧಕ್ಕೆ ಇಳಿದರು ಜರಾಸಂಧ ಕರ್ಣ.

 

ಸನ್ಧೌ ಯದೈವ ಜರಯಾ ಪ್ರತಿಸನ್ಧಿತಸ್ಯ ಕರ್ಣ್ಣೋ ಜಘಾನ ನ ಪರತ್ರ ತುತೋಷ ರಾಜಾ ।

ನ ಜ್ಞಾತಮೇತದಪಿ ಹೋ ಹಲಿನಾ ತದೇತಜ್ಜ್ಞಾತಂ ತ್ವಯಾ ಭವ ತತೋ ಮಮ ಭೃತ್ಯ ಏವ ॥೧೯.೧೯೭॥

ಜರಾ ಜೋಡಿಸಿದ ಜರಾಸಂಧನ ದೇಹಭಾಗಕ್ಕೆ ಕರ್ಣನಿಂದ ಹೊಡೆತ,

ಕರ್ಣ ದುರ್ಯೋಧನರ ಬೇರಾವ ಕ್ರಿಯೆಗಷ್ಟು ಆನಂದಪಟ್ಟಿದ್ದಿಲ್ಲಾತ.

ನೀ ತಿಳಿದೆ ಬಲರಾಮಗೂ ತಿಳಿಯಲಾಗದ ನನ್ನ ಮರ್ಮಸ್ಥಳ ರಹಸ್ಯ,

ಸಂತಸದಿಂದ ಹೇಳುತ್ತಿದ್ದೇನೆ ನೀನು ಸ್ವೀಕರಿಸು ನನ್ನಂತರಂಗ ದಾಸ್ಯ.

 

ಏವಂವಿಧಂ ಸುಕುಶಲಂ ಬಹುಯುದ್ಧಶೌಣ್ಡಂ ನ ತ್ವಾಂ ಹನಿಷ್ಯ ಉತ ತೇ ಪಿತುರೇವ ಪೂರ್ವಮ್ ।

ಬಾಹ್ವೋರ್ಬಲಾದಭಿಹೃತಂ ಹಿ ಮಯಾsಙ್ಗರಾಜ್ಯಂ ತತ್ ತ್ವಂ ಗೃಹಾಣ ಯುಧಿ ಕರ್ಮ್ಮಕರಶ್ಚ ಮೇ ಸ್ಯಾಃ ॥೧೯.೧೯೮॥

ಇತ್ಯುಕ್ತ ಆಶು ಸ ತಥೈವ ಚಕಾರ ಕರ್ಣ್ಣಃ ಪೂರ್ವಂ ಹಿ ತಸ್ಯ ನಿಜರಾಜ್ಯಪದೈಕದೇಶಃ ।

ದುರ್ಯ್ಯೋಧನೇನ ವಿಹಿತೋ ಮಗಧಾಧಿರಾಜಂ ಜಿತ್ವಾ ವೃಕೋದರಹೃತಃ ಪಿತುರೇವ ದತ್ತಃ ॥೧೯.೧೯೯॥

ಯುದ್ಧಕೌಶಲ್ಯ,ಬಗೆಬಗೆಯ ಯುದ್ಧಚಾತುರ್ಯದ  ನಿನ್ನನ್ನು ನಾನು ಕೊಲ್ಲಲಿಚ್ಛಿಸುವುದಿಲ್ಲ,

ತೋಳ್ಬಲದಿಂದ ಕಸಿದ ನಿನ್ನಪ್ಪನ ಅಂಗರಾಜ್ಯವು ನಿನ್ನದಿನ್ನು-ನೀನಾಗು ನನ್ನಕಡೆಯ ಮಲ್ಲ.

ಇದನ್ನೆಲ್ಲಾ ಕೇಳಿಸಿಕೊಂಡ ಕರ್ಣ ಒಪ್ಪಿಕೊಂಡು ಆಯಿತೆಂದ,

ಮೊದಲು ರಾಜ್ಯದ ಆ ಭಾಗ ಬಂದಿತ್ತು ದುರ್ಯೋಧನನಿಂದ.

ಜರಾಸಂಧನ ವಶದಲ್ಲಿದ್ದ ಆ ಭಾಗವನ್ನು ಭೀಮ ಗೆದ್ದಿದ್ದ,

ಗೆದ್ದಿದ್ದ ಆ ರಾಜ್ಯಭಾಗವನ್ನು ಧೃತರಾಷ್ಟ್ರಗೆ ಒಪ್ಪಿಸಿ ಬಿಟ್ಟಿದ್ದ.

 

ಅಙ್ಗಾಧಿರಾಜ್ಯಮುಪಲಭ್ಯ ಜರಾಸುತಸ್ಯ ಸ್ನೇಹಂ ಚ ಸೂರ್ಯ್ಯಸುತ ಆಶು ಕುರೂನ್ ಜಗಾಮ ।

ದೃಷ್ಟ್ವೈವ ತಂ ಮುಮುದಿರೇ ಧೃತರಾಷ್ಟ್ರಪುತ್ರಾ ನಾನೇನ ತುಲ್ಯಮಧಿಜಗ್ಮುರತೋ ಹರಿಂ ಚ ॥೧೯.೨೦೦॥

ಅಂಗರಾಜ್ಯ, ಜರಾಸಂಧನ ಗೆಳೆತನ ಪಡೆದ ಸೂರ್ಯಪುತ್ರ ಕರ್ಣ,

ಕುರುಪಟ್ಟಣ ಸೇರಿ ದುರ್ಯೋಧನಾದಿಗಳ ಸಂತಸಕ್ಕಾದ ಕಾರಣ,

ಅವರನ್ನಾವರಿಸಿತು ಇವ ಕೃಷ್ಣಗೂ ಮಿಗಿಲೆಂಬ ಭ್ರಮೆಯ ಆವರಣ.

No comments:

Post a Comment

ಗೋ-ಕುಲ Go-Kula