Thursday 22 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 206 - 213

 ದುರ್ಯ್ಯೋಧನೇsನುಜಜನೈಃ ಸಹ ತೈರ್ಗ್ಗೃಹೀತೇ ಭೀಷ್ಮಾಮ್ಬಿಕೇಯವಿದುರಾಗ್ರಜವಾಕ್ಯನುನ್ನಃ ।

ಭೀಮೋ ವಿಜಿತ್ಯ ನೃಪತೀನ್ ಸಜರಾಸುತಾಂಸ್ತಾನ್ ಹತ್ವಾ ಸುವಜ್ರಮಮುಚದ್ ಧೃತರಾಷ್ಟ್ರಪುತ್ರಾನ್ ॥೧೯.೨೦೬॥

ತಮ್ಮಂದಿರಿಂದ ಕೂಡಿಕೊಂಡು ಸೆರೆಹಿಡಿಯಲ್ಪಟ್ಟವನಾದ ದುರ್ಯೋಧನ,

ಭೀಷ್ಮ, ಧೃತರಾಷ್ಟ್ರ, ವಿದುರ, ಧರ್ಮರಾಜಾದಿಗಳ ಮಾತಿಗೆ ಕಟ್ಟುಬಿದ್ದ ಭೀಮಸೇನ,

ಜರಾಸಂಧ ಮೊದಲಾದ ರಾಜರುಗಳ ತಾ ಗೆದ್ದ ,

ಸುವಜ್ರನ ಕೊಂದು ಅಂಧಕನ ಮಕ್ಕಳ ಬಿಡಿಸಿದ.

 

ತೇsಪಿ ಸ್ಮ ಕರ್ಣ್ಣಸಹಿತಾ ಮೃತಕಪ್ರತೀಕಾ ನಾಗಾಹ್ವಯಂ ಪುರಮಥಾsಯಯುರಪ್ಯಮೀಷಾಮ್ ।

ದೃಷ್ಟ್ವಾ ವಿರೋಧಮವದನ್ನೃಪತಿಶ್ಚ ಧರ್ಮ್ಮಪುತ್ರಂ ಪುರನ್ದರಕೃತಸ್ಥಲಮಾಶು ಯಾಹಿ ॥೧೯.೨೦೭॥

ಕರ್ಣನಿಂದ ಕೂಡಿರುವ ದುರ್ಯೋಧನಾದಿಗಳ ಹಿಂಡು,

ಹಸ್ತಿನವತಿ ಸೇರಿದರು ಸತ್ತ ಮುಖಗಳ ಹೊತ್ತುಕೊಂಡು.

ಇಷ್ಟಾದರೂ ದುರ್ಯೋಧನನದು ಪಾಂಡವರೆಡೆ ಭಾರೀ ವಿರೋಧ,

ಅದ ಕಂಡ ಧೃತರಾಷ್ಟ್ರ ಧರ್ಮರಾಜಗೆ ನೀ ಇಂದ್ರಪ್ರಸ್ತಕೆ ಹೋಗೆಂದ.

 

ತತ್ರಾರ್ದ್ಧರಾಜ್ಯಮನುಭುಙ್ಕ್ಷ್ವಸಹಾನುಜೈಸ್ತ್ವಂ ಕೋಶಾರ್ದ್ಧಮೇವ ಚ ಗೃಹಾಣ ಪುರಾ ಹಿ ಶಕ್ರಃ ।

ತತ್ರಾಭಿಷಿಕ್ತ ಉತ ಕಞ್ಜಭವಾದಿದೇವೈಸ್ತತ್ರಸ್ಥ ಏವ ಸ ಚಕಾರ ಚಿರಂ ಚ ರಾಜ್ಯಮ್ ॥೧೯.೨೦೮॥

ಅಲ್ಲಿ ನಿನ್ನ ತಮ್ಮಂದಿರೊಡನೆ ಅರ್ಧರಾಜ್ಯವ ಭೋಗಿಸು,

ರಾಜ್ಯದ ಅರ್ಧಭಾಗ ಕೋಶವನ್ನು ಒಯ್ದು ಅನುಭವಿಸು.

ಹಿಂದೆ ಇಂದ್ರ ಬ್ರಹ್ಮಾದಿಗಳಿಂದ ಅಭಿಷಿಕ್ತನಾಗಿದ್ದ,

ಅಭಿಷಿಕ್ತನಾಗಿ ಅಲ್ಲೇ ದೀರ್ಘಕಾಲ ರಾಜ್ಯವಾಳಿದ್ದ.

 

ತ್ವಂ ವೀರ ಶಕ್ರಸಮ ಏವ ತತಸ್ತವೈವ ಯೋಗ್ಯಂ ಪುರಂ ತದತ ಆಶ್ವಭಿಷೇಚಯಾಮಿ ।

ಇತ್ಯುಕ್ತ ಆಹ ಸ ಯುಧಿಷ್ಠಿರ ಓಮಿತಿ ಸ್ಮ ಚಕ್ರೇsಭಿಷೇಕಮಪಿ ತಸ್ಯ ಸ ಆಮ್ಬಿಕೇಯಃ ॥೧೯.೨೦೯॥

ಓ ವೀರಾ, ನೀನಿದ್ದೀಯ ಇಂದ್ರನಿಗೆ ಸಮಾನ,

ಹಾಗಾಗಿ ಯೋಗ್ಯವಾದುದು ನಿನಗೆ ಆ ಪಟ್ಟಣ.

ಧೃತರಾಷ್ಟ್ರನೆಂದ -ನಿನಗೀಗಲೇ ಇಲ್ಲೇ ಮಾಡುತ್ತೇನೆ ಅಭಿಷೇಕ,

ಧರ್ಮರಾಜ ಒಪ್ಪಲು ಅಂಬಿಕೆಯ ಮಗ ಮಾಡಿದ ಅವನ ಅಭಿಷೇಕ.

 

ತಸ್ಯಾಭಿಷೇಕಮಕರೋತ್ ಪ್ರಥಮಂ ಹಿ ಕೃಷ್ಣೋ ವಾಸಿಷ್ಠನನ್ದನ ಉರುರ್ಭವ ಚಕ್ರವರ್ತೀ ।

ಯಷ್ಟಾsಶ್ವಮೇಧನಿಖಿಲಾತ್ಮಕರಾಜಸೂಯಪೂರ್ವೈರ್ಮ್ಮಖೈಃ ಸತತಮೇವ ಚ ಧರ್ಮ್ಮಶೀಲಃ ॥೧೯.೨೧೦॥

ಮೊದಲು ವೇದವ್ಯಾಸರಿಂದ ಯುಧಿಷ್ಠಿರಗೆ ನಡೆಯಿತು ಅಭಿಷೇಕದ ಕಾರ್ಯ,

ಚಕ್ರವರ್ತಿಯಾಗಿ ಅಶ್ವಮೇಧ ರಾಜಸೂಯಗಳ ಮಾಡೆಂದು ಹರಸಿದ ಆರ್ಯ.

 

ಇತ್ಯೇವ ಪಾರ್ಷತಸುತಾಸಹಿತೇsಭಿಷಿಕ್ತೇ ಕೃಷ್ಣೋsಪಿ ವೃಷ್ಣಿವೃಷಭಃ ಸ ತಥಾsಭ್ಯಷಿಞ್ಚತ್ ।

ಏವಂ ಚ ಮಾರುತಿಶಿರಸ್ಯಭಿಷೇಕಮೇತೌ ಸಞ್ಚಕ್ರತುಃ ಸ್ಮ ಯುವರಾಜಪದೇ ಸಭಾರ್ಯ್ಯಮ್ ॥೧೯.೨೧೧॥

ಹೀಗೆ ದ್ರೌಪದೀಸಮೇತ ಧರ್ಮರಾಜಗೆ ನಡೆಯಿತು ಅಭಿಷೇಕ,

ತದನಂತರ ಕೃಷ್ಣನೂ ಮಾಡಿದ ಧರ್ಮರಾಯನ ಪಟ್ಟಾಭಿಷೇಕ.

ಆಮೇಲೆ ಕೃಷ್ಣ ವ್ಯಾಸರಿಂದ ದ್ರೌಪದೀಸಮೇತ ಭೀಮನ ತಲೆಗೆ,

ಅಭಿಷೇಕದೊಂದಿಗೆ ಯುವರಾಜನ ಪದವಿಯ ಪಟ್ಟದ ಕೊಡುಗೆ.

 

ಭೀಮೇ ಚ ಪಾರ್ಷತಸುತಾಸಹಿತೇsಭಿಷಿಕ್ತೇ ತಾಭ್ಯಾಮನನ್ತಸುಖಶಕ್ತಿಚಿದಾತ್ಮಕಾಭ್ಯಾಮ್ ।

ಅನ್ಯೈಶ್ಚ ವಿಪ್ರವೃಷಭೈಃ ಸುಕೃತೇಭಿಷೇಕೇ ಧರ್ಮ್ಮಾತ್ಮಜಾನು ಮುಮುದುರ್ನ್ನಿಖಿಲಾಶ್ಚ ಸನ್ತಃ ॥೧೯.೨೧೨॥

ಧರ್ಮರಾಜನ ಅಭಿಷೇಕಾನಂತರ ದ್ರೌಪದೀಸಹಿತನಾದ ಭೀಮಸೇನ,

ಪಡೆದ ಅನಂತಶಕ್ತ ವ್ಯಾಸ ಕೃಷ್ಣರಿಂದ ರಾಜ್ಯಾಭಿಷೇಕದ ವಿಧಿವಿಧಾನ,

ಸಜ್ಜನರಿಗೆ ಸಂತಸವಾಯ್ತು ಶ್ರೇಷ್ಠ ವಿಪ್ರರಿಂದಾಗಲು ಪಟ್ಟ ಪ್ರದಾನ.

 

ತಸ್ಮಿನ್ ಮಹೋತ್ಸವವರೇ ದಿನಸಪ್ತಕಾನುವೃತ್ತೇ ವಸಿಷ್ಠವೃಷಭೇಣ ಚ ವೃಷ್ಣಿಪೇನ ।

ಕೃಷ್ಣೇನ ತೇ ಯಯುರಮಾ ಪೃಥಯಾ ತಯಾ ಚ ಪಾಞ್ಚಾಲರಾಜಸುತಯಾ ಸ್ಥಲಮಿನ್ದ್ರವಾಸಮ್ ॥೧೯.೨೧೩॥

ಸತತ ಏಳುದಿನಗಳ ಕಾಲ ನಿರಂತರ,

ನಡೆಯಿತಲ್ಲಿ ಶ್ರೇಷ್ಠ ಉತ್ಸವದ ಸಡಗರ.

ವೇದವ್ಯಾಸ ಕೃಷ್ಣ ಕುಂತೀದೇವಿ ಮತ್ತು ದ್ರೌಪದಿ,

ಪಾಂಡವರಕೂಡಿ ಹಿಡಿದರು ಇಂದ್ರಪ್ರಸ್ಥದ ಹಾದಿ.

No comments:

Post a Comment

ಗೋ-ಕುಲ Go-Kula