Sunday 25 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 220 - 223

 ವಾಸಿಷ್ಠಪೇನ ಯದುಪೇನ ಚ ಪಾಣ್ಡವಾನಾಂ ರತ್ನೋತ್ಕರಂ ಕುರು ಪುರಂ ಪುರುಹೂತಪುರ್ಯ್ಯಾಃ  ।

ಸಾದೃಶ್ಯತಸ್ತ್ವಿತಿ ನಿಯುಕ್ತ ಉಭೌ ಪ್ರಣಮ್ಯ ಸರ್ವೇಶ್ವರೌ ಸ ಕೃತವಾಂಶ್ಚ ಪುರಂ ತಥೈವ ॥೧೯.೨೨೦॥

ವಿಶ್ವಕರ್ಮಗೆ ಆಜ್ಞೆ ಮಾಡಿದರು --ವೇದವ್ಯಾಸ ಮತ್ತು ಯಾದವ ಕೃಷ್ಣ,

ಪಾಂಡವರಿಗಾಗಿ ನಿರ್ಮಿಸು ಇಂದ್ರನಮರಾವತಿ ಸದೃಶ ರತ್ನಖಚಿತ ಪಟ್ಟಣ,

ಒಪ್ಪಿದ ವಿಶ್ವಕರ್ಮ ಇಬ್ಬರನೂ ನಮಿಸಿ ಮಾಡಿದ ಭವ್ಯಭವನದ ನಿರ್ಮಾಣ.

 

ದೇಶಂ ಚ ನಾತಿಜನಸಂವೃತಮನ್ಯದೇಶಸಂಸ್ಥೈರ್ಜ್ಜನೈರಭಿಪುಪೂರಿರ ಆಶು ಪಾರ್ತ್ಥಾಃ ।

ತೇಷಾಂ ಗುಣೈರ್ಹರಿಪದಾನತಿಹೇತುತಶ್ಚ ರಾಷ್ಟ್ರಾನ್ತರಾ ಇಹ ಶುಭಾ ವಸತಿಂ ಸ್ಮ ಚಕ್ರುಃ ॥೧೯.೨೨೧॥

ನರಿಲ್ಲದ ಆ ದೇಶಕೆ ಪಾಂಡವರು ಬೇರೆ ದೇಶದ ಜನರ ತುಂಬಿದರು,

ಪಾಂಡವರ ಸದ್ಗುಣ ಹರಿಭಕ್ತಿ ಸಜ್ಜನಿಕೆಗೆ ಜನರು ಆಕರ್ಷಿತರಾಗಿ ಬಂದರು.

ಬೇರೆ ಬೇರೆ ರಾಜ್ಯದ ಸಜ್ಜನರು ಅಲ್ಲಿಗೇ ಬಂದು ವಾಸಕ್ಕಾಗಿ ನೆಲೆಸಿದರು.

 

ಪ್ರಸ್ಥಾಪ್ಯ ದೂರಮನುಜಸ್ಯ ಸುತಾನ್ ಸ ರಾಜಾ ಚಕ್ರೇsಭಿಷೇಕಮಪಿ ತತ್ರ ಸುಯೋಧನಸ್ಯ ।

ದುಃಶಾಸನಂ ಚ ಯುವರಾಜಮಸೌ ವಿಧಾಯ ಮೇನೇ ಕೃತಾರ್ತ್ಥಮಿವ ಚ ಸ್ವಮಶಾನ್ತಕಾಮಃ ॥೧೯.೨೨೨॥

ರಾಜ ಧೃತರಾಷ್ಟ್ರ ತನ್ನ ತಮ್ಮನ ಮಕ್ಕಳ ದೂರ ಕಳಿಸಿದ,

ಹಸ್ತಿನಪುರದಲ್ಲಿ ದುರ್ಯೋಧನನಿಗೆ ಅಭಿಷೇಕ ನಡೆಸಿದ.

ದುಃಶಾಸನನ ಯುವರಾಜನನ್ನಾಗಿ ಮಾಡಿ ಮಾಡಬೇಕಾದ್ದನ್ನ ಮಾಡಿದೆ ಅಂದುಕೊಂಡ,

ಆದರೂ ನಂದಿರಲಿಲ್ಲ ಧೃತರಾಷ್ಟ್ರನ ಒಳಗೆ ಹೊಗೆಯಾಡುತ್ತಿದ್ದ ಇದ್ದ ಕಾಮನೆಯ ಕೆಂಡ.

 

ಪಾರ್ತ್ಥಾಶ್ಚ ತೇ ಮುಮುದುರತ್ರ ವಸಿಷ್ಠವೃಷ್ಣಿವರ್ಯ್ಯೋದಿತಾನಖಿಲತತ್ತ್ವವಿನಿರ್ಣ್ಣಯಾಂಸ್ತು ।

ಶೃಣ್ವನ್ತ ಏವ ಹಿ ಸದಾ ಪೃಥಿವೀಂ ಚ ಧರ್ಮ್ಮಾದ್ ಭುಞ್ಜನ್ತ ಆಶ್ರಿತರಮಾಪತಿಪಾದಯುಗ್ಮಾಃ ॥೧೯.೨೨೩॥

ಇಂದ್ರಪ್ರಸ್ಥದಲ್ಲಿ ಪಾಂಡವರು ಕೇಳುತ್ತಾ ವ್ಯಾಸ ಕೃಷ್ಣರಿಂದ ತತ್ವ ನಿರ್ಣಯ,

ಧರ್ಮರಾಜ್ಯಭಾರ ಮಾಡುತ್ತಾ ಸಂತಸದಿಂದಿದ್ದರು ಹೊಂದಿ ದೈವಪಾದಾಶ್ರಯ.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋ ನಾಮ ಏಕೋನವಿಂಶೋsದ್ಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಅನುವಾದ,

ಪಾಂಡವರಾಜ್ಯಲಾಭ ಹೆಸರಿನ ಹತ್ತೊಂಬತ್ತನೇ ಅಧ್ಯಾಯ,

                                          ಪಾಂಡವ ಪಕ್ಷಪಾತಿ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ ಭಾವ

No comments:

Post a Comment

ಗೋ-ಕುಲ Go-Kula