Wednesday 21 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 201 -205

 ಉದ್ವಾಹ್ಯ ಕಾಶಿತನಯಾಂ ಗಿರಿಜಾಧಿವಿಷ್ಟಾಂ ಸಾಕ್ಷಾನ್ನರೇಷು ಜನಿತಾಂ ಪ್ರಥಮಾಮಲಕ್ಷ್ಮೀಮ್ ।

ತಸ್ಯಾಂ ಸುತಂ ತ್ವಜನಯತ್ ಪುರ ಆಸ ಯೋsಕ್ಷಃ ಕನ್ಯಾಂ ಪುರಾ ಪ್ರಿಯತಮಾಂ ಚ ಷಡಾನನಸ್ಯ ॥೧೯.೨೦೧॥

ಜ್ಯೇಷ್ಠ ಅಲಕ್ಷ್ಮಿ ಪಾರ್ವತಿಯಿಂದ ಆವಿಷ್ಟಳು,

ಕಾಶೀರಾಜನ ಮಗಳಾಗಿ ಹುಟ್ಟಿ ಬಂದವಳು.

ಅವಳನ್ನು ಮದುವೆಯಾದ ತಾನು ದುರ್ಯೋಧನ,

ಮಗನಾಗಿ ಪಡೆದದ್ದು ಪೂರ್ವದ ಅಕ್ಷಕುಮಾರನನ್ನ.

ಷಣ್ಮುಖನ ಪ್ರಿಯೆಯಾಗಿದ್ದವಳು,

ಈಗವನ ಮಗಳಾಗಿ ಹುಟ್ಟಿದಳು.

 

ಪುತ್ರೋ ಬಭೂವ ಸ ತು ಲಕ್ಷಣನಾಮಧೇಯಃ ಸಾ ಲಕ್ಷಣೇತ್ಯಧಿಕರೂಪಗುಣಾssಸ ಕನ್ಯಾ ।

ತಸ್ಯಾನುಜಾಶ್ಚ ನಿಜಯೋಗ್ಯಗುಣಾ ಅವಾಪುರ್ಭಾರ್ಯ್ಯಾಃ ಪುನಶ್ಚ ಸ ಸುಯೋಧನ ಆಪ ಭಾರ್ಯ್ಯಾಃ ॥೧೯.೨೦೨॥

ಆ ಮಗನ ಹೆಸರಾಯಿತು ಲಕ್ಷಣ,

ಗುಣ ರೂಪಸಿ ಮಗಳಾದಳು ಲಕ್ಷಣಾ.

ದುರ್ಯೋಧನನ ಉಳಿದ ತಮ್ಮಂದಿರು,

ಯೋಗ್ಯರಾದ ಹೆಂಡಂದಿರನ್ನು ಪಡೆದರು.

ದುರ್ಯೋಧನನೂ ಪಡೆದ ಹಲವು ಹೆಂಡಂದಿರು.

 

ಪೂರ್ವಂ ಸುರಾನ್ತಕ ಇತಿ ಪ್ರಥಿತಃ ಸುತೋsಭೂದ್ ದುಃಶಾಸನಸ್ಯ ತದನು ಪ್ರತಿತಪ್ಯಮಾನಾಃ ।

ದೃಷ್ಟ್ವೈವ ಪಾರ್ತ್ಥಬಲವೀರ್ಯ್ಯಗುಣಾನ್ ಸಮೃದ್ಧಿಂ ತಾಂ ಚೈವ ತೇ ಪ್ರತಿ ಯಯುಃ ಸ್ಮ ಕಲಿಙ್ಗದೇಶಮ್ ॥೧೯.೨೦೩॥

ಹಿಂದೆ ಸುರಾಂತಕನೆಂದು ಹೆಸರಾದ ಅಸುರ,

ದುಃಶಾಸನನ ಮಗನಾಗಿ ಹುಟ್ಟಿದ ವ್ಯಾಪಾರ.

ಪಾಂಡವರ ಗುಣ ಸಂಪತ್ತು ದ್ರೌಪದಿಯ ಮದುವೆ ನಂತರದ ಸಮೃದ್ಧಿ ಕಾಲ,

ಕಲಿಂಗದತ್ತ ಹೊರಟ ಕೌರವರ ಉರಿಸಿ ಚುಚ್ಚಿತ್ತು ಪಾಂಡವರ ಕೀರ್ತಿಶೂಲ.

 

ಆಸೀತ್ ಸ್ವಯಮ್ಬರ ಉತಾತ್ರ ಕಲಿಙ್ಗರಾಜಪುತ್ರ್ಯಾಃ ಸುವಜ್ರ ಇತಿ ಯಂ ಪ್ರವದನ್ತಿ ಭೂಪಾಃ ।

ರೌದ್ರಾದ್ ವರಾದವಿಜಿತಸ್ಯ ಚ ತಸ್ಯ ಕನ್ಯಾಂ ದೃಪ್ತೋ ಬಲಾತ್ ಸ ಜಗೃಹೇ ಧೃತರಾಷ್ಟ್ರಸೂನುಃ ॥೧೯.೨೦೪॥

ಕಲಿಂಗ ದೇಶದಲ್ಲಿ ನಡೆದಿತ್ತು ಕಲಿಂಗರಾಜನ ಮಗಳ ಸ್ವಯಂವರ,

ರುದ್ರವರದಿ ಅಜೇಯನಾದ ಅಲ್ಲಿನ ರಾಜನ ಕರೆಯುತ್ತಿದ್ದರು ಸುವಜ್ರ.

ಅವನ ಮಗಳ ದರ್ಪದ ದುರ್ಯೋಧನ ಮಾಡಿದ ಬಲದಿಂದ ಅಪಹಾರ.

 

ತತ್ರಾಥ ರುದ್ರವರತಃ ಸ ಜರಾಸುತೇನ ಯುಕ್ತೋ ಬಬನ್ಧ ಚ ಸುಯೋಧನಮಾಶು ಜಿತ್ವಾ ।

ಕರ್ಣ್ಣಃ ಪರಾದ್ರವದಿಹ ಸ್ಮ ಸುತೇಷು ಪಾಣ್ಡೋರ್ಯ್ಯಸ್ಮಾತ್ ಸ್ಪೃಧಾsಗಮದತಃ ಸ ಪರಾಜಿತೋsಭೂತ್ ॥೧೯.೨೦೫॥

ಜರಾಸಂಧನ ಕೂಡಿದ ರುದ್ರವರಬಲದ ಸುವಜ್ರ ತಾನು,

ದುರ್ಯೋಧನನ್ನು ಸೋಲಿಸಿ ಅವನನ್ನು ಕಟ್ಟಿಹಾಕಿದನು.

ಹೀಗೆ ಕರ್ಣನದು ಆಯಿತು ಯುದ್ಧರಂಗದಿಂದ ಪಲಾಯನ,

ಪಾಂಡುಪುತ್ರ ಧರ್ಮರಾಜಾದಿಗಳಲ್ಲಿ 'ಸ್ಪರ್ಧೆ'ಯ ಕಾರಣ,

'ಸ್ಪರ್ಧೆತಾನು ತೊಡಿಸಿತ್ತು ಕರ್ಣನಿಗೆ ಸೋಲಿನ ತೋರಣ.

No comments:

Post a Comment

ಗೋ-ಕುಲ Go-Kula