Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 109 - 115

 ನರಾಧಿಪಾನ್ ದೇವಗನ್ಧರ್ವನಾಗಾನ್ ಜಿತ್ವಾssನೀತಂ ಹೇಮರತ್ನೋಚ್ಚರಾಶಿಮ್ ।

ಶತದ್ವಯಂ ಯೋಜನಾನಾಂ ಸಮೃದ್ಧಂ ಸಮನ್ತತಃ ಪ್ರಾಹಿಣೋತ್ ಸ್ವಾಂ ಪುರೀಂ ಸಃ ॥೨೦.೧೦೯

ನರಕ ರಾಜರುಗಳನ್ನು ದೇವ ಗಂಧರ್ವ ನಾಗರನ್ನು ಗೆದ್ದು ತಂದಿದ್ದ,

ಆ ಬಂಗಾರ ರತ್ನರಾಶಿಯಿತ್ತು ಇನ್ನೂರುಯೋಜನ

ದಷ್ಟು ಸಮೃದ್ಧ.

ಅದೆಲ್ಲವನ್ನೂ ಶ್ರೀಕೃಷ್ಣಪರಮಾತ್ಮ ತನ್ನ ಪಟ್ಟಣಕೆ ಕಳುಹಿಸಿದ.

 

ಮಹಾವೀರ್ಯ್ಯೈರ್ನ್ನೈಋತೈ ರಾಕ್ಷಸೇನ್ದ್ರೈರ್ಭೌಮಾನೀತೈರ್ನ್ನಿರುತಿಂ ಯೋಧಯಿತ್ವಾ ।

ಸ ಪ್ರಾಹಿಣೋತ್ ಸರ್ವರತ್ನೋಚ್ಚರಾಶಿಂ ಗಜಾಂಶ್ಚ ನಾರಾಯಣ ಆದಿದೇವಃ ॥೨೦.೧೧೦

ಮಹಾವೀರ್ಯದ ನಿರ್ಋತಿಯನ್ನು ಗೆದ್ದು ತಂದಿದ್ದ ಭಂಡಾರ,

ನಿರ್ಋತಿಯ ಅಡಿಯಲ್ಲಿದ್ದ ರಾಕ್ಷಸಶ್ರೇಷ್ಠರ ಮುಖಾಂತರ,

ನರಕಾಸುರ ತಂದಿದ್ದ ಸಕಲ ರತ್ನಗಳ ಸಮೂಹ,

ಮತ್ತು ಆನೆಗಳನ್ನು ದ್ವಾರಕೆಗೆ ಕಳಿಸಿದ ಆದಿದೇವ.

 

ತತ್ರಾಪಶ್ಯತ್ ಕನ್ಯಕಾ ಭೂಮಿಪಾನಾಂ ಭೌಮಾನೀತಾಃ ಸಮರೇ ತಾನ್ ವಿಜಿತ್ಯ ।

ದ್ವ್ಯಷ್ಟೌ ಸಹಸ್ರಾಣಿ ಶತಂ ಚ ರೂಪಶೀಲೋದಾರಾ ಅಕ್ಷತಾಃ ಸದ್ವ್ರತಸ್ಥಾಃ ॥ ೨೦.೧೧೧

ಯುದ್ಧದಲ್ಲಿ ನರಕಾಸುರ ರಾಜರನ್ನು ಗೆದ್ದು ತಂದಿದ್ದ,

ರೂಪ ಶೀಲದಿಂದ ಉತ್ಕೃಷ್ಟರಾದ ಶ್ರೇಷ್ಠ ವ್ರತದಲ್ಲಿ ಇದ್ದ,

ಹದಿನಾರು ಸಾವಿರದ ನೂರು ಕನ್ಯೆಯರ ಕೃಷ್ಣ ನೋಡಿದ.

 

ಕಾಶ್ಚಿತ್ ತತ್ರಾsಸನ್ ದೇವಗನ್ಧರ್ವಕನ್ಯಾಸ್ತಾಸಾಂ ಪ್ರಧಾನ ತ್ವಷ್ಟೃಪುತ್ರೀ ಕಶೇರುಃ ।

ಪುತ್ರಾ ಅಗ್ನೇಃ ಪೂರ್ವಮಾಸಂಶ್ಚ ತೇsಥ ಸ್ತ್ರೀತ್ವಾಪ್ರಾಪ್ತ್ಯೈ ಚಕ್ರುರುಗ್ರಂ ತಪಶ್ಚ॥ ೨೦.೧೧೨

ಅಲ್ಲಿದ್ದ ಹದಿನಾರು ಸಾವಿರದ ನೂರು ಕನ್ಯೆಯರಲ್ಲಿ,

ಕೆಲ ದೇವತೆಗಳು ಮತ್ತು ಗಂಧರ್ವ ಕನ್ಯೆಯರು ಇದ್ದರಲ್ಲಿ.

ಅವರಲ್ಲಿ ಶ್ರೇಷ್ಠಳಾದವಳು ತ್ವಷ್ಟ್ರುವಿನ  ಮಗಳಾದ ಕಶೇರು,

ಅವರೆಲ್ಲರೂ ಪೂರ್ವದಲ್ಲಿ  ಅಗ್ನಿಪುತ್ರರಾಗಿ ಇದ್ದವರು.

ಅವರೆಲ್ಲ ಸ್ತ್ರೀತ್ವ ಪ್ರಾಪ್ತಿಗಾಗಿ ಅತಿ ಉಗ್ರ  ತಪ ಮಾಡಿದವರು.  

 

[ಏಕೆ ಈ ಅಗ್ನಿಪುತ್ರರು ಸ್ತ್ರೀತ್ವ ಬಯಸಿದರು ಎನ್ನುವುದನ್ನು ವಿವರಿಸುತ್ತಾರೆ:]

ಭಾರ್ಯ್ಯಾತ್ವಾರ್ತ್ಥೇ ವಾಸುದೇವಸ್ಯ ಯೋಷಿತ್ತನುಂ ತಾಸಾಮಿಚ್ಛತೀನಾಂ ಸಮೀರಃ ।

ಅದಾದ್ ವರಂ ತಪಸಾssರಾಧಿತಃ ಸನ್ ಸ್ತ್ರೀಭೂತಾಸ್ತೇ ಬದರೀಂ ಸಮ್ಪ್ರಜಗ್ಮುಃ ॥೨೦.೧೧೩

ವಾಸುದೇವನ ಹೆಂಡಂದಿರಾಗಬೇಕೆಂಬುದು ಅವರ ಬಯಕೆ,

ಹೆಣ್ಣಿನ ಶರೀರ ಪ್ರಾಪ್ತಿಗಾಗಿ ತಪಸ್ಸನ್ನಾಚರಿಸಿ ಇಟ್ಟಿದ್ದರು ಕೋರಿಕೆ.

ಅವರ ತಪಸ್ಸಿನ ಆರಾಧ್ಯದೈವವಾಗಿದ್ದವನು ಮುಖ್ಯಪ್ರಾಣ,

ವರ ಪಡೆದವನಿಂದ ಸ್ತ್ರೀದೇಹದೊಂದಿಗೆ ಹೊರಟರು ಬದರಿ ಪ್ರಯಾಣ.

 

ನಾರಾಯಣಂ ತತ್ರ ಶುಶ್ರೂಷಮಾಣಾಃ ಪ್ರಾಪ್ಯಾಪ್ಸರಸ್ತ್ವಂ ರಾಜಕುಲೇಷು ಜಾತಾಃ ।

ಕಾಶ್ಚಿತ್ ಸ್ವರ್ಗ್ಗೇ ತಾ ನಿಶಾಮ್ಯೈವ ಕೃಷ್ಣಂ ವವ್ರುಃ ಪತಿಂ ಸರ್ವಗುಣಾಭಿರಾಮಮ್ ॥೨೦.೧೧೪

ಅಲ್ಲಿ ಅವರೆಲ್ಲರೂ ಸೇವಿಸಿದ್ದು ನಾರಾಯಣನನ್ನು,

ಅವರೆಲ್ಲರೂ ಹೊಂದಿದರಲ್ಲಿ ಅಪ್ಸರತ್ವವನ್ನು.

ಕೆಲವರು ರಾಜರಲ್ಲಿ ಹುಟ್ಟಿದ್ದರು,

ಕೆಲವರು ಸ್ವರ್ಗದಲ್ಲಿ ಹುಟ್ಟಿದ್ದರು.

ಅವರೆಲ್ಲರೂ ಗುಣಸಾಗರ ಕೃಷ್ಣನ ಕಂಡರು,

ಅವನನ್ನೇ ತಮ್ಮ ಗಂಡನನ್ನಾಗಿ ಹೊಂದಿದರು.

 

ಆಜಾನದೇವೈಃ  ಸರ್ವಗುಣೈಃ ಸಮಾಸ್ತಾಃ ಸ್ವಭಾವತೋsಥೇನ್ದಿರಾವೇಶತೋsತಃ ।

ಗುಣಾಧಿಕಾಸ್ತಾಃ ಶಿಭಿಕಾಸು ಕೃಷ್ಣ ಆರೋಪಯಿತ್ವಾ ಪ್ರಾಹಿಣೋದ್ ದ್ವಾರವತ್ಯೈ ॥೨೦.೧೧೫

ಅವರೆಲ್ಲಾ ಸ್ವಭಾವತಃ ಆಜಾನದೇವತೆಗಳಿಗೆ ಸಮಾನರು,

ರಮಾವೇಶ ಪ್ರಯುಕ್ತ ಶ್ರೇಷ್ಠ ಗುಣಗಳನ್ನು ಹೊಂದಿದವರು,

ಶ್ರೀಕೃಷ್ಣನಿಂದ ಪಲ್ಲಕ್ಕಿಗಳಲ್ಲಿ ದ್ವಾರಾವತಿಗೆ ಕಳಿಸಲ್ಪಟ್ಟವರು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula