Tuesday 28 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 184- 188

 ಮಾತಾಪಿತೃಭ್ಯಾಂ ಸಹಿತೋsಥ ಕೃಷ್ಣಸ್ತತ್ರೈವಾsಯಾದ್ ವಾಸವಶ್ಚಾಥ ಶಚ್ಯಾ ।

ಸಮಂ ಮುನೀನ್ದ್ರೈಃ ಫಲ್ಗುನೇನ ಸ್ಮೃತಃ ಸಂಸ್ತತ್ರೈವಾsಗಾತ್ ಪ್ರೀತಿಯುಕ್ತೋ ನಿಶಾಯಾಮ್ ॥೨೦.೧೮೪॥

ಆಗ ವಸುದೇವ ದೇವಕಿಯರ ಕೂಡಿದವನಾದ ಶ್ರೀಕೃಷ್ಣ ಅಲ್ಲಿಗೆ ಬಂದ,

ಇಂದ್ರ ಶಚಿಯರು ಮುನಿಗಳ ಕೂಡಿ ಬಂದರಲ್ಲಿಗೆ ಅರ್ಜುನ ಸ್ಮರಿಸಿದ್ದರಿಂದ.

 

 ಕೃಷ್ಣಸ್ತತಃ ಪುರುಹೂತೇನ ಸಾಕಂ ತಯೋರ್ವಿವಾಹಂ ಕಾರಯಾಮಾಸ ಸಮ್ಯಕ್ ।

ಮಾತಾಪಿತೃಭ್ಯಾಂ ಸಾತ್ಯಕಿನಾsಪಿ ಯುಕ್ತೋ ಮಹೋತ್ಸವೇsನ್ಯಾವಿದಿತೋ ಮುನೀನ್ದ್ರೈಃ  ॥೨೦.೧೮೫॥

ಆನಂತರ ಕೃಷ್ಣ, ಇಂದ್ರ ಮತ್ತು ತಂದೆ ತಾಯಿಯರ ಸಮೇತನಾಗಿ,

ಸಾತ್ಯಕಿ ಮತ್ತು ಇತರ ಕೆಲವು ಮುನಿಶ್ರೇಷ್ಠರಿಂದ ಕೂಡಿದವನಾಗಿ,

ಅರ್ಜುನ ಮತ್ತು ಸುಭದ್ರೆಯರಿಗೆ ಚೆನ್ನಾಗಿ ಮಾಡಿಸಿದ ವಿವಾಹ,

ಬೇರೆ ಇನ್ಯಾರಿಗೂ ತಿಳಿಯದಂತೆ ನಡೆಯಿತು ಆ ಮಹೋತ್ಸವ.

 

ತತಃ ಕೃಷ್ಣಃ ಸ್ಯನ್ದನಂ ಫಲ್ಗುನಾರ್ತ್ಥೇ ನಿಧಾಯ ಸ್ವಂ ಪ್ರಯಯೌ ತದ್ರಜನ್ಯಾಮ್ ।

ಗತೇ ಚ ಶಕ್ರೇ ರಥಮಾರುರೋಹ ಪ್ರಾತಃ ಪಾರ್ತ್ಥಃ ಸಹಿತೋ ಭಾರ್ಯ್ಯಯೈವ ॥೨೦.೧೮೬॥

ಕೃಷ್ಣ ಅರ್ಜುನಗೆ ತನ್ನ ರಥವನ್ನು ಕೊಟ್ಟ,

ಆ ರಾತ್ರಿಯೇ ತಾನಲ್ಲಿಂದ ಹೊರಟುಬಿಟ್ಟ.

ಇಂದ್ರನೂ ಹೊರಟು, ರಾತ್ರಿ ಕಳೆದು ಬೆಳಗಾಯಿತಾಗ,

ಅರ್ಜುನ ಸುಭದ್ರೆಯೊಂದಿಗೆ ಕೂಡಿ ರಥವನ್ನೇರಿದನಾಗ.

 

ಸರ್ವಾಯುಧೈರ್ಯ್ಯುಕ್ತರಥಂ ಸಮಾಸ್ಥಿತೇ ಗೃಹೀತಚಾಪೇ ಫಲ್ಗುನೇ ದ್ವಾರವತ್ಯಾಮ್ ।

ಆಸೀದ್ ರಾವಃ ಕಿಙ್ಕಿಮೇತತ್ ತ್ರಿದಣ್ಡೀ ಕನ್ಯಾಂ ಹರತ್ಯೇಷ ಕೋದಣ್ಡಪಾಣಿಃ ॥೨೦.೧೮೭॥

ಆಯುಧಯುಕ್ತನಾಗಿ ಧನುರ್ಧಾರಿಯಾಗಿ ರಥವೇರಿ ಹೊರಟಿದ್ದ ಅರ್ಜುನ,

ದ್ವಾರಕೆಯ ಆವರಿಸಿದ ಸುದ್ದಿ - ಸನ್ಯಾಸಿ ಮಾಡಿದ್ದಾನೆ ಸುಭದ್ರೆಯ ಅಪಹರಣ.

 

ತತಸ್ತು ತಂ ಸತನುತ್ರಂ ಮಹೇನ್ದ್ರದತ್ತೇ ದಿವ್ಯೇ ಕುಣ್ಡಲೇ ವಾಸಸೀ ಚ ।

ದಿವ್ಯಾನಿ ರತ್ನಾನಿ ಚ ಭೂಷಣಾನಿ ದೃಷ್ಟ್ವಾ ಬಿಭ್ರಾಣಂ ರಕ್ಷಿಣೋsವಾರಯನ್ ಸ್ಮ ॥೨೦.೧೮೮॥

ಇಂದ್ರ ಕೊಟ್ಟ ಅಲೌಕಿಕವಾದ ಕವಚ- ಕುಂಡಲ,

ಪಾರ್ಥ ಧರಿಸಿದ್ದ ಬಟ್ಟೆ ದಿವ್ಯ ರತ್ನಾಭರಣಗಳ.

ಹೀಗೆಲ್ಲಾ ಅಲಂಕೃತನಾದ ಅರ್ಜುನನ ಕಂಡು,

ತಡೆಯಿತು ಅವನ ನಗರ ರಕ್ಷಕ ಸೈನಿಕರ ದಂಡು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula