Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 138 - 142

 ಪ್ರವಿಶ್ಯ ಚೇಶಃ ಸ್ವಪುರೀಂ ಸ ಯಾದವೈಃ ಸುಪೂಜಿತೋsನ್ತಃ ಪುರಮೇತ್ಯ ಚಾಙ್ಗಣೇ

ತರುಂ ಪ್ರಿಯಾಯಾ ನ್ಯದಧಾದ್ ಗೃಹಸ್ಯ ಸಹೈವ ಶೃಙ್ಗೇಣ ಚ ರತ್ನಸದ್ಗಿರೇಃ ॥೨೦.೧೩೮

ಸರ್ವಸಮರ್ಥ ಶ್ರೀಕೃಷ್ಣ ತನ್ನ ಪಟ್ಟಣ ದ್ವಾರಕೆಯ ಪ್ರವೇಶಿಸಿದ,

ಯಾದವರಿಂದ ಪೂಜೆಗೊಂಡವನಾಗಿ ಅಂತಃಪುರ ಹೊಂದಿದ.

ಭಾಮೆಮನೆಯಂಗಳದಿ ರತ್ನಶಿಖರ ಸಮೇತ,

ಕೃಷ್ಣ ನೆಟ್ಟ ವೃಕ್ಷವಾಗಿತ್ತದು ದಿವ್ಯ ಪಾರಿಜಾತ.

 

ಪ್ರದಾಯ ರತ್ನಾನಿ ಚ ಸರ್ವಸಾತ್ತ್ವತಾಂ ಯಥೇಷ್ಟತಸ್ತಾ ಅಪಿ ಕನ್ಯಕಾಃ ಪ್ರಭುಃ ।

ಉದ್ವಾಹ್ಯ ರೇಮೇ ಪೃಥಗೇವ ರತ್ನಪ್ರಾಸಾದಸಂಸ್ಥಾಭಿರನನ್ತರೂಪಃ ॥೨೦.೧೩೯ ॥

ಯಾದವರೆಲ್ಲರಿಗೂ ಅವರಿಚ್ಛೆಯಂತೆ ರತ್ನಗಳ ನೀಡಿದ,

ನರಕನಿಂದ ಬಿಡಿಸಿತಂದ ೧೬೧೦೦ ಕನ್ಯೆಯರ ಮದುವೆಯಾದ.

ಅವರೆಲ್ಲರನ್ನೂ ಪ್ರತ್ಯೇಕವಾದ ರತ್ನದುಪ್ಪರಿಗೆಗಳಲ್ಲಿ ಇರಿಸಿದ,

ಅನಂತರೂಪನಾಗಿ ಅವರೆಲ್ಲರೊಂದಿಗೆ ಕ್ರೀಡಿಸುತ್ತ ರಮಿಸಿದ.

 

ಪೃಥಕ್ಪೃಥಕ್ ತಾಸು ದಶೈವ ಪುತ್ರಕಾನಧತ್ತ ಕನ್ಯಾಮಪಿ ಸರ್ವಶಃ ಪ್ರಭುಃ ।

ಪ್ರದ್ಯುಮ್ನಸಾಮ್ಭಾವ॑ಪಿ ಭಾನುಚಾರುದೇಷ್ಣೌ ಚ ತೇಷಾಂ ನಿತರಾಂ ಗುಣಾಧಿಕಾಃ ॥೨೦.೧೪೦

ಸರ್ವಸಮರ್ಥನಾದ ಶ್ರೀಕೃಷ್ಣಪರಮಾತ್ಮ ತಾನು,

ತನ್ನ ಪ್ರತಿ ಪತ್ನಿಯಲ್ಲಿ ಹತ್ತು ಗಂಡು ಮಕ್ಕಳನ್ನು,

ಕೊಟ್ಟ ಎಲ್ಲರಿಗೂ ಒಂದೊಂದು ಹೆಣ್ಣುಮಗುವನ್ನು.

ಆ ಅಷ್ಟೂ ಕೃಷ್ಣಪತ್ನಿಯರ ನೂರಾರು ಮಕ್ಕಳಲ್ಲಿ ವಿಶೇಷವಾಗಿ,

ಪ್ರದ್ಯುಮ್ನ,ಸಾಂಬ,ಭಾನು,ಚಾರುದೇಷ್ಣರಿದ್ದರು ಗುಣಾಧಿಕರಾಗಿ.

 

[ಭಾನು ಮತ್ತು ಚಾರುದೇಷ್ಣರ ಮೂಲ ಪರಿಚಯಿಸುತ್ತಾರೆ:]

ವಿವಸ್ವತೋ ಯೋsವರಜೋsದಿತೇಃ ಸುತಃ ಖ್ಯಾತಶ್ಚ ನಾಮ್ನಾ ಸವಿತೇತಿ ಕೃಷ್ಣಾತ್ ।

ಜಾತಃ ಸ ಸತ್ಯಾಜಠರೇsತ್ರ ನಾಮ್ನಾ ಭಾನುಸ್ತು ಭೈಷ್ಮ್ಯಾ ಅಪಿ ಚಾರುದೇಷ್ಣಃ ॥ ೨೦.೧೪೧॥

ಭಾನು ಅದಿತಿಯ ಮಗನಾಗಿ, ಸೂರ್ಯನ ತಮ್ಮನಾಗಿದ್ದ,

ಹನ್ನೆರಡು ಮಂದಿ ಆದಿತ್ಯರಲ್ಲಿ ಸವಿತನೆಂದು ಖ್ಯಾತನಾಗಿದ್ದ.

ಅವನ ಹುಟ್ಟು ಕೃಷ್ಣನಿಂದ ಭಾಮೆಯಲ್ಲಿ,

ಚಾರುದೇಷ್ಣನ ಹುಟ್ಟಾಗಿತ್ತು ರುಗ್ಮಿಣಿಯಲ್ಲಿ.

 

ಸ ಚಾರುದೇಷ್ಣೋsಪಿ ಹಿ ವಿಘ್ನರಾಜೋ ಯೇsನ್ಯೇ ಚ ಕೃಷ್ಣಸ್ಯ ಸುತಾಃ ಸಮಸ್ತಾಃ ।

ತೇ ಚೈವ ಗೀರ್ವಾಣಗಣಾಸ್ತಥಾsನ್ಯೇ ಯೇ ದ್ವಾರಕಾಯಾಂ ನಿವಸನ್ತಿ ಸರ್ವೇ ॥ ೨೦.೧೪೨ ॥

ಚಾರುದೇಷ್ಣ ಸಾಕ್ಷಾತ್ ಗಣಪತಿಯಾಗಿದ್ದ ದೇವತೆ, ಕೃಷ್ಣನೆಲ್ಲಾ ಮಕ್ಕಳೂ ದೇವತೆಗಳೆಂಬುದು ವಿಶೇಷತೆ.

ಯಾರೆಲ್ಲಾ ದ್ವಾರಕೆಯಲ್ಲಿ ಮಾಡುತ್ತಿದ್ದರೋ ವಾಸ,

ಅವರೆಲ್ಲಾ ದೇವಗಣವೆಂಬುದು ದೇವತಾ ರಹಸ್ಯ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula