Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 121 - 125

 ತಯಾsಚ್ಯುತೋsಸೌ ಕನಕಾವದಾತಯಾ ಸುಕುಙ್ಕುಮಾದಿಗ್ಧಪಿಶಙ್ಗವಾಸಸಾ ।

ಪೂರ್ಣ್ಣೇನ್ದುಕೋಟ್ಯೋಘಜಯನ್ಮುಖಾಬ್ಜಯಾ ರೇಮೇsಮಿತಾತ್ಮಾ ಜಗದೇಕಸುನ್ದರಃ೨೦.೧೨೧

ಸಮಸ್ತ ಜಗತ್ತಿನಲ್ಲಿಯೇ ಅತ್ಯಂತ ಸುಂದರ,

ಅನಂತರೂಪರಾಶಿ ಅಚ್ಯುತವಾದ ಬಂಗಾರ,

ಕಾಂತಿಯುಕ್ತ ಕುಂಕುಮಲೇಪಿತ ಪೀತಾಂಬರಧರ,

ಕೋಟಿ ಚಂದ್ರರ ಗೆಲ್ಲಬಲ್ಲ ಕೃಷ್ಣನ ಮುಖಚರ್ಯ,

ಆ ಕೃಷ್ಣ ಭಾಮೆಯೊಡಗೂಡಿ ಮಾಡಿದ ವಿಹಾರ.

 

ಸರ್ವರ್ತ್ತುನಿತ್ಯೋದಿತಸರ್ವವೈಭವೇ ಸುರತ್ನಚಾಮೀಕರವೃಕ್ಷಸದ್ವನೇ ।

ಸದೈವ ಪೂರ್ಣ್ಣೇನ್ದುವಿರಾಜಿತೇ ಹರಿಶ್ಚಚಾರ ದೇವ್ಯಾ ಪವನಾನುಸೇವಿತೇ ॥ ೨೦.೧೨೨

ಎಲ್ಲಾ ಋತುಗಳ ಎಲ್ಲಾ ವೈಭವಗಳ ಆ ತಾಣ,

ರತ್ನ ಸ್ವರ್ಣವೃಕ್ಷಗಳುಳ್ಳ ಚಂದ್ರಕಾಂತಿಯ ಉದ್ಯಾನ.

ತಂಗಾಳಿಯುಕ್ತ ತೋಟವಾಗಿತ್ತು ಅತ್ಯಂತ ಮನೋಹರ,

ಆ ಉದ್ಯಾನದಲ್ಲಿ ಭಾಮೆಯೊಂದಿಗೆ ಕೃಷ್ಣ ಮಾಡಿದ ವಿಹಾರ.

 

ವಿದೋಷಸಂವಿತ್ತನುರತ್ರ ಸತ್ತರುಂ ದದರ್ಶ ಸತ್ಯಾsಮೃತಮನ್ಥನೋದ್ಭವಮ್ ।

ಸ ಪಾರಿಜಾತಂ ಮಣಿಕಾಞ್ಚನಾತ್ಮಕಂ ಸಮಸ್ತಕಾಮಪ್ರದಮಾರ್ತ್ತಿಹಾರಿಣಮ್ ॥ ೨೦.೧೨೩

ಯಾವುದೇ ದೋಷವಿಲ್ಲದ ಆ ಉದ್ಯಾನ,

ಭಾಮೆಯಾದರೋ ಮೈವೆತ್ತುಬಂದವಳು ಜ್ಞಾನ.

ಅಮೃತಮಥನದಲ್ಲಿ ಹುಟ್ಟಿದ ಬಂಗಾರ ಹಾಗೂ ಮುತ್ತುಗಳು,

ಅಭೀಷ್ಟಗಳೀವ ಸಂಕಟಮೋಚಕ ಪಾರಿಜಾತ ವೃಕ್ಷವ ಕಂಡಳು.

 

ದೃಷ್ಟ್ವೈವ ತಂ ಸುಸ್ಮಿತಚನ್ದ್ರಿಕಾಸ್ಫುರನ್ಮುಖಾರವಿನ್ದಾsಸಿತಲೋಲಲೋಚನಾ ।

ಕಪೋಲನಿರ್ಭಾತಚಲತ್ಸುಕುಣ್ಡಲಾ ಜಗಾದ ದೇವಾಧಿಪತಿಂ ಪತಿಂ ಸತೀ ॥ ೨೦.೧೨೪

ಮುಗುಳುನಗೆಯಿಂದ ಬೆಳದಿಂಗಳಂತೆ ಕಾಣುವ ಚೆಲುಮುಖದವಳು,

ಕಪ್ಪಾದ ಚಂಚಲ ಕಣ್ಣುಳ್ಳ ಕುಂಡಲಗಳ ಬಿಂಬ ತೋರುವ ಕೆನ್ನೆಯವಳು,

ಅಂತಹಾ ಸತ್ಯಭಾಮೆ ಪಾರಿಜಾತ ವೃಕ್ಷವ ಕಂಡಳು,

ದೇವತೆಗಳ ದೊರೆ ಶ್ರೀಕೃಷ್ಣಗೆ ಹೀಗೆ ಹೇಳಿದಳು.

 

ತರುರ್ಜ್ಜಗಜ್ಜೀವದ ಮೇ ಗೃಹಾಙ್ಗಣೇ ಸಂಸ್ಥಾಪನೀಯೋsಯಮಚಿನ್ತ್ಯಪೌರುಷ ।

ಇತೀರಿತಸ್ತಾಂ ಕಲಶೋಪಮಸ್ತನೀಮಾಲಿಙ್ಗ್ಯ ದೇವಸ್ತರುಮುದ್ಬಬರ್ಹ ॥ ೨೦.೧೨೫

ಜಗತ್ತಿಗೆ ಜೀವನವನ್ನೀಯುವ ಆ ದಾತ,

ಚಿಂತಿಸಲಸಾಧ್ಯವಾದ ಪೌರುಷದ ತಾತ.

ಕೃಷ್ಣಾ, ನನ್ನ ಮನೆ ಮುಂದಿನ ಅಂಗಳದಲ್ಲಿ,

ಈ ಪಾರಿಜಾತ ಮರ ಸ್ಥಾಪಿತವಾಗಬೇಕಲ್ಲಿ.

ತುಂಬಿದೆದೆಗಾತಿ ಭಾಮೆ ಹೇಳಿದಳು ಮೇಲಿನ ಮಾತ,

ಅವಳನ್ನಾಲಿಂಗಿಸಿದ ಶ್ರೀಕೃಷ್ಣ ಪಾರಿಜಾತ ವೃಕ್ಷವ ಕಿತ್ತ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula