Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 126 - 131

 ಸ ತೇನ ವೃಕ್ಷೇಣ ಸಹೈವ ಕೇಶವಸ್ತಯಾ ಚ ದೇವ್ಯಾssರುಹದಗ್ರ್ಯಪೌರುಷಮ್ ।

ಖಗೇಶ್ವರಂ ತಚ್ಚ ನಿಶಮ್ಯ ಶಚ್ಯಾ ಪ್ರಚೋದಿತೋ ವಾಸವ ಆಗಮತ್ ಸುರೈಃ ॥ ೨೦.೧೨೬  

ನಾರಾಯಣ ಪಾರಿಜಾತವೃಕ್ಷ ಮತ್ತು ಸತ್ಯಭಾಮೆಯಿಂದೊಡಗೂಡಿ ಗರುಡನನ್ನೇರಿದ,

ಅದನ್ನು ಕೇಳಿ ಶಚಿಯಿಂದ ಪ್ರಚೋದಿಸಲ್ಪಟ್ಟು ಇಂದ್ರ ದೇವತೆಗಳೊಂದಿಗೆ ಯುದ್ಧಕೆ ಬಂದ.

 

ತಾನಾಸುರಾವೇಶಯುತಾನ್ ಹರೇಶ್ಚ ಬಲಪ್ರಕಾಶಾಯ ಸಮುದ್ಯತಾನ್ ಸುರಾನ್ ।

ನ್ಯವಾರಯಚ್ಛಾರ್ಙ್ಗಶರಾಸನಚ್ಯುತೈರ್ಹರಿಪ್ರಿಯಾ ಬಾಣವರೈಃ ಸಮಸ್ತಶಃ ॥ ೨೦.೧೨೭  

ಅಸುರಾವೇಶದಿಂದ ಕೂಡಿದ ದೇವತೆಗಳು ಭಗವಂತನೆದುರು ಬಲ ತೋರಲು ಬಂದಾಗ , ಸತ್ಯಭಾಮೆ ಶಾರ್ಙ್ಗವೆಂಬ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳಿಂದ ಅವರ ತಡೆದಳಾಗ.

 

ನಿರಾಯುಧಂ ವೈಶ್ರವಣಂ ಚಕಾರ ಚಿಕ್ಷೇಪ ಚಾಬ್ಧೌ ಗರುಡೋ ಜಲೇಶ್ವರಮ್ ।

ಪ್ರಧಾನವಾಯೋಸ್ತನಯಂ ತು ವಾಯುಂ ಕೋಣಾಧಿಪಂ ವಹ್ನಿಯಮಾದಿಕಾನಪಿ ॥ ೨೦.೧೨೮  

ಸತ್ಯಭಾಮೆ ಕುಬೇರನನ್ನು ಮಾಡಿದಳು ನಿರಾಯುಧ,

ಗರುಡದೇವ ವರುಣನನ್ನು ಸಮುದ್ರದಲ್ಲಿ ಎಸೆದ. ಮುಖ್ಯಪ್ರಾಣನ ಮಗನಾದ (ಮರೀಚಿ)ಪ್ರವಹ ವಾಯುವನ್ನು ,

ದಿಕ್ಕುಗಳಧಿಪತಿಯಾದ  ಅಗ್ನಿ, ಯಮ ಮೊದಲಾದವರನ್ನು,

ಸತ್ಯಭಾಮೆ ಎದುರಿಸಿದಳು ಸಮರ್ಥವಾಗಿ ಅವರೆಲ್ಲರನ್ನು.

 

ವಿಬೋಧ್ಯ ಶಾರ್ಙ್ಗೋತ್ಥರವೈಃ ಸ್ವಕಾಂ ತನುಮಾವೇಶಿತಾನಾಮಸುರೈರಗಾದ್ಧರಿಃ ।

ತೇ ಬೋಧಿತಾಸ್ತೇನ ರಣಂ ವಿಸೃಜ್ಯ ಯಯುರ್ವಿದಿತ್ವಾ ತಮನಾದಿಪೂರುಷಮ್ ॥ ೨೦.೧೨೯  

ಶಾರ್ಙ್ಗಧನಸ್ಸಿನ ಠೇಂಕಾರದಿಂದಲೇ ತಾನಾರೆಂದು ಅಸುರಾವೇಶದ ದೇವತೆಗಳಿಗೆ ತೋರಿ ತೆರಳಿದ ಕೃಷ್ಣ,

ಕೃಷ್ಣನೇ ಅನಾದಿಪುರುಷನೆಂದು ತಿಳಿದ ದೇವತೆಗಳು ತೆರಳಿದರು ಕಳಚಿಕೊಂಡು ಅಸುರಾವೇಶದ ಉಷ್ಣ.

 

ಶಿವಂ ಚ ಶಕ್ರಾರ್ತ್ಥಮುಪಾಗತಂ ಹರಿರ್ವ್ಯದ್ರಾವಯಚ್ಛಾರ್ಙ್ಗವಿನಿಃಸೃತೈಃ ಶರೈಃ ।

ಸವಾಹನೋ ದೂರತರೇ ನಿಪಾತಿತೋ ಗರುತ್ಮತಾ ಶಮ್ಭುರಗಾಚ್ಛರಾಹತಃ ॥ ೨೦.೧೩೦  

ಇಂದ್ರನ ಸಹಾಯಕ್ಕಾಗಿ ಬಂದಿದ್ದ ಸದಾಶಿವನನ್ನು, ಕೃಷ್ಣ ಶಾರ್ಙ್ಗದಿಂದ ಬಿಟ್ಟ ಬಾಣಗಳಿಂದ ಓಡಿಸಿದನು.

ನಂದಿಯ ಸಮೇತ ಶಿವ ಗರುಡನಿಂದ ದೂರದಲ್ಲಿ ಬಿದ್ದ,

ಆನಂತರ ಸದಾಶಿವನು ಅಲ್ಲಿಂದ ಎದ್ದು ಹೊರಟುಹೋದ.

 

ವಿದ್ರಾವಿತೇ  ಬಾಣಗಣೈಶ್ಚ ಶೌರಿಣಾ ಹರೇ ಹರೌ ವಜ್ರಮವಾಸೃಜದ್ ದ್ರುತಮ್ ।

ಶಕ್ರೋsಗ್ರಹೀತ್ ತಂ ಪ್ರಹಸನ್ ಜನಾರ್ದ್ದನಃ ಕರೇಣ ವಾಮೇನ ಸ ಚಾಪಜಗ್ಮಿವಾನ್ ॥೨೦.೧೩೧

ಹೀಗೆ ಬಾಣಗಳಿಗೆ ಸಿಲುಕಿ ಸದಾಶಿವ ಓಡುತ್ತಿರುವಾಗ,

ಇಂದ್ರ ಕೃಷ್ಣನ ಮೇಲೆ ವಜ್ರಾಯುಧವ ಪ್ರಯೋಗಿಸಿದನಾಗ.

ಕೃಷ್ಣ ನಗುತ್ತಾ, ತನ್ನ ಎಡಗೈಯಿಂದ ವಜ್ರವನ್ನು ಹಿಡಿದ.

ಆಗ ಇಂದ್ರ ತಾನು ಅಲ್ಲಿಂದ  ಪಲಾಯನವ ಮಾಡಿದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula