Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 88 - 97

ನಿತ್ಯೈವ ಯಾ ಪ್ರಕೃತಿಃ ಸ್ವೇಚ್ಛಯೈವ ಜಗಚ್ಛಿಕ್ಷಾರ್ತ್ಥಂ ದ್ವಾದಶೀಂ ಭೀಮಸಞ್ಜ್ಞಾಮ್ ।

ಉಪೋಷ್ಯ ಬಭ್ರೇ ಕೋಟಿಧಾರಾಜಲಸ್ಯ ವಿಷ್ಣೋಃ ಪ್ರೀತ್ಯರ್ತ್ಥಂ ಸೈವ ಹಿ ಸತ್ಯಭಾಮಾ ॥೨೦.೮೮

ಸತ್ಯಭಾಮೆ ನಿತ್ಯಳಾಗಿರುವ ಮಹಾಲಕ್ಷ್ಮಿಯವಳು  ನಾಶರಹಿತ,

ಲೋಕಶಿಕ್ಷಣ ಹರಿಪ್ರಿತಿಗಾಗಿ ಕೈಗೊಂಡಳು ಭೀಮದ್ವಾದಶಿ ವ್ರತ.

ಮಾಡಿದಳು ಏಕಾದಶಿ ಉಪವಾಸದೊಂದಿಗೆ ಕೋಟಿಧಾರಾ ಜಲವ್ರತ.

 

ತಯಾ ಯುಕ್ತೋ ಗರುಡಸ್ಕನ್ಧಸಂಸ್ಥೋ ದೂರಾನುಯಾತೋ ವಜ್ರಭೃತಾsಪ್ಯನುಜ್ಞಾಮ್ ।

ದತ್ವಾsಮುಷ್ಮೈ ಪ್ರಯಯೌ ವಾಯುಜುಷ್ಟಾಮಾಶಾಂ ಕೃಷ್ಣೋ ಭೌಮವಧೇ ಧೃತಾತ್ಮಾ ॥೨೦.೮೯

ಸತ್ಯಭಾಮೆ ಸಮೇತ ಶ್ರೀಕೃಷ್ಣ ಗರುಡನ ಹೆಗಲೇರಿದ,

ಅನುಸರಿಸಿದ ವಜ್ರಧಾರಿಗೆ ತನ್ನ ಲೋಕ್ಕಕ್ಕೆ ಕಳುಹಿಸಿದ.

ನರಕನ ವಧೆಯ ಸಂಕಲ್ಪದಿ ವಾಯವ್ಯಕ್ಕೆ

ತಾ ತೆರಳಿದ.

 

ಭೌಮೋ ಹ್ಯಾಸೀದ್ ಬ್ರಹ್ಮವರಾದವದ್ಧ್ಯೋ ನ ಶಸ್ತ್ರಭೃಜ್ಜೀಯಸ ಇತ್ಯಮುಷ್ಮೈ ।

ದತ್ತೋ ವರೋ ಬ್ರಹ್ಮಣಾ ತದ್ವದೇವ ತಸ್ಯಾಮಾತ್ಯಾನಾಂ ತದ್ವದವದ್ಧ್ಯತಾ ಚ ॥೨೦.೯೦

ನರಕಾಸುರನಿಗಿತ್ತು ಅವಧ್ಯನಾಗಿರುವ ಬ್ರಹ್ಮ ವರಬಲ,

ಶಸ್ತ್ರಧಾರಿಯಾಗಿ ನಿಂತವಗೆ ಎದುರಾಳಿಗಳಿಂದ ಸೋಲಿಲ್ಲ.

ಅವನ ಮಂತ್ರಿಗಳಿಗೆ ಕೂಡಾ ಇತ್ತು ಅವಧ್ಯತ್ವದ ವರಬಲ.

 

ಭೌಮೇನ ಜಯ್ಯತ್ವಮಪಿ ಹ್ಯಮೀಷಾಂ ದತ್ತಂ ಭೌಮಾಯ ಬ್ರಹ್ಮಣಾ ಕ್ರೋಡರೂಪಾತ್ ।

ವಿಷ್ಣೋರ್ಜ್ಜಾತಾಯಾಸ್ಯ ದುರ್ಗ್ಗಂ ಚ ದತ್ತಂ ಪ್ರಾಗ್ಜ್ಯೋತಿಷಂ ನಾಮ ಪುರಂ ಸಮಸ್ತೈಃ ॥೨೦.೯೧

ಅವನ ಮಂತ್ರಿಗಳಿಗಿದ್ದರೂ ಇತರರಿಂದ ಸೋಲದ ಸಾಯದ ವರ,

ಅವನ ದಾಸರಾಗಿದ್ದರು-ನರಕ ಮಾಡಬಲ್ಲನಾಗಿದ್ದ

ಅವರ ಸಂಹಾರ.

ವರಾಹರೂಪಿಯಾದ ವಿಷ್ಣುವಿನಿಂದ ಹುಟ್ಟಿದ್ದ ಈ ನರಕಾಸುರ,

ಕೊಡಲ್ಪಟ್ಟಿತ್ತವಗೆ ಅನ್ಯರಿಗೆ ದುರ್ಗಮ, ಸಮೃದ್ಧ ಪ್ರಾಗ್ಜ್ಯೋತಿಷಪುರ.

 

ಆಸೀದ್ ಬಾಹ್ಯೇ ಗಿರಿದುರ್ಗ್ಗಂ ತದನ್ತಃ ಪಾನೀಯದುರ್ಗ್ಗಂ ಮೌರವಂ ಪಾಶದುರ್ಗ್ಗಮ್ ।

ತಸ್ಯಾಪ್ಯನ್ತಃ ಕ್ಷುರಧಾರೋಪಮಂ ತತ್ಪಾಶಾಶ್ಚ ತೇ ಷಟ್ಸಹಸ್ರಾಶ್ಚ ಘೋರಾಃ  ೨೦.೯೨

ಆ ಪಟ್ಟಣದ ಹೊರಭಾಗದಲ್ಲಿ ಬೆಟ್ಟಗಳ ಕೋಟೆ,

ಅದರ ಒಳಭಾಗದಲ್ಲಿ (ಜಲದುರ್ಗ )ನೀರಕೋಟೆ.

ತದನಂತರ ಮುರ ನಿರ್ಮಿತವಾದ ಪಾಶಕೋಟೆ,

ಅತಿ ಹರಿತವಾದ ಆರು ಸಾವಿರ ಅಲಗುಕೋಟೆ.

 

ಅಭೇದ್ಯತ್ವಮರಿಭಿರತಾರ್ಯ್ಯತಾ ಚ ದತ್ತಾ ದುರ್ಗ್ಗಾಣಾಂ ಬ್ರಹ್ಮಣಾssರಾಧಿತೇನ

ತಸ್ಯಾಮಾತ್ಯಾಃ ಪೀಠಮುರೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ಶೂರಾಃ ೨೦.೯೩

ನರಕಾಸುರ ಬ್ರಹ್ಮದೇವನ ಕುರಿತು ಮಾಡಿದ ತಪಸ್ಸಿಗೆ,

ದಾಟಲಸಾಧ್ಯವಾದ ಆ ಅಭೇದ್ಯಕೋಟೆ ಬ್ರಹ್ಮಕೊಡುಗೆ.

ಪೀಠ, ಮುರ, ನಿಸುಂಭ, ಹಯಗ್ರೀವ ಮತ್ತು ಪಂಚಜನ,

ನರಕಾಸುರನ ಮಂತ್ರಿಗಳಾಗಿದ್ದವರು ಇವರು ಐದುಜನ.

 

ಸಙ್ಕಲ್ಪ್ಯ ತಾನ್ ಲೋಕಪಾಲಾನಹಂ ಚ ಬ್ರಹ್ಮೇತ್ಯದ್ಧಾ ಭಾಷಮಾಣಃ ಸ ಆಸ್ತೇ

ಹನ್ತುಂ ಕೃಷ್ಣೋ ನರಕಂ ತತ್ರ ಗತ್ವಾ ಗಿರಿದುರ್ಗ್ಗಂ ಗದಯಾ ನಿರ್ಬಿಭೇದ ೨೦.೯೪

ಆ ಐದುಜನರನ್ನು ನರಕಾಸುರ ಲೋಕಪಾಲಕರು ಎನ್ನುತ್ತಿದ್ದ,

ತನ್ನನ್ನು ತಾನೇ ಬ್ರಹ್ಮನೆಂದು ದರ್ಪದಿಂದ ಹೇಳಿಕೊಳ್ಳುತ್ತಿದ್ದ.

ಇಂತಹ ನರಕನ ಕೊಲ್ಲಲೆಂದೇ ಕೃಷ್ಣ ಅಲ್ಲಿಗೆ ಬಂದ,

ತನ್ನ ಗದೆಯಿಂದ ಬೆಟ್ಟದ ಕೋಟೆಯ ಒಡೆದು ಹಾಕಿದ.

 

ವಾಯವ್ಯಾಸ್ತ್ರೇಣೋದಕಂ ಶೋಷಯಿತ್ವಾ ಚಕರ್ತ್ತ ಖಡ್ಗೇನ ಮುರಸ್ಯ ಪಾಶಾನ್

ಅಥಾಭಿಪೇತುರ್ಮ್ಮುರಪೀಠೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ದೈತ್ಯಾಃ ೨೦.೯೫

ಜಲಕೋಟೆಯ ಒಣಗಿಸಿತು ಕೃಷ್ಣನ ವಾಯವ್ಯಾಸ್ತ್ರ,

ಮುರನ ಪಾಶಕೋಟೆಯ ಕತ್ತರಿಸಿತು ಖಡ್ಗವೆಂಬ ಅಸ್ತ್ರ.

ಮುರ, ಪೀಠ,ನಿಸುಂಭ, ಹಯಗ್ರೀವ ಮತ್ತು ಪಂಚಜನ,

ಕೃಷ್ಣನ ಮೇಲೆ ಯುದ್ಧಕೆ ಬಂದರು ದೈತ್ಯರಾದ ಆ ಐದು ಜನ.

 

ತಾಞ್ಛೈಲಶಸ್ತ್ರಾಸ್ತ್ರಶಿಲಾಭಿವರ್ಷಿಣಶ್ಚಕ್ರೇ ವ್ಯಸೂಂಶ್ಚಕ್ರನಿಕೃತ್ತಕನ್ಧರಾನ್

ತೇಷಾಂ ಸುತಾಃ ಸಪ್ತಸಪ್ತೋರುವೀರ್ಯ್ಯಾ ವರಾದವದ್ಧ್ಯಾ ಗಿರಿಶಸ್ಯಾಭಿಪೇತುಃ ೨೦.೯೬

ಬೆಟ್ಟ ಬಂಡೆ ಶಸ್ತ್ರಾಸ್ತ್ರಗಳ ಸುರಿಸುತ್ತಾ ಬರುತ್ತಿದ್ದವರ,

ಕತ್ತರಿಸಿ ಪ್ರಾಣ ತೆಗೆಯಿತವರೆಲ್ಲರ ಕೃಷ್ಣ ಬಿಟ್ಟಂಥ ಚಕ್ರ.

ಆ ಐದು ಜನರ ಮಕ್ಕಳಾಗಿದ್ದವರು ಏಳೇಳು ಜನ,

ರುದ್ರವರದಿ ಅವಧ್ಯರಾದವರಿಂದ ಯುದ್ಧಕೆ ಆಗಮನ.

 

ತಾನಸ್ತ್ರಶಸ್ತ್ರಾಭಿಮುಚಃ ಶರೋತ್ತಮೈಃ ಸಮರ್ಪ್ಪಯಾಮಾಸ ಸ ಮೃತ್ಯವೇsಚ್ಯುತಃ

ಹತ್ವಾ ಪಞ್ಚತ್ರಿಂಶತೋ ಮನ್ತ್ರಿಪುತ್ರಾನ್ ಜಗಾಮ ಭೌಮಸ್ಯ ಸಕಾಶಮಾಶು ೨೦.೯೭

ಅಸ್ತ್ರ ಶಸ್ತ್ರ ಎಸೆಯುತ್ತ ಬರುತ್ತಿದ್ದ ಮೂವತ್ತೈದು ಮಂತ್ರಿ ಮಕ್ಕಳನ್ನ,

ಕೊಂದು ಹಾಕಿದ ಕೃಷ್ಣ ಬಿಡುತ್ತಾ ತನ್ನ ಶ್ರೇಷ್ಠವಾದ  ಬಾಣಗಳನ್ನ.

ಅವರನ್ನೆಲ್ಲ ವಧಿಸಿ ನರಕಾಸುರನ ಬಳಿ ವೇಗದಿ ಸಾಗಿದ ಕೃಷ್ಣ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula