Tuesday 28 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 178 - 183

 ಪ್ರದ್ಯುಮ್ನಮ್ನಸಾಮ್ಬಪ್ರಮುಖಾಶ್ಚ ವಞ್ಚಿತಾ ಯಯುಸ್ತೀರ್ತ್ಥಾರ್ತ್ಥಂ ರಾಮಯುಕ್ತಾಃ ಸಮಗ್ರಾಃ ।

ಪಿಣ್ಡೋದ್ಧಾರಂ ತತ್ರ ಮಹೋತ್ಸವೇಷ್ವೇವಾsವರ್ತ್ತಯತ್ಸು ಕ್ವಚಿದೂಚೇ ಸುಭದ್ರಾ ॥೨೦.೧೭೮॥

ಪ್ರದ್ಯುಮ್ನ ಸಾಂಬ ಮೊದಲಾದವರು ಕೃಷ್ಣನಿಂದ ವಂಚನೆಗೊಳಗಾದವರು,

ಒಮ್ಮೆ ಬಲರಾಮನೊಡಗೂಡಿ ಪಿಂಡೋದ್ಧಾರ ಕ್ಷೇತ್ರಕ್ಕೆ ಸ್ನಾನಕ್ಕೆ ಹೋದರು.

ಅಲ್ಲಿ ದೊಡ್ಡದಾದ ಜಾತ್ರೆಯೇ ನಡೆಯುತ್ತಿತ್ತು,

ಸುಭದ್ರೆ ಕೇಳಿದಳು ಅರ್ಜುನಗೆ ಕೆಳಕಂಡ ಮಾತು.

 

ಯತೇ ತೀರ್ತ್ಥಾನಾಚರನ್ ಬಾನ್ಧವಾಂಸ್ತ್ವಮದ್ರಾಕ್ಷೀರ್ನ್ನಃ ಕಚ್ಚಿದಿಷ್ಟಾನ್ ಸ್ಮ ಪಾರ್ತ್ಥಾನ್ ।

ಕುನ್ತೀಂ ಕೃಷ್ಣಾಂ ಚೇತ್ಯಾಹ ಪೃಷ್ಟಃ ಸ ಪಾರ್ತ್ಥ ಓಮಿತ್ಯೇತೇಷಾಮಾಹ ಚಾನಾಮಯಂ ಸಃ ॥೨೦.೧೭೯॥

 ಶ್ರೇಷ್ಠ ಯತಿಯೇ ನೀನು ತೀರ್ಥಯಾತ್ರೆಯ ಮಾಡುತ್ತಿರುವಾಗ,

ಘಟಿಸಿತೇ ಎಲ್ಲಾದರೂ ನಮ್ಮ ಪ್ರಿಯ ಪಾಂಡವರ ಕಾಣುವ ಯೋಗ.

ಕಂಡೆಯಾ ಎಲ್ಲಿಯಾದರೂ ಕುಂತಿದೇವಿ ದ್ರೌಪದಿಯರನ್ನು,

ಹೌದೆಂದ ಅರ್ಜುನ ಹೇಳಿದ ಅವರ ಕ್ಷೇಮ ಸಮಾಚಾರವನ್ನು.

 

ಭೂಯಃ ಸಾsವಾದೀದ್ ಭಗವನ್ನಿನ್ದ್ರಸೂನುರ್ಗ್ಗತಸ್ತೀರ್ತ್ಥಾರ್ತ್ಥಂ  ಬ್ರಾಹ್ಮಣೇಭ್ಯಃ ಶ್ರುತೋ ಮೇ ।

ಕಚ್ಚಿದ್ ದೃಷ್ಟೋ ಭವತೇತ್ಯೋಮಿತಿ ಸ್ಮ ಪಾರ್ತ್ಥೋsಪ್ಯೂಚೇ ಕ್ವೇತಿ ಸಾsಪೃಚ್ಛದೇನಮ್ ॥೨೦.೧೮೦॥

ಸುಭದ್ರೆ ಕೇಳುತ್ತಾಳೆ -ಪೂಜ್ಯರೇ ತೀರ್ಥಯಾತ್ರೆಗೆ ಹೋಗಿದ್ದಾನಂತೆ ಅರ್ಜುನ,

ನಿಮ್ಮ ಯಾತ್ರಾಜಾಡಿನಲ್ಲಿ ಎಲ್ಲಾದರೂ ಆಯಿತೇ ಅರ್ಜುನನನ ದರ್ಶನ.

ಆಗ ಪಾರ್ಥ ಅವಳಿಗೆ ಉತ್ತರಿಸುತ್ತಾನೆ -ಹೌದು,

ಸುಭದ್ರೆ ಕೇಳುತ್ತಾಳೆ ಎಲ್ಲಿ ನೋಡಿದಿರಿ -ಎಂದು.

 

ಅತ್ರೈವೇತಿ ಸ್ಮಯಮಾನಂ ಚ ಪಾರ್ತ್ಥಂ ಪುನಃಪುನಃ ಪರ್ಯ್ಯಪೃಚ್ಛಚ್ಛುಭಾಙ್ಗೀ ।

ಸೋsಪ್ಯಾಹೋನ್ಮತ್ತೇ ಸೋsಸ್ಮಿ ಹೀತಿ ಸ್ಮಯಂಸ್ತಾಂ ಫುಲ್ಲಾಕ್ಷೀ ತಂ ಸಾ ದದರ್ಶಾತಿಹೃಷ್ಟಾ ॥೨೦.೧೮೧॥

‘ಇಲ್ಲಿಯೇ’ ಎಂದು ಅರ್ಜುನ ಸನ್ಯಾಸಿ ಹೇಳುತ್ತಾನೆ.

'ಎಲ್ಲಿ ಎಲ್ಲಿ' -ಎಂದು ಮತ್ತೆ ಮತ್ತೆ ಸುಭದ್ರೆಯ ಪ್ರಶ್ನೆ.

ನಗುತ್ತಾ ಅರ್ಜುನ ಹೇಳುತ್ತಾನೆ- 'ಹುಚ್ಚಿಯೇ ಅವನೇ ನಾನು',

ಸಂತಸದ ತೆರೆದ ಕಂಗಳಿಂದವನ ನೋಡುತ್ತಾಳೆ ಸುಭದ್ರೆ ತಾನು.

 

ತತೋ ಹರ್ಷಾಲ್ಲಜ್ಜಯಾ ಚೋತ್ಪಲಾಕ್ಷೀ ಕಿಞ್ಚಿನ್ನೋಚೇ  ಪಾರ್ತ್ಥ ಏನಾಮುವಾಚ ।

ಕಾಮಾವಿಷ್ಟೋ ಮುಖ್ಯಕಾಲೋ ಹ್ಯಯಂ ನಾವುದ್ವಾಹಾರ್ತ್ಥೋಕ್ತಸ್ತ್ವಿತಿ ಸಾ ಚೈನಮಾಹ ॥೨೦.೧೮೨॥

ಸುಭದ್ರೆ ಆನಂದದಿಂದ ನಾಚಿಕೆಯಿಂದ ವಹಿಸಿದಳು ಮೌನ,

ಮಾತನಾಡುತ್ತಾನೆ ಆಗ ಅನುರಾಗ ತುಂಬಿದಂಥ ಅರ್ಜುನ.

ನಮ್ಮಿಬ್ಬರಲ್ಲಿ ಈಗ ಪ್ರೀತಿ ಪ್ರೇಮ ಅಂಕುರಿಸಿದ ಸಮಯ,

ಪ್ರಶಸ್ತವಾಗಿ ಕೂಡಿಬಂದಂತಿದೆ ಈಗ ನಮ್ಮಿಬ್ಬರ ವಿವಾಹ.

ಸುಭದ್ರೆ ಬಿಚ್ಚಿಡುತ್ತಾಳೆ ಅರ್ಜುನನಲ್ಲಿ ತನ್ನ ಮನದ ಭಾವ.

 

ನಾತಿಕ್ರಮೋ ವಾಸುದೇವಸ್ಯ ಯುಕ್ತಸ್ತಸ್ಮಾತ್ ತೇನ ಸ್ವಪಿತೃಭ್ಯಾಂ ಚ ದತ್ತಾಮ್ ।

ಯುಕ್ತೋ ನಿಜೈರ್ಬನ್ಧುಭಿಶ್ಚೋತ್ಸವೇ ಮಾಂ ಸಮುದ್ವಹೇತ್ಯಥ ಕೃಷ್ಣಂ ಸ ದದ್ಧ್ಯೌ ॥೨೦.೧೮೩॥

ಕೃಷ್ಣನನ್ನು ಬಿಟ್ಟು ನಾವೇನು ಮಾಡಿದರೂ ಅದು ಯುಕ್ತವಲ್ಲ,

ಕೃಷ್ಣ, ನನ್ನ ಹೆತ್ತವರು, ಬಂಧುಗಳಿಂದ ಮದುವೆ ನಡೆಯಬೇಕಲ್ಲ!.

ವಿದ್ಯುಕ್ತವಾಗಿ ನೀನು ಉತ್ಸವದಲ್ಲಿ ನನ್ನ ಮದುವೆಯಾಗು,

ಅರ್ಜುನನ ಮನದಲ್ಲಾಗ ಬಂತು ಕೃಷ್ಣ ಸ್ಮರಣೆಯ ಕೂಗು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula