ತಾವೇವ ಜಾತೌ ಭರತಶ್ಚ ನಾಮ್ನಾ ಶತ್ರುಘ್ನ ಇತ್ಯೇವ ಚ ರಾಮತೋsನು ।
ಪೂರ್ವಂ ಸುಮಿತ್ರಾತನಯಶ್ಚ ಶೇಷಃ ಸ ಲಕ್ಷ್ಮಣೋ ನಾಮ ರಘೂತ್ತಮಾದನು
॥೩.೭೬॥
ಆ ಪ್ರದ್ಯುಮ್ನಾ
ಅನಿರುದ್ಧರೇ ಭರತ ಮತ್ತು ಶತ್ರುಘ್ನರಾದರು.
ರಾಮಾವತಾರದ ನಂತರ
ಹುಟ್ಟಿ ಬಂದು ಅವನ ತಮ್ಮಂದಿರಾದರು.
ಸುಮಿತ್ರೆಯ ಮಗನಾಗಿ
ಬಂದ ಲಕ್ಷ್ಮಣ ಹಿಂದೆ ಶೇಷ ದೇವರಾಗಿದ್ದರು.
ಕೌಸಲ್ಯಕಾಪುತ್ರ ಉರುಕ್ರಮೋsಸಾವೇಕಸ್ತಥೈಕೋ ಭರತಸ್ಯ
ಮಾತುಃ ।
ಉಭೌ ಸುಮಿತ್ರಾತನಯೌ ನೃಪಸ್ಯ ಚತ್ವಾರ ಏತೇ ಹ್ಯಮರೋತ್ತಮಾಃ ಸುತಾಃ
॥೩.೭೭॥
ಶ್ರೀರಾಮ ಕೌಸಲ್ಯೆಯ
ಮಗ.
ಭರತ ಕೈಕೇಯಿಯ ಮಗ.
ಲಕ್ಷ್ಮಣ
ಶತ್ರುಘ್ನರು ಸುಮಿತ್ರೆಯ ಮಕ್ಕಳು.
ಈ ನಾಕು ದೇವತೆಗಳೂ
ದಶರಥನ ಮಕ್ಕಳು.
ಸಙ್ಕರ್ಷಣಾದ್ಯೈಸ್ತ್ರಿಭಿರೇವ ರೂಪೈರಾವಿಷ್ಟ ಆಸೀತ್ ತ್ರಿಷು ತೇಷು
ವಿಷ್ಣುಃ ।
ಇನ್ದ್ರೋsಙ್ಗದೇ ಚೈವ ತತೋsಙ್ಗದೋ ಹಿ ಬಲೀ ನಿತಾನ್ತಂ ಸ ಬಭೂವ ಶಶ್ವತ್ ॥೩.೭೮॥
ಸಂಕರ್ಷಣ, ಪ್ರದ್ಯುಮ್ನ ಅನಿರುದ್ಧ
ಈ ಮೂರು ರೂಪ ,
ಲಕ್ಷ್ಮಣ ಭರತ
ಶತ್ರುಘ್ನರಲ್ಲಿ ನಾರಾಯಣ ಆವಿಷ್ಟ ಆಗಿದ್ದನಪ್ಪ .
ಇಂದ್ರ ಅಂಗದನಲ್ಲಾಗಿದ್ದ
ಆವಿಷ್ಟ ,
ಅದಕೆ ಅಂಗದನಾದ ಬಹಳ
ಬಲಿಷ್ಠ .
ಯೇsನ್ಯೇ ಚ ಭೂಪಾಃ ಕೃತವೀರ್ಯಜಾದ್ಯಾ ಬಲಾಧಿಕಾಃ ಸನ್ತಿ ಸಹಸ್ರಶೋsಪಿ ।
ಸರ್ವೇ ಹರೇಃ ಸನ್ನಿಧಿಭಾವಯುಕ್ತಾ ಧರ್ಮಪ್ರಧಾನಾಶ್ಚ ಗುಣಪ್ರಧಾನಾಃ
॥೩.೭೯॥
ಉಳಿದ
ಕಾರ್ತವೀರ್ಯಾರ್ಜುನಾದಿ ರಾಜರು,
ಬಲಶಾಲಿ ಧಾರ್ಮಿಕ
ಅತ್ಯಂತ ಗುಣವಂತರು.
ಅವರೆಲ್ಲ ಖಂಡಿತ
ಭಗವತ್ ಸನ್ನಿಧಿಯುಕ್ತರು.
ಸ್ವಯಂ ರಮಾ ಸೀರತ ಏವ ಜಾತಾ ಸೀತೇತಿ ರಾಮಾರ್ಥಮನೂಪಮಾ ಯಾ ।
ವಿದೇಹರಾಜಸ್ಯ ಹಿ ಯಜ್ಞಭೂಮೌ ಸುತೇತಿ ತಸ್ಯೈವ ತತಸ್ತು ಸಾsಭೂತ್
॥೩.೮೦॥
ಲಕ್ಷ್ಮಿಯೇ ನೇಗಿಲ
ಸಾಲಿಂದ ಬಂದಾದಳು ಸೀತಾ,
ರಾಮನ ಸೇವೆಗಾಗಿ
ಅವತರಿಸಿದ ಲೋಕಮಾತಾ.
ವಿದೇಹರಾಜನಿಗೆ
ಯಜ್ಞಭೂಮಿಯಲ್ಲಿ ಸಿಕ್ಕ ವೈದೇಹಿ,
ಅವನ ಮಗಳೆಂದೇ
ಹೆಸರು ಪಡೆದ ಸೀತಾದೇವಿ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula