Friday 30 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 03 -04


ತದ್ವಾಕ್ಯಾತ್ ಕೈಕೇಯೀ ಸಾ ಪತಿಗವರಬಲಾದಾಜಹಾರೈವ ರಾಜ್ಯಂ
ರಾಮಸ್ತದ್ಗೌರವೇಣ ತ್ರಿದಶಮುನಿಕೃತೇsರಣ್ಯಮೇವಾsವಿವೇಶ ।
ಸೀತಾಯುಕ್ತೋsನುಜೇನ ಪ್ರತಿದಿನಸುವಿವೃದ್ಧೋರುಭಕ್ತ್ಯಾಸಮೇತಃ
ಸಂಸ್ಥಾಪ್ಯಾಶೇಷಜನ್ತೂನ್ ಸ್ವವಿರಹಜಶುಚಾ ತ್ಯಕ್ತಸರ್ವೇಷಣಾರ್ಥಾನ್ ॥೫.೦೩॥

ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯ ಹಳೆಯ ವರಗಳ ಬೇಡಿಕೆ,
ಮರ್ಯಾದಾಪುರುಷೋತ್ತಮ ರಾಮನ ಉದಾರತೆ ದುರ್ಬಳಕೆಯಿಂದ ರಾಜ್ಯ ಕಬಳಿಕೆ.
ಎಲ್ಲರ ಸಮಾಧಾನ ಪಡಿಸಿ ಸೀತಾಲಕ್ಷ್ಮಣ ಸಮೇತ ಕಾಡಿಗೆ ಹೊರಟ ರಾಮ,
ತನ್ನ ವಿಯೋಗದಿಂದ ದುಃಖಿತರಾದರೆಲ್ಲರನ್ನೂ ಸಂತೈಸಿದ ಆನಂದಧಾಮ.

ವೃಕ್ಷಾನ್ ಪಶ್ವಾದಿಕೀಟಾನ್ ಪಿತರಮಥ ಸಖೀನ್ ಮಾತೃಪೂರ್ವಾನ್ ವಿಸೃಜ್ಯ
ಪ್ರೋತ್ಥಾಂ ಗಙ್ಗಾಂ ಸ್ವಪಾದಾದ್ಧರ ಇವ ಗುಹೇನಾರ್ಚಿತಃ ಸೋsಥ ತೀರ್ತ್ ವಾ।
ದೇವಾರ್ಚ್ಯಸ್ಯಾಪಿ ಪುತ್ರಾದೃಷಿಗಣಸಹಿತಾತ್ ಪ್ರಾಪ್ಯಪೂಜಾಂ ಪ್ರಯಾತಃ
ಶೈಲೇಶಂ ಚಿತ್ರಕೂಟಂ ಕತಿಪಯದಿನಾನ್ಯತ್ರ ಮೋದನ್ನುವಾಸ ॥೫.೦೫॥

ತನ್ನನನುಸರಿಸಿದ ಮರ ಪಶುಪಕ್ಷಿ ಆನೆ ಕೀಟ ಹೆತ್ತವರು ಗೆಳೆಯರು ಅಪಾರ,
ಬಿಟ್ಟು ನಡೆದ ರಘುರಾಮ ಎಲ್ಲಾ ಆತ್ಮೀಯರನ್ನೂ ತಮಸಾನದಿಯ ತೀರ.
ದಾರಿಯಲಿ ಗುಹನಿಂದ ಆದ ಶ್ರೀರಾಮ ಪೂಜಿತ,
ಷಣ್ಮುಖನಿಂದ ಕೈಲಾಸಪತಿ ಶಿವ ಆದಂತೆ ಅರ್ಚಿತ.
ದಾಟಿದ ತನ್ನ ಪಾದೋದ್ಭವೆಯಾದ ಗಂಗಾತೀರ,
ಸ್ವೀಕರಿಸಿದ ಭರದ್ವಾಜಾದಿ ಮುನಿಗಳಿಂದ ಸತ್ಕಾರ.
ಸೇರಿ ಚಿತ್ರಕೂಟ ಹೂಡಿದ ಅಲ್ಲಿ ಸಂತಸದಿ ಬಿಡಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula