Sunday 25 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 63 - 65

ತತೋ ನೃಪೋsತ್ಯರ್ಥಮುದಾsಭಿಪೂರಿತಃ ಸುತೈಃ ಸಮಸ್ತೈಸ್ವಪುರೀಮವಾಪ
ರೇಮೇs ರಾಮೋsಪಿ ರಮಾಸ್ವರೂಪಯಾತಯೈವ ರಾಜಾತ್ಮಜಯಾ ಹಿ ಸೀತಯಾ .೬೩

ಯಥಾ ಪುರಾ ಶ್ರೀರಮಣಃ ಶ್ರಿಯಾ ತಯಾ ರತೋ ನಿತಾನ್ತಂ ಹಿ ಪಯೋಬ್ಧಿಮಧ್ಯೇ
ತಥಾ ತ್ವಯೋಧ್ಯಾಪುರಿಗೋ ರಘೂತ್ತಮೋsಪ್ಯುವಾಸ ಕಾಲಂ ಸುಚಿರಂ ರತಸ್ತಯಾ .೬೪

ದಶರಥಗೆ ಒದಗಿದ ವಿಪತ್ತು ಆಗಿತ್ತು ಪರಿಹಾರ,
ಸೇರಿದ ತನ್ನ ಪರಿವಾರದೊಂದಿಗೆ ಅಯೋಧ್ಯಾಪುರ.
ಶುರುವಾಯಿತು ಜಗದ್ ಮಾತಾಪಿತರ ಸಂಸಾರ ,
ರಾಮ ರಮೆಯರ ಸುಖಮಯ  ಕ್ರೀಡಾವಿಹಾರ.
ಲಕ್ಷ್ಮೀರಮಣ ಲಕ್ಷ್ಮಿಯೊಡನೆ ಕ್ಷೀರಸಮುದ್ರದಲ್ಲಿದ್ದಂತೆ,
ಅಯೋಧ್ಯೆಯಲ್ಲಿ ರಮೆಯೊಡನೆ ಬಹುಕಾಲ ಕಳೆದನಂತೆ.

ಇಮಾನಿ ಕರ್ಮಾಣಿ ರಘೂತ್ತಮಸ್ಯ ಹರೇರ್ವಿಚಿತ್ರಾಣ್ಯಪಿ ನಾದ್ಭುತಾನಿ
ದುರನ್ತಶಕ್ತೇರಥ ಚಾಸ್ಯ ವೈಭವಂ ಸ್ವಕೀರ್ಯಕರ್ತವ್ಯತಯಾsನುವರ್ಣ್ಯತೇ .೬೫

ರಾಮನ ಎಲ್ಲಾ ಕಾರ್ಯಗಳೂ ನಮಗೆ ವಿಚಿತ್ರ,
ದೇವರಿಗೆ ಎಲ್ಲವೂ ಕೇವಲ ಲೀಲಾವಿನೋದ ಮಾತ್ರ.
ಎಣೆಯಿರದ ಶಕ್ತಿಯ ನಾರಾಯಣನ ವೈಭವದ ವರ್ಣನೆ,
ಕರ್ತವ್ಯವಿಧಿಯಂತೆ ಕಿಂಚಿತ್ ಭಗವತ್ ಕಥಾ ನಿವೇದನೆ.

 ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ ರಾಮಾವತಾರೇ ಅಯೋಧ್ಯಾಪ್ರವೇಶೋ ನಾಮ ಚತುರ್ಥೋsಧ್ಯಾಯಃ

ಶ್ರೀಮದಾನಂದತೀರ್ಥ ಭಗವತ್ ಪಾದರಿಂದ,
ಶ್ರೀಮಹಾಭಾರತ ತಾತ್ಪರ್ಯ ನಿರ್ಣಯ ವಾದ,
ರಾಮಾವತಾರ ಅಯೋಧ್ಯಾಪ್ರವೇಶದ ವಿವರಣ ,
ನಾಕನೆ ಅಧ್ಯಾಯ ರೂಪದಿಂದಾಯ್ತು  ಕೃಷ್ಣಾರ್ಪಣ.
[Contributed by Shri Govind Magal]


No comments:

Post a Comment

ಗೋ-ಕುಲ Go-Kula