Saturday 24 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 50 - 54

ಧನುರ್ಯದನ್ಯದ್ಧರಿಹಸ್ತಯೋಗ್ಯಂ ತತ್ ಕಾರ್ಮುಕಾತ್ ಕೋಟಿಗುಣಂ ಪುನಶ್ಚ
ವರಂ ಹಿ ಹಸ್ತೇ ತದಿದಂ ಗೃಹೀತಂ ಮಯಾ ಗೃಹಾಣೈತದತೋ ಹಿ ವೈಷ್ಣವಮ್ .೫೦

ಅಂದು ನಾರಾಯಣ ಧರಿಸಿದ ಬಿಲ್ಲು,
ಶಿವ ಧರಿಸಿದ ಪಿನಾಕಗಿಂತ ಬಲು ಮಿಗಿಲು.
ಅದನ್ನೇ ಇಂದು ಧರಿಸಿರುವೆ ನಾನು,
ವಿಷ್ಣು ಧನುಸ್ಸಿನ ಹೆದೆಯೇರಿಸು ನೀನು.

ಯದೀದಮಾಗೃಹ್ಯ ವಿಕರ್ಷಸಿ ತ್ವಂ ತದಾ ಹರಿರ್ನಾತ್ರ ವಿಚಾರ್ಯಮಸ್ತಿ
ಇತಿ ಬ್ರುವಾಣಃ ಪ್ರದದೌ ಧನುರ್ವರಂ ಪ್ರದರ್ಶಯನ್ ವಿಷ್ಣುಬಲಂ ಹರಾದ್ ವರಮ್ .೫೧

ಬಿಲ್ಲನ್ನು ಹೆದೆಯೇರಿಸಿದರೆ ನೀ ನಾರಾಯಣ,
ಖಚಿತವಾಗುವುದು ಸಂಶಯಗಳು ದೂರಾದ ಕಾರಣ.
ಹರಬಲಕ್ಕಿಂತ ಹರಿಬಲ ಮೇಲೆಂದು ನಿರೂಪಿಸುವ ಭಾರ್ಗವ ಚಿತ್ತ,
ಅದನ್ನೇ ತೋರಲು ಪರಶುರಾಮ  ಬಿಲ್ಲನ್ನು ರಾಮನ ಕೈಗಿತ್ತ.


ಪ್ರಗೃಹ್ಯ ತಚ್ಚಾಪವರಂ ರಾಘವಶ್ಚಕಾರ ಸಜ್ಯಂ ನಿಮಿಷೇಣ ಲೀಲಯಾ
ಚಕರ್ಷ ಸನ್ಧಾಯ ಶರಂ ಪಶ್ಯತಃ ಸಮಸ್ತಲೋಕಸ್ಯ ಸಂಶಯಂ ನುದನ್ ೫೨

ಶ್ರೀರಾಮ ಕ್ಷಣಾರ್ಧದಲ್ಲಿ ಬಿಲ್ಲ ಹೆದೆಯೇರಿಸಿದ ಕಾರಣ,
ಆಯಿತು ಸಮಸ್ತ ಸುಜನರ ಸಂಶಯ ನಿವಾರಣ.


ಪ್ರದರ್ಶಿತೇ ವಿಷ್ಣುಬಲೇ ಸಮಸ್ತತೋ ಹರಾಚ್ಚ ನಿಃಸಙ್ಖ್ಯತಯಾ ಮಹಾಧಿಕೇ
ಜಗಾದ ಮೇಘೌಘಗಭೀರಯಾ ಗಿರಾ ರಾಘವಂ ಭಾರ್ಗವ ಆದಿಪೂರುಷ .೫೩

ಶಿವ ರಮಾ ಬ್ರಹ್ಮಾದಿಗಳಿಗಿಂತಲೂ ಶ್ರೇಷ್ಠ ವಿಷ್ಣುಬಲ,
ಶ್ರೀರಾಮ ಖಚಿತಪಡಿಸಿ ತೋರಿಸಿದ ಅಂದಿನ ಕಾಲ.
ಕೇಳಿಬಂತಾಗ ಮೇಘಘರ್ಜನೆಯ ನಾದ,
ಕೊಡಲಿರಾಮ ರಾಮಗೆ ಮಂಡಿಸಿದ ವಾದ.

ಅಲಂ ಬಲಂ ತೇ ಜಗತೋsಖಿಲಾದ್ ವರಂ ಪರೋsಸಿ ನಾರಾಯಣ ಏವ ನಾನ್ಯಥಾ
ವಿಸರ್ಜಯಸ್ವೇಹ ಶರಂ ತಪೋಮಯೇಮಹಾಸುರೇ ಲೋಕಮಯೇ ವರಾದ್ ವಿಭೋಃ ೫೪ 

ನೀನು ಸಂಪೂರ್ಣ -ಬಲಪೂರ್ಣ,
ನೀನು ಸರ್ವೋತ್ತಮ ನಾರಾಯಣ.
ಬ್ರಹ್ಮವರದಿಂದ ಲೋಕವ್ಯಾಪ್ತನಾದೊಬ್ಬ ಅಸುರ,
ತಪೋಮಯನಾದ ಅವನು ಸೇರಿರುವ ನನ್ನುದರ.
ಅವನ ನಿವಾರಣೆಗೆ ಬಂದಿದೆ ಈಗ ಯೋಗ,
ಆಗಲಿ ನೀ ಹೂಡಿದ ಬಾಣದ ಪ್ರಯೋಗ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula