Friday 16 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 20 - 22

ಇತೀರಿತಾಂ ಮೇ ಗಿರಮಭ್ಯವೇತ್ಯ ದಿತೇಃ ಸುತಾ ದಾನವಯಕ್ಷರಾಕ್ಷಸಾಃ
ಸಮೇತ್ಯ ಭೂಪಾಶ್ಚ ಸಮೀಪಮಾಶು ಪ್ರಗೃಹ್ಯ ತಚ್ಚಾಲಯಿತುಂ ಶೇಕುಃ .೨೦

ಹೀಗೆಂದು ನಾನು ಮೇಲೆ ಮಾಡಿಯಾದ ನಂತರ ಘೋಷಣೆ,
ದೈತ್ಯ ಯಕ್ಷ ರಾಕ್ಷಸ ರಾಜರುಗಳ ವ್ಯರ್ಥ ಬಿಲ್ಲು ಪ್ರದಕ್ಷಿಣೆ.
ಯಾರೊಬ್ಬರೂ ಅದನ್ನೆತ್ತಲು ಆಗಲಿಲ್ಲ ಸಮರ್ಥ,
ಎಲ್ಲರ ಮಹಾಪ್ರಯತ್ನಗಳೂ ಆದವು ಬರೀ ವ್ಯರ್ಥ.

ಸಂಸ್ವಿನ್ನಗಾತ್ರಾಃ ಪರಿವೃತ್ತನೇತ್ರಾ ದಶಾನನಾದ್ಯಾಃ ಪತಿತಾ ವಿಮೂರ್ಛಿತಾಃ
ತಥಾsಪಿ ಮಾಂ ಧರ್ಷಯಿತುಂ ಶೇಕುಃ ಸುತಾಕೃತೇ ತೇ ವಚನಾತ್ ಸ್ವಯಮ್ಭುವಃ .೨೧

ರಾವಣ ಮೊದಲಾದವರೂ ಬೆವೆತು ಸೋತು ಬಿದ್ದರು,
ಬ್ರಹ್ಮವರವಿದ್ದುದರಿಂದ ಬಲಾತ್ಕರಿಸಲು ಅಶಕ್ಯರಾದರು.

ಪುರಾ ಹಿ ಮೇsಧಾತ್ ಪ್ರಭುರಬ್ಜಜೋ ವರಂ ಪ್ರಸಾದಿತೋ ಮೇ ತಪಸಾ ಕಥಞ್ಚನ
ಬಲಾನ್ನತೇ ಕಶ್ಚಿದುಪೈತಿ ಕನ್ಯಕಾಂ ತದಿಚ್ಛುಭಿಸ್ತೇ ನಚ ಧರ್ಷಣೇತಿ .೨೨

ಜನಕನ ತಪಸ್ಸಿಗೊಲಿದ ಬ್ರಹ್ಮದೇವ ಇತ್ತ ವರ,
ಯಾರೂ ಹೊಂದಲಾರರು ಸೀತೆಯ ಮಾಡಿ ಬಲಾತ್ಕಾರ.
ಯಾರೊಬ್ಬನೂ ಅವಳನ್ನೂ ನಿನ್ನನ್ನೂ ಕುಟಿಲದಿ ಗೆಲ್ಲಲಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula