Tuesday 13 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 11 - 13

ಬಲಂ ಸ್ವಭಕ್ತೇರಧಿಕಂ ಪ್ರಕಾಶಯನ್ನನುಗ್ರಹಂ ತ್ರಿದಶೇಷ್ವತುಲ್ಯಮ್
ಅನನ್ಯಭಕ್ತಾಂ ಸುರೇಶಕಾಙ್ಕ್ಷಯಾ ವಿಧಾಯ ನಾರೀಂ ಪ್ರಯಯೌ ತಯಾsರ್ಚಿತಃ .೧೧

ಭಕ್ತಿಯ ಹಿರಿಮೆ ದೇವತೆಗಳಲ್ಲಿ ಭಗವಂತನ ಒಲುಮೆ,
ಪ್ರಕಟಿಸಿ ತೋರುತ್ತಾ ಮಾಡಿದ ಅಹಲ್ಯೋದ್ಧಾರದ ಮಹಿಮೆ.
ಇಂದ್ರನ ಪ್ರಾರ್ಥನೆಯಂತೆ ಭಕ್ತೆ ಅಹಲ್ಯೆಯ ಉದ್ಧಾರ,
ಅವಳಿಂದ ವಂದಿತನಾಗಿ ಮುನ್ನಡೆದ ತಾ ಕರುಣಾಸಾಗರ.

ಶ್ಯಾಮಾವದಾತೇ ಜಗದೇಕಸಾರೇ ಸ್ವನನ್ತಚನ್ದ್ರಾಧಿಕಕಾನ್ತಿಕಾನ್ತೇ
ಸಹಾನುಜೇ ಕಾರ್ಮುಕಬಾಣಪಾಣೌ ಪುರೀಂ ಪ್ರವಿಷ್ಟೇ ತುತುಷುರ್ವಿದೇಹಜಾಃ .೧೨

ನೀಲಮೇಘನಾದ ಶ್ರೀರಾಮ,
ಅನಂತ ಚಂದ್ರರ ಕಾಂತಿಧಾಮ.
ಬಿಲ್ಲುಧಾರಿಯಾಗಿ ಲಕ್ಷ್ಮಣನೊಡನೆ ವಿದೇಹನಗರ ಪ್ರವೇಶ,
ದೃಶ್ಯ ಕಂಡ ಜನರೆಲ್ಲ ಹೊಂದಿದರು ಅತೀವ ಹರುಷ.

ಪಪುರ್ನಿತಾನ್ತಮ್ ಸರಸಾಕ್ಷಿಭೃಙ್ಗೈರ್ವರಾನನಾಬ್ಜಂ ಪುರುಷೋತ್ತಮಸ್ಯ
ವಿದೇಹನಾರೀನರವರ್ಯಸಙ್ಘಾ ಯಥಾ ಮಹಾಪೂರುಷಿಕಾಸ್ತದಙ್ಘ್ರಿಮ್ .೧೩


ಹರಿಭಕ್ತರ ದೃಷ್ಟಿ ಹರಿಯ ಚರಣಕಮಲಗಳಲ್ಲಿ,
ವಿದೇಹನಗರಿಗಳ ದೃಷ್ಟಿ ರಾಮನ ಮುಖಕಮಲದಲ್ಲಿ.
ಭಗವಂತನ ಮುಖತಾವರೆಯ ಸವಿಜೇನು,ಆಸ್ವಾದಿಸಿತು ಪ್ರಜಾವೃಂದ ನೋಟದಲ್ಲೇ ತಾನು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula