Thursday, 1 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 61 - 68

ಅಥೋ ಮನುಷ್ಯೇಷು ತಥಾsಸುರೇಷು ರೂಪಾನ್ತರೈಃ ಕಲಿರೇವಾವಶಿಷ್ಟಃ ।
ತತೋ ಮನುಷ್ಯೇಷು ಚ ಸತ್ಸು ಸಂಸ್ಥಿತೋ ವಿನಾಶ್ಯ ಇತ್ಯೇಷ 
ಹರಿರ್ವ್ಯಚಿನ್ತಯತ್ ॥೧೦.೬೧ ॥

ದೇವತೆಗಳ ಮನಸ್ಸಿನಿಂದಂತೂ  ಕಲಿ ಹೊರಬಿದ್ದ,
ಮನುಷ್ಯ ಅಸುರರಲ್ಲಿ ಬೇರೆ ರೀತಿಗಳಿಂದ ಇದ್ದೇಇದ್ದ.
ಆಗಬೇಕು ಮನುಷ್ಯೋತ್ತಮರಲ್ಲಿ ಇರುವ ಕಲಿಯ ನಾಶ,
ಹೀಗೆಂದು ಯೋಚಿಸಿದರಂತೆ ವೇದವ್ಯಾಸ ರೂಪದ ಈಶ.

ತತೋ ನೃಣಾಂ ಕಾಲಬಲಾತ್ ಸುಮನ್ದಮಾಯುರ್ಮ್ಮತಿಂ ಕರ್ಮ್ಮ ಚ ವೀಕ್ಷ್ಯ ಕೃಷ್ಣಃ ।
ವಿವ್ಯಾಸ ವೇದಾನ್ ಸ ವಿಭುಶ್ಚತುರ್ದ್ಧಾ  ಚಕ್ರೇ ತಥಾ ಭಾಗವತಂ ಪುರಾಣಮ್ ॥೧೦.೬೨॥

ಮನುಷ್ಯರಿಗಿರುವ ಆಯುಷ್ಯ ಬುದ್ಧಿ ಆಚರಣೆ ಎಲ್ಲವೂ ಕಡಿಮೆ -ಸೀಮಿತ,
ವೇದಗಳ ನಾಕುಭಾಗ ಮಾಡಿ ಹದಿನೆಂಟು ಪುರಾಣಗಳ ಕೊಟ್ಟ ವೇದವ್ಯಾಸನೀತ.
ಅದರಲ್ಲೇ ಪುರಾಣಗಳ ರಾಜನೆನಿಸಿದ ಶ್ರೀಮದ್ಭಾಗವತ,
ಅದರಲ್ಲಿ ತೆರೆದಿಟ್ಟರು ವೈಷ್ಣವ ತತ್ವದ ಅನನ್ಯ  ನವನೀತ.

ಯೇಯೇ ಚ ಸನ್ತಸ್ತಮಸಾsನುವಿಷ್ಟಾಸ್ತಾಂಸ್ತಾನ್ ಸುವಾಕ್ಯೈಸ್ತಮಸೋ ವಿಮುಞ್ಚನ್ ।
ಚಚಾರ ಲೋಕಾನ್ ಸ ಪಥಿ ಪ್ರಯಾನ್ತಂ ಕೀಟಂ ವ್ಯಪಶ್ಯತ್ ತಮುವಾಚ 
ಕೃಷ್ಣಃ  ॥೧೦.೬೩॥

ಭವಸ್ವ ರಾಜಾ ಕುಶರೀರಮೇತತ್ ತ್ಯಕ್ತ್ವೇತಿ ನೈಚ್ಛತ್ ತದಸೌ ತತಸ್ತಮ್ ।
ಅತ್ಯಕ್ತದೇಹಂ ನೃಪತಿಂ ಚಕಾರ ಪುರಾ ಸ್ವಭಕ್ತಂ ವೃಷಲಂ 
ಸುಲುಬ್ಧಮ್  ॥೧೦.೬೪॥

ಲೋಭಾತ್ ಸ ಕೀಟತ್ವಮುಪೇತ್ಯ ಕೃಷ್ಣಪ್ರಸಾದತಶ್ಚಾsಶು ಬಭೂವ ರಾಜಾ ।
ತದೈವ ತಂ ಸರ್ವನೃಪಾಃ ಪ್ರಣೇಮುರ್ದ್ಧದುಃ ಕರಂ ಚಾಸ್ಯ ಯಥೈವ 
ವೈಶ್ಯಾಃ  ॥೧೦.೬೫॥

ಯಾವಯಾವ ಸಜ್ಜನರಿಗಿತ್ತೋ ಅಜ್ಞಾನದ ಸಂಪರ್ಕ,
ಅವರನ್ನೆಲ್ಲ ಉದ್ಧರಿಸಿದರು ನೀಡಿ ಜ್ಞಾನಮಧುಪರ್ಕ.
ಕೈಗೊಂಡರು ಅವರು ಲೋಕಸಂಚಾರ,
ಮಾರ್ಗದಿ ಕಂಡರೊಂದು ಕೀಟ ಶರೀರ.
ಕೀಟಶರೀರ ಬಿಟ್ಟು ರಾಜನಾಗಲು ಹೇಳಿದ ಪ್ರಸಂಗ,
ಒಪ್ಪದಿರಲು ; ಆ ಕೀಟವನ್ನೇ ರಾಜನಾಗಿಸಿದರಾಗ.
ಕೀಟವಾಗಿತ್ತು ಹಿಂದಿನ ಜನ್ಮದಲ್ಲಿ ಒಂದು ಶೂದ್ರ ಭಕ್ತ,
ಆದರೆ ಅವನಾಗಿದ್ದ ಜಿಪುಣತನದಿಂದ ದೋಷಯುಕ್ತ.
ಕೀಟ ದೇಹವಾದರೂ ಭಕ್ತಿಯದು ಇದ್ದೇ ಇತ್ತು,
ಹಾಗಾಗಿ ಅದು ವ್ಯಾಸರನುಗ್ರಹಕ್ಕೆ ಪಾತ್ರವಾಗಿತ್ತು.
ವ್ಯಾಸರನುಗ್ರಹದಿಂದ ಕೀಟ ದೇಹದಲ್ಲೇ ರಾಜನಾದ,
ಬೇರೆ ರಾಜರಿಂದ ಕಪ್ಪ ನಮನಗಳ ಸ್ವೀಕರಿಸಿ ಮೆರೆದ.

(ಇದನ್ನೇ ವಾದಿರಾಜರು 'ಮಧ್ವಾಂತರ್ಗತ ವೇದವ್ಯಾಸ ಕಾಯೋ ಶುದ್ಧ 
ಮೂರುತಿಯೇ ಸರ್ವೇಶ'
'ಕ್ರಿಮಿಯಿಂದ ರಾಜ್ಯವಾಳಿಸಿದ ಜಗತ್ಸ್ವಾಮಿ ನೀನೆಂದು ತೋರಿದ' -ಸಂದೇಶ )

ಉವಾಚ ತಂ ಭಗವಾನ್ ಮುಕ್ತಿಮಸ್ಮಿಂಸ್ತವ ಕ್ಷಣೇ ದಾತುಮಹಂ ಸಮರ್ತ್ಥಃ ।
ತಥಾsಪಿ ಸೀಮಾರ್ತ್ಥಮವಾಪ್ಯ ವಿಪ್ರತನುಂ ವಿಮುಕ್ತೋ ಭವ ಮತ್ 
ಪ್ರಸಾದಾತ್  ॥೧೦.೬೬ ॥

ಈ ಕ್ಷಣವೇ ನಿನಗೆ ಮೋಕ್ಷ ಕರುಣಿಸಲು ನಾನೇನೋ ಸಿದ್ಧ,
ಕರ್ಮಾನುಸಾರ ಇನ್ನೊಂದು ಬ್ರಾಹ್ಮಣಜನ್ಮಕೆ ನೀನು  ಬದ್ಧ.
ಮುಕ್ತನಾಗುವೆ ಆಗಲೇ ನೀನು ನನ್ನ ಅನುಗ್ರಹದಿಂದ.

ಜ್ಞಾನಂ ಚ ತಸ್ಮೈ ವಿಮಲಂ ದದೌ ಸ ಮಹೀಂ ಚ ಸರ್ವಾಂ ಬುಭುಜೇ ತದನ್ತೇ ।
ತ್ಯಕ್ತ್ವಾ ತನುಂ ವಿಪ್ರವರತ್ವಮೇತ್ಯ ಪದಂ ಹರೇರಾಪ ಸುತತ್ತ್ವವೇದೀ  ॥೧೦.೬೭॥

ವೇದವ್ಯಾಸರಿಂದ ಕೀಟದಲ್ಲಿದ್ದ ಸುಜೀವಿಗೆ ಜ್ಞಾನಪ್ರದಾನ,
ಅವರನುಗ್ರಹದಿಂದಲೇ ರಾಜನಾಗಿ ಮಾಡಿದ ಭೂಪಾಲನ.
ಕಡೆಗೆ ಕೀಟದೇಹ ಬಿಟ್ಟು ಬ್ರಾಹ್ಮಣ ಜನ್ಮ ಹೊಂದಿದ ಜೀವ,
ತತ್ವಜ್ಞಾನ ಸಾಕಾರವಾಗಿ ಮೋಕ್ಷ ಪಡೆದ ಆ ಮಹಾನುಭಾವ.

ಏವಂ ಬಹೂನ್ ಸಂಸೃತಿಬನ್ಧತಃ ಸ ವ್ಯಮೋಚಯದ್ ವ್ಯಾಸತನುರ್ಜ್ಜನಾರ್ದ್ದನಃ ।
ಬಹೂನ್ಯಚಿನ್ತ್ಯಾನಿ ಚ ತಸ್ಯ ಕರ್ಮ್ಮಾಣ್ಯಶೇಷದೇವೇಶಸದೋದಿತಾನಿ  ॥೧೦.೬೮॥.

ಹೀಗೆ ವ್ಯಾಸರೂಪದಿಂದ ಕಾಣಿಸಿಕೊಂಡ ನಾರಾಯಣ,
ಅನೇಕ ಸುಜೀವಿಗಳಿಗೆ ಜ್ಞಾನವಿತ್ತು ಬಿಡುಗಡೆಗಾದ ಕಾರಣ.
ವ್ಯಾಸಾವತಾರದಲಿ ತೋರಿದ ದಿವ್ಯ ಕರ್ಮಗಳ ಕರುಣೆ,
ಮಾಡುತ್ತಿರುತ್ತಾರೆ ದೇವತಾಶ್ರೇಷ್ಠರು ಸತತವಾದ ಸ್ಮರಣೆ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 56 - 60

ಸ ಲೋಕಧರ್ಮ್ಮಾಭಿರಿರಕ್ಷಯಾ ಪಿತುರ್ದ್ದ್ವಿಜತ್ವಮಾಪ್ಯಾsಶು ಪಿತುರ್ದ್ದದೌ ನಿಜಮ್ ।
ಜ್ಞಾನಂ ತಯೋಃ ಸಂಸ್ಮೃತಿಮಾತ್ರತಃ ಸದಾ ಪ್ರತ್ಯಕ್ಷಭಾವಂ ಪರಮಾತ್ಮನೋ 
ದದೌ ॥೧೦.೫೬॥

ಲೋಕಧರ್ಮ ಕಾಪಾಡುವ ಭಗವತ್ವ್ಯಾಪಾರ,
ಪ್ರಾದುರ್ಭವಿಸಿ ವೇದವ್ಯಾಸರಾಗಿ ಕಂಡರು ಶೀಘ್ರ.
ತಂದೆಯಿಂದ ಪಡೆದು ಉಪನಯನ ಸಂಸ್ಕಾರ,
ತಂದೆಗೇ ಉಪದೇಶಿಸಿದರು ತತ್ವಜ್ಞಾನದ ಸಾರ.
ಹೆತ್ತವರಿಗಿತ್ತರು ಸ್ಮರಣೆಮಾತ್ರದಿ ತಾ ಕಾಣುವ ವರ.

ದ್ವೈಪಾಯನಃ ಸೋsಥ ಜಗಾಮ ಮೇರುಂ ಚತುರ್ಮ್ಮುಖಾದ್ಯೈರನುಗಮ್ಯಮಾನಃ ।
ಉದ್ಧೃತ್ಯ ವೇದಾನಖಿಲಾನ್ ಸುರೇಭ್ಯೋ ದದೌ ಮುನಿಭ್ಯಶ್ಚ 
ಯಥಾssದಿಸೃಷ್ಟೌ  ॥೧೦.೫೭॥

ದ್ವೀಪದಲ್ಲಿ ನಡೆದಮೇಲೆ ವೇದವ್ಯಾಸರ ಆ ಅವತಾರದ ಆಟ,
ಬ್ರಹ್ಮಾದಿ ದೇವತೆಗಳಿಂದನುಸರಿಸಿದವರಾಗಿ ಮೇರು ತಲುಪಿದ ನೋಟ.
ಹೇಗೆ ಆದಿಸೃಷ್ಟಿಯಲ್ಲಿ ಆಗಿತ್ತೋ ವೇದಾದಿಗಳ ಉಪದೇಶ,
ದೇವತೆ ಮುನಿಗಳಿಗೆ ಮತ್ತೆ ಉಪದೇಶಿಸಿದರು ವೇದವ್ಯಾಸ.

ಸರ್ವಾಣಿ ಶಾಸ್ತ್ರಾಣಿ ತಥೈವ ಕೃತ್ವಾ ವಿನಿರ್ಣ್ಣಯಂ ಬ್ರಹ್ಮಸೂತ್ರಂ ಚಕಾರ ।
ತಚ್ಛುಶ್ರುವುರ್ಬ್ರಹ್ಮಗಿರೀಶಮುಖ್ಯಾಃ ಸುರಾ ಮುನೀನಾಂ ಪ್ರವರಾಶ್ಚ 
ತಸ್ಮಾತ್  ॥೧೦.೫೮॥

ಹಾಗೆಯೇ ಆಯಿತು ಸಕಲ ಶಾಸ್ತ್ರಗಳ (ನಿರ್ಮಾಣ) ಸಂಪಾದನ,
ಸಕಲ ಶಾಸ್ತ್ರದ ನಿರ್ಣಾಯಕವಾದ ಬ್ರಹ್ಮಸೂತ್ರದ ಅನಾವರಣ.
ಬ್ರಹ್ಮರುದ್ರಾದಿ ದೇವತೆಗಳಿಗಿತ್ತರು ಬ್ರಹ್ಮಸೂತ್ರದ  ಹೂರಣ.

ಸಮಸ್ತಶಾಸ್ತ್ರಾರ್ತ್ಥನಿದರ್ಶನಾತ್ಮಕಂ ಚಕ್ರೇ ಮಹಾಭಾರತನಾಮಧೇಯಮ್ ।
ವೇದೋತ್ತಮಂ ತಚ್ಚ ವಿಧಾತೃಶಙ್ಕರಪ್ರಧಾನಕೈಸ್ತನ್ಮುಖತಃ ಸುರೈಃ 
ಶ್ರುತಮ್  ॥೧೦.೫೯॥

ವೇದ ಶಾಸ್ತ್ರಗಳೆಲ್ಲಾ  ಹೇಳಿರುವ ಅಂತರಂಗದ ಆ ಸತ್ವ,
ಅದರ ಕನ್ನಡಿಯಂತೆ ತೋರುವ ಮಹಾಭಾರತದ ತತ್ವ.
ಬ್ರಹ್ಮರುದ್ರಾದಿ ದೇವತೆಗಳಿಗೆ ಅದರ ಮಕರಂದ,
ಮಹಾಭಾರತದ ಉಪದೇಶ ವೇದವ್ಯಾಸರಿಂದ.

ಅಥೋ ಗಿರೀಶಾದಿಮನೋನುಶಾಯೀ ಕಲಿರ್ಮ್ಮಮಾರಾsಶು ಸುವಾಙ್ಮಯೈಃ ಶರೈಃ ।
ನಿಕೃತ್ತಶೀರ್ಷೋ ಭಗವನ್ಮುಖೇರಿತೈಃ ಸುರಾಶ್ಚ ಸಜ್ಜ್ಞಾನಸುಧಾರಸಂ 
ಪಪುಃ  ॥೧೦.೬೦॥

ರುದ್ರ ಮೊದಲಾದವವರಲ್ಲಿ ನೆಲೆಸಿದ ಕಲಿಯ ತಲೆ,
ಜ್ಞಾನಬಾಣದಿಂದ ಕತ್ತರಿಸಿ ನಿವಾರಣೆ ಮಾಡಿದ ಕಲೆ.
ಆಗಾಯಿತು ದೇವತೆಗಳಲ್ಲಿದ್ದ ಕಲಿಯ ಮರಣ,
ದೇವತೆಗಳು ಪಡೆದರು ನಿರ್ಮಲವಾದ ಜ್ಞಾನ. 
[Contributed by Shri Govind Magal]

Wednesday, 31 October 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 52 - 55

(ವ್ಯಾಸರೂಪದಿಂದ ಭುವಿಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ,
ತಂದೆಯ ಸುಂದರ ಚಿತ್ರಣ ಬಿಚ್ಚಿ ತೋರಲು ಮಧ್ವರು  ಹಚ್ಚಿಟ್ಟ ವರ್ಣನಾ ದೀಪ. )

ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ ।
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ  ॥೧೦.೫೨ ॥

ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ ।
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ 
ದಧಾನಃ  ॥೧೦.೫೩॥

ಅಸಂಖ್ಯ ದಿವ್ಯ ಮಹಾಗುಣಗಳ ಉತ್ಕೃಷ್ಟ ಸಾಗರ,
ಸರ್ವಕರ್ತ ಸಮರ್ಥ ವೇದವಿದ್ಯೆ ಶಾಸ್ತ್ರಗಳ ಆಗರ.
ಸರ್ವಶಕ್ತ ಒಡೆಯರಿಗೇ ಒಡೆಯ ದೋಷಗಳಿಗೆ ದೂರ,
ಗುಣಗಳೇ ಮೈದಾಳಿದ ಸ್ವರೂಪಭೂತ ಅಪ್ರಾಕೃತ ಶರೀರ.
ಮರತಕಮಣಿಯಂತೆ ನೀಲಿಯಾದ ಅವನ ಮೈಬಣ್ಣ,
ಪಾದ ಕಣ್ತುದಿ ತುಟಿ ಕೈ ನಾಲಿಗೆಯ ತುದಿಗಳು ಕೆಂಬಣ್ಣ.
ಕೈ ಮತ್ತು ಕಾಲುಗಳಲ್ಲಿ ಶಂಖ ಚಕ್ರ ಕಮಲಗಳ ಭವ್ಯ ರೇಖೆ,
ಮೈಗೆ ಸೂರ್ಯಕಾಂತಿಯ ಹಳದಿ ಜಿಂಕೆ ಚರ್ಮದ ಹೊದಿಕೆ.
ಮಿಂಚಿನಂಥಾ ನಿರ್ಮಲವಾದ ಜಟಾಜೂಟಧಾರಿ,
ಭಗವಂತ ತಾನು ವೇದವ್ಯಾಸರಾಗಿ ಕಂಡದ್ದೀ ಪರಿ.

ವಿಸ್ತೀರ್ಣ್ಣವಕ್ಷಾಃ  ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ ।
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ  ॥೧೦.೫೪॥

ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ 
ಯಜ್ಞೋಪವೀತಾಜಿನಮೇಖಲೋಲ್ಲಸನ್ ।
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ  ॥೧೦.೫೫॥

ವಿಶಾಲವಾದ ವಕ್ಷ,
ಕಮಲದಂಥ ಅಕ್ಷ.
ವಿಸ್ತಾರ ಭುಜ ನಿಡಿದಾದ ತೋಳು,
ಶಂಖದಂತೆ ನುಣುಪಾದ ಕೊರಳು.
ಸಮಸ್ತ ವೇದಗಳ ಹೇಳುವ ದಿವ್ಯ ಮುಖ,
ಕೊಡುವುದದು ಅಸಂಖ್ಯ ಚಂದ್ರರ ಸುಖ.
ಜ್ಞಾನ ಅಭಯ ಮುದ್ರೆಗಳ ಎರಡು ಹಸ್ತ,
ಕಂಗೊಳಿಸುವ ಕೃಷ್ಣಾಜಿನ ಯಜ್ನೋಪವೀತ.
ಅಜ್ಞಾನದ ಹಾವಿನಿಂದ ಕಚ್ಚಲ್ಪಟ್ಟ ಭಕ್ತವೃಂದ,
ದೃಷ್ಟಿಯಿಂದ ಬದುಕಿಸುವ ವೇದವ್ಯಾಸ ಚೆಂದ.