Friday, 12 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 24 - 30

ವರಂ ಸಮಾಶ್ರಿತಾ ಪತಿಂ ವ್ರಜೇತ ಯಾ ತತೋsಧಮಮ್  ।
ನ ಕಾಚಿದಸ್ತಿ ನಿಷ್ಕೃತಿರ್ನ್ನ ಭರ್ತ್ತೃಲೋಕಮೃಚ್ಛತಿ ॥೧೨.೨೪ ॥

ನಿಯೋಗ ಪದ್ಧತಿಯ ಅಂದಿನ ರೀತಿ ನೀತಿ,
ಉತ್ತಮನ ಆರಿಸಿದ ಹೆಣ್ಣಿಗೆ ಆಗುವ ಸದ್ಗತಿ.
ತಾರತಮ್ಯದಲ್ಲಿ ಪತಿಗಿಂತ ಕೆಳಗಿನವರ ಸೇರಲು,
ಪ್ರಾಯಶ್ಚಿತ್ತವಿಲ್ಲದೇ ಗಂಡನಲೋಕ ಸೇರಲ್ಲ ಅವಳು.

ಕೃತೇ ಪುರಾ ಸುರಾಸ್ತಥಾ ಸುರಾಙ್ಗನಾಶ್ಚ ಕೇವಲಮ್ ।
ನಿಮಿತ್ತತೋsಪಿ ತಾಃ ಕ್ವಚಿನ್ನ ತಾನ್ ವಿಹಾಯ ಮೇನಿರೇ ॥೧೨.೨೫॥
ಮನೋವಚಃ ಶರೀರತೋ ಯತೋ ಹಿ ತಾಃ ಪತಿವ್ರತಾಃ ।
ಅನಾದಿಕಾಲತೋsಭವಂಸ್ತತಃ ಸಭರ್ತ್ತೃಕಾಃ ಸದಾ ॥೧೨.೨೬॥
ಸ್ವಭರ್ತ್ತೃಭಿರ್ವಿಮುಕ್ತಿಗಾಃ ಸಹೈವ ತಾ ಭವನ್ತಿ ಹಿ ।
ಕೃತಾನ್ತಮಾಪ್ಯ ಚಾಪ್ಸರಃಸ್ತ್ರಿಯೋ ಬಭೂವುರೂರ್ಜ್ಜಿತಾಃ ॥೧೨.೨೭॥
ಅನಾವೃತಾಶ್ಚ ತಾಸ್ತಥಾ ಯಥೇಷ್ಟಭರ್ತ್ತೃಕಾಃ ಸದಾ ।
ಅತಸ್ತು ತಾ ನ ಭರ್ತ್ತೃಭಿರ್ವಿಮುಕ್ತಿಮಾಪುರುತ್ತಮಾಮ್ ॥೧೨.೨೮ ॥

ಸುರಸ್ತ್ರಿಯೋsತಿಕಾರಣೈರ್ಯ್ಯದಾsನ್ಯಥಾ ಸ್ಥಿತಾಸ್ತದಾ ।
ದುರನ್ವಯಾತ್ ಸುದುಃಸಹಾ ವಿಪತ್ ತತೋ ಭವಿಷ್ಯತಿ ॥೧೨.೨೯॥
ಅಯುಕ್ತಮುಕ್ತವಾಂಸ್ತತೋ ಭವಾಂಸ್ತಥಾsಪಿ ತೇ ವಚಃ ।
ಅಲಙ್ಘ್ಯಮೇವ ಮೇ ತತೋ ವದಸ್ವ ಪುತ್ರದಂ ಸುರಮ್ ॥೧೨.೩೦॥

ಕೃತಯುಗದ ಪುರುಷ ಹಾಗೂ ಸ್ತ್ರೀ ದೇವತೆಗಳಿಬ್ಬರು ,
ಗಟ್ಟಿನಿಮಿತ್ತವಿದ್ದರೂ ನಿಯತ ಪತಿಪತ್ನಿಯಾಗಿರುತ್ತಿದ್ದರು.
ಮನಸ್ಸು ಮಾತು ಮತ್ತು ದೇಹ ಮೂರನ್ನು ಒಬ್ಬರಿಗೆ ಮೀಸಲಿಟ್ಟ ಸ್ಥಿತಿ,
ಆ ಕಾರಣಕ್ಕೆ ಅವರುಗಳನ್ನು ಪತಿವ್ರತೆಯರೆಂದು ಕರೆಯುತ್ತಿದ್ದ ರೀತಿ.
ಇದಾಗಿತ್ತು ಅನಾದಿ ಕಾಲದ ನಿಯಮ,
ಅವರಿಗಿತ್ತು ಸಭರ್ತೃಕರೆಂದೇ ನಾಮ.
ಇದು ಅನಾದಿಕಾಲದ ದೇವತೆಗಳ ರೀತಿ,
ಮೋಕ್ಷವನ್ನೂ ಜೊತೆಯಾಗಿ ಪಡೀತಿದ್ದ ಸ್ಥಿತಿ.
ಕೃತಯುಗದ ಕೊನೆಯಲ್ಲಿ ಅಪ್ಸರ ಸ್ತ್ರೀಯರ ಆಗಮನ,
ಅವರಿಗಿದ್ದಿಲ್ಲ ನಿಯತ ಪತಿಪತ್ನಿ ಎಂಬಂಥ ನಿಯಮನ.
ಅವರಿಗಿದ್ದಿಲ್ಲ ಒಬ್ಬರೊಂದಿಗೇ ಬಾಳಬೇಕೆಂಬ ಯಾವ  ಕಟ್ಟು ಪಾಡು,
ಮನದಿಚ್ಛೆಯಂತಿರುವವರಿಗಿದ್ದಿಲ್ಲ ಪತಿಯೊಡನೆ ಮುಕ್ತಿ ಎಂದು ನೋಡು.
ದೇವತಾಸ್ತ್ರೀಯರಿಗೆ ಇರುತ್ತದೆ ಕೆಲವೊಮ್ಮೆ ಪ್ರಬಲವಾದ ಕಾರಣ,
ಶಾಪ, ಪುಣ್ಯಹ್ರಾಸ ಪ್ರಬಲ ಪ್ರಾರಬ್ಧಗಳದೇ ಆಗುವುದಲ್ಲಿ ನಿಯಮನ.
ಅಂತಹಾ ದೇವತಾ ಸ್ತ್ರೀಯರಿಗೆ ಎದುರಾಗುವ ಸ್ಥಿತಿ,
ನಿಯತಪತಿಯ ಬಿಟ್ಟು ಅನ್ಯಗಂಡಿನೊಡನೆ ಬಾಳಗತಿ.
ಅಂತಹವರ ಫಲ ದುಃಖದಾಯಕ ಅಸಹನೀಯ ವಿಪತ್ತು,
ಇಂಥ ಸ್ಥಿತಿಯಲ್ಲಿ ನೀನೇ ಹೇಳು ಮೀರಲಾಗಲ್ಲ ಪತಿ ನಿನ್ನ ಮಾತು.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 19 - 23

ತದಾ ಕಲಿಶ್ಚ ರಾಕ್ಷಸಾ ಬಭೂವುರಿನ್ದ್ರಜಿನ್ಮುಖಾಃ।
ವಿಚಿತ್ರವೀರ್ಯ್ಯನನ್ದನಪ್ರಿಯೋದರೇ ಹಿ ಗರ್ಭಗಾಃ ॥ ೧೨.೧೯ ॥

ಇದೇ ಕಾಲದಲ್ಲಿ ಕಲಿ ಮತ್ತು ಇಂದ್ರಜಿತ್ ಮುಂತಾದ ರಕ್ಕಸರು,
ವಿಚಿತ್ರವೀರ್ಯಪುತ್ರ ಧೃತರಾಷ್ಟ್ರಪತ್ನಿ ಗಾಂಧಾರಿ ಗರ್ಭ ಸೇರಿದರು.

ತದಸ್ಯ ಸೋsನುಜೋsಶೃಣೋನ್ಮುನೀನ್ದ್ರದೂಷಿತಂ ಚ ತತ್ ।
ವಿಚಾರ್ಯ್ಯ ತು ಪ್ರಿಯಾಮಿದಂ ಜಗಾದ ವಾಸುದೇವಧೀಃ ॥ ೧೨.೨೦ ॥

ಋಷಿಶ್ರೇಷ್ಠರಿಂದ ಗಾಂಧಾರಿಯ ಗರ್ಭಪ್ರಾಪ್ತಿಯ ವಿಷಯವನ್ನು,
ತಿಳಿದುಕೊಂಡವನಾದ ಭಗವದ್ಭಕ್ತ ಧೃತರಾಷ್ಟ್ರನ  ತಮ್ಮನು.
ಮುಂದೇನೆಂದು ಯೋಚಿಸುತ ಪಾಂಡು ಹೇಳಿದ ಕುರಿತು ಕುಂತಿಯನ್ನು.

ಯ ಏವ ಮದ್ಗುಣಾಧಿಕಸ್ತತಃ ಸುತಂ ಸಮಾಪ್ನುಹಿ ।
ಸುತಂ ವಿನಾ ನ ನೋ ಗತಿಂ ಶುಭಾಂ ವದನ್ತಿ ಸಾಧವಃ ॥ ೧೨.೨೧ ॥

ನನಗಿಂತ ಗುಣದಲ್ಲಿ ಶ್ರೇಷ್ಠನಾದವನಿಂದ ಮಗನ ಪಡೆ ನೀನು,
ಮಗನಿಲ್ಲದೇ ನಮಗೆ ಸದ್ಗತಿ ಇಲ್ಲವೆಂದು ಸಾಧುಗಳ ನುಡಿ ತಾನು.

ತದಸ್ಯ ಕೃಚ್ಛ್ರತೋ ವಚಃ ಪೃಥಾsಗ್ರಹೀಜ್ಜಗಾದ ಚ  ।
ಮಮಾಸ್ತಿ ದೇವವಶ್ಯದೋ ಮನೂತ್ತಮಃ ಸುತಾಪ್ತಿದಃ  ॥ ೧೨.೨೨ ॥

ಪಾಂಡುವಿನಿಂದ ಬಂದ ಮಾತಾಗಿತ್ತು ಈ ರೀತಿ,
ಸ್ವೀಕರಿಸಿದಳು ಬಲುಕಷ್ಟದಿಂದ ಅವಳು ಕುಂತಿ.
ನನ್ನಲ್ಲಿರುವ ಮಂತ್ರದಿಂದ ದೇವತೆಗಳಾಗುತ್ತಾರೆ ವಶ,
ಸಿದ್ಧವಾಗಿದೆಎನಗೆ ಪುತ್ರಪ್ರಾಪ್ತಿಯ ಮಂತ್ರೋಪದೇಶ.

ನ ತೇ ಸುರಾನೃತೇ ಸಮಃ ಸುರೇಷು ಕೇಚಿದೇವ ಚ ।
ಅತಸ್ತವಾಧಿಕಂ ಸುರಂ ಕಮಾಹ್ವಯೇ ತ್ವದಾಜ್ಞಯಾ ॥ ೧೨.೨೩ ॥

ಮುಂದುವರಿದ ಕುಂತಿ ಹೇಳುತ್ತಾಳೆ ಪಾಂಡುವಿಗೆ,
ದೇವತೆಗಳ ಬಿಟ್ಟು ಮನುಜರಲ್ಲಿ ಸಮರಿಲ್ಲ ನಿನಗೆ.
ದೇವತೆಗಳಲ್ಲೂ ಕೆಲವರು ಮಾತ್ರ ನಿನಗೆ ಸಮಾನ,
ನಿನಗಧಿಕರೂ ಉಂಟಲ್ಲಿ ದೇವತೆಗಳ ಗಣ,
ಆಜ್ಞೆ ಮಾಡು ಯಾರಿಗೀಯಲಿ ನಾನು ಆಹ್ವಾನ.
[Contributed by Shri Govind Magal] 

Thursday, 11 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 15 - 18

ತದಾ ಮುನೀನ್ದ್ರಸಂಯುತಃ ಸದೋ ವಿಧಾತುರುತ್ತಮಮ್ ।
ಸ ಪಾಣ್ಡುರಾಪ್ತುಮೈಚ್ಛತ ನ್ಯವಾರಯಂಶ್ಚ ತೇ ತದಾ ॥೧೨.೧೫॥
ಮುನಿಶ್ರೇಷ್ಠರ ಸಮೂಹದ ನಡುವೆ ಪಾಂಡುವಿನ ಚಿತ್ತ,
ಮಾಡಿದ ತಾನು ಬ್ರಹ್ಮಲೋಕಗಮನದ ಬಯಕೆಯ ವ್ಯಕ್ತ.
ಆ ಸಮಯದಿ ಮುನಿಶ್ರೇಷ್ಠರುಗಳಿಂದ ತಡೆಯಲ್ಪಟ್ಟ ಆತ.

ಯದರ್ತ್ಥಮೇವ ಜಾಯತೇ ಪುಮಾನ್ ಹಿ ತಸ್ಯ ಸೋsಕೃತೇಃ ।
ಶುಭಾಂ ಗತಿಂ ನತು ವ್ರಜೇದ್ ದ್ಧ್ರುವಂ ತತೋ ನ್ಯವಾರಯನ್ ॥೧೨.೧೬॥
ಪ್ರಧಾನದೇವತಾಜನೇ ನಿಯೋಕ್ತುಮಾತ್ಮನಃ ಪ್ರಿಯಾಮ್ ।
ಬಭೂವ ಪಾಣ್ಡುರೇಷ ತದ್ ವಿನಾ ನ ತಸ್ಯ ಸದ್ಗತಿಃ   ॥೧೨.೧೭॥
ಜೀವಾತ್ಮದ ಯಾವ ಉದ್ದೇಶ ಸಾಧನೆಗಿರುತ್ತದೋ ನಡೆ,
ಸಾಧಿಸದಿರೆ ಸದ್ಗತಿ ಹೊಂದಲಾಗದೆಂದು ಮುನಿಗಳ ತಡೆ.
ಪಾಂಡು ಮುಖೇನ ಆಗಬೇಕಿತ್ತು ಉತ್ತಮ ದೇವತೆಗಳ ಜನನ,
ತನ್ನ ಪತ್ನಿ ಮಕ್ಕಳ ಪಡೆಯಬೇಕಿತ್ತು ಮಾಡಿ ನಿಯೋಗ ಕಾರಣ.
ಹಾಗಾಗದ ಹೊರತು ದೊರಕುತ್ತಿದ್ದಿಲ್ಲ ಅವಗೆ ಸದ್ಗತಿಯ ಹೂರಣ.

ಅತೋsನ್ಯಥಾ ಸುತಾನೃತೇ ವ್ರಜನ್ತಿ ಸದ್ಗತಿಂ ನರಾಃ ।
ಯಥೈವ ಧರ್ಮ್ಮಭೂಷಣೋ ಜಗಾಮ ಸನ್ಧ್ಯಕಾಸುತಃ   ॥೧೨.೧೮॥

ಮಕ್ಕಳ ಪಡೆಯದಿದ್ದರೂ ಜೀವಿತದಿ ಮಾನವ,
ಸದ್ಗತಿ ಹೊಂದುವುದು ಬೇರೆ ಬಗೆಯಿಂದ ಜೀವ.
ಸಂಧ್ಯಾವಳಿಯ ಪುತ್ರ ಧರ್ಮಾಂಗದನ ಉದಾಹರಣೆ,
ಮಕ್ಕಳಿರದ ನಿಯೋಗ ಬಳಸದವರ ಸಾಧನಾ ವಿವರಣೆ.
[Contributed by Shri Govind Magal]