Sunday, 4 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 113- 117

 ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ ತಮಪಿ ಸೋsಥ ನಿಜಾಸ್ತ್ರಮುಗ್ರಮ್ ।

ಸಞ್ಜಹ್ರ ಏವ ತತ ಆಸ ಚ ನಾಮತೋsಸಾವಙ್ಗಾರವರ್ಣ್ಣ ಇತಿ ವರ್ಣ್ಣವಿಪರ್ಯ್ಯಯೇಣ ॥೧೯.೧೧೩॥

ಪಾರ್ಥನಿಂದ ಸೋತು ಶಿಕ್ಷೆಗೊಳಗಾದ ಚಿತ್ರಸೇನ ಗಂಧರ್ವ ,

ಧರ್ಮರಾಜನಲ್ಲಿ ಶರಣಾಗಿ ಬಂದನವ ತಗ್ಗಿದಮೇಲೆ ಗರ್ವ .

ಆಗ ಅರ್ಜುನ ಮಾಡಿದ ತಾ ಬಿಟ್ಟ ಆಗ್ನೇಯಾಸ್ತ್ರದ ಉಪಸಂಹಾರ .

ಈ ಘಟನೆಯಿಂದ ಬದಲಾಯಿತವನ ಮೈಬಣ್ಣ ,

ಅಂದಿನಿಂದಾಯಿತವನ ಹೆಸರು ಅಂಗಾರವರ್ಣ .

 

ಗನ್ಧರ್ವ ಉಲ್ಬಣಸುರಕ್ತತನುಃ ಸ ಭೂತ್ವಾ ಸ್ವರ್ಣ್ಣಾವದಾತ ಉತ ಪೂರ್ವಮುಪೇತ್ಯ ಸಖ್ಯಮ್ ।

ಪಾರ್ತ್ಥೇನ ದುರ್ಲ್ಲಭಮಹಾಸ್ತ್ರಮಿದಂ ಯಯಾಚೇ ಜಾನನ್ನಪಿ ಸ್ಮ ನಹಿ ತಾದೃಶಮೇಷ ವೇದ ॥೧೯.೧೧೪ ॥

ಗಂಧರ್ವಗೆ ಮೊದಲಿದ್ದದ್ದು ಬಂಗಾರದ ಬಣ್ಣ ,

ಬೆಂಕಿಗೆ ಸುಟ್ಟಿದ್ದರಿಂದ ಆದದ್ದು ಅದು ಕೆಂಬಣ್ಣ .

ಅರ್ಜುನನ ಸಖ್ಯ ಬೆಳೆಸಿದ ಗಂಧರ್ವ ಬೇಡಿದ ಆಗ್ನೇಯಾಸ್ತ್ರ ,

ಅದವನಲ್ಲಿದ್ದರೂ ಅರ್ಜುನನಂತೆ ತಿಳಿದಿರಲಿಲ್ಲ ಅಸ್ತ್ರತಂತ್ರ .

 

ವಿದ್ಯಾ ಸುಶಿಕ್ಷಿತತಮಾ ಹಿ ಸುರೇಶಸೂನೌ ತಾಮಸ್ಯ ಚಾವದದಸಾವಪಿ ಕಾಲತೋsಸ್ಮೈ ।

ಗನ್ಧರ್ವಗಾಮವದದನ್ವಗದೃಶ್ಯವಿದ್ಯಾಂ ಪಶ್ಚಾದಿತಿ ಸ್ಮ ಪುರುಹೂತಸುತಸ್ಯ ವಾಕ್ಯಾತ್ ॥೧೯.೧೧೫॥

ತನಗೆ ಸಿದ್ಧಿಯಾಗಿದ್ದ ಅಸ್ತ್ರವಿದ್ಯೆಯನ್ನು ಅರ್ಜುನ ,

ಚಿತ್ರಸೇನ ಗಂಧರ್ವಗೆ ತಿಳಿಸಿ ಮಾಡಿದ ಪ್ರದಾನ .

ಗಂಧರ್ವ ಅದೃಶ್ಯವಿದ್ಯೆಯೊಂದಿತ್ತು ಆ ಚಿತ್ರಸೇನನಲ್ಲಿ ,

ಪಾರ್ಥನಿಚ್ಛೆಯಂತೆ ಅದನವನಿಗಿತ್ತ  ಕಾಲಾಂತರದಲ್ಲಿ.

 

ಆಧಿಕ್ಯತಃ ಸ್ವಗತಸಂವಿದ ಏವ ಸಾಮ್ಯೇ ನೈವೇಚ್ಛತಿ ಸ್ಮ ನಿಮಯಂ ಸ ಧನಞ್ಜಯೋsತ್ರ ।

ಧರ್ಮಾರ್ತ್ಥಮೇವ ಸ ತು ತಾಂ ಪರಿದಾಯ ತಸ್ಮೈ ಕಾಲೇನ ಸಂವಿದಮಮುಷ್ಯ ಚ ಧರ್ಮ್ಮತೋsಯಾತ್ ॥೧೯.೧೧೬॥

ಅರ್ಜುನನಲ್ಲಾಗಲೇ ಇತ್ತು ವಿದ್ಯೆ ಜ್ಞಾನದ ಆಧಿಕ್ಯ ,

ವಿದ್ಯಾವಿನಿಮಯ ಕೂಡಾ ಆಗಿರಲಿಲ್ಲ ಅಲ್ಲಿ ಶಕ್ಯ .

ಸೌಜನ್ಯ ಮತ್ತು ಗಂಧರ್ವಗೆ ತಂದುಕೊಡಲು ಪುಣ್ಯ ,

ಮುಂದೆ ಧರ್ಮದಿ ಗಂಧರ್ವವಿದ್ಯೆ ಪಡೆದ ಕಾರಣ .

 

ಪಾರ್ತ್ಥೇನ ಸೋsಪಿ ಬಹುಲಾಶ್ಚ ಕಥಾಃ ಕಥಿತ್ವಾ ಧೌಮ್ಯಸ್ಯ ಸಙ್ಗ್ರಹಣಮಾಹ ಪುರೋಹಿತತ್ವೇ ।

ದಾಸ್ಯಾಮಿ ದಿವ್ಯತುರಗಾನಿತಿ ಸೋsರ್ಜ್ಜುನಾಯಾ ವಾಚಂ ನಿಗದ್ಯ ದಿವಮಾರುಹದಪ್ಯಗುಸ್ತೇ ॥೧೯.೧೧೭॥

ಹೀಗೆ ಅರ್ಜುನನೊಂದಿಗೆ ಗೆಳೆತನ ಬೆಳೆಸಿದ ಗಂಧರ್ವ ಚಿತ್ರಸೇನ ,

ಕಥೆಗಳಿಂದ ಹೇಳಿದ ಧೌಮ್ಯರ ಪೌರೋಹಿತ್ಯ ಹೊಂದುವ ಕಾರಣ .

ಅರ್ಜುನನಿಗಾಗಿ ದೇವಲೋಕದ ಕುದುರೆಗಳ ಕೊಡುಗೆ ,

ಕೊಡುವೆನೆಂದ ಗಂಧರ್ವ ಹಾರಿದ ಅಂತರಿಕ್ಷದ ಕಡೆಗೆ .

ಆನಂತರ ಪ್ರಾರಂಭ ಪಾಂಡವರ ಮುಂದಿನ ನಡಿಗೆ .

Thursday, 1 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 107 - 112

ಷಣ್ಣಾಂ ಚ ಮದ್ಧ್ಯಗಮುದೀರ್ಣ್ಣಭುಜಂ ವಿಶಾಲವಕ್ಷಸ್ಥಲಂ ಬಹಳಪೌರುಷಲಕ್ಷಣಂ ಚ ।

ದೃಷ್ಟ್ವೈವ ಮಾರುತಿಮಸಾವುಪಲಪ್ಸ್ಯತೀಹ ಕೃಷ್ಣಾಮಿತಿ ಸ್ಮ ಚ ವಚಃ ಪ್ರವದನ್ತಿ ವಿಪ್ರಾಃ ॥೧೯.೧೦೭॥

ಆರುಜನರ ಮಧ್ಯ ಎದ್ದು ಕಾಣುತ್ತಿದ್ದ ಭೀಮಸೇನ ,

ಉಬ್ಬಿದ ತೋಳು ಅಗಲಎದೆ -ಎಲ್ಲ ಪೌರುಷ ಲಕ್ಷಣ .

ಇವನ ಕಂಡ ಬ್ರಾಹ್ಮಣರ ಮಾತು ,

ದ್ರೌಪದಿಯಾಗುವಳು ಇವನ ಸ್ವತ್ತು .

 

ರಾತ್ರೌ ದಿವಾ ಚ ಸತತಂ ಪಥಿ ಗಚ್ಛಮಾನಾಃ ಪ್ರಾಪುಃ ಕದಾಚಿದಥ ವಿಷ್ಣುಪದೀಂ ನಿಶಾಯಾಮ್ ।

ಸರ್ವಸ್ಯ ರಕ್ಷಿತುಮಗಾದಿಹ ಪೃಷ್ಠತಸ್ತು ಭೀಮೋsಗ್ರ ಏವ ಶತಮನ್ಯುಸುತೋsನ್ತರಾsನ್ಯೇ ॥೧೯.೧೦೮॥

ರಾತ್ರಿ ಹಗಲು ನಿರಂತರ ನಡೆಯುತ್ತಿದ್ದ ಪಾಂಡವರು,

ಒಂದಿನ ರಾತ್ರಿ ಹೊತ್ತಿಗೆ ಗಂಗಾತೀರವ ತಲುಪಿದರು .

ಎಲ್ಲರ ಹಿಂದುಗಡೆ ಭೀಮಸೇನನ ಕಾವಲಿದ್ದರೆ ,

ಮಧ್ಯ ಉಳಿದವರ ಮುಂದೆ ಅರ್ಜುನನ ಪಹರೆ .

 

ಪ್ರಾಪ್ತೇ ತದೋಲ್ಮುಕಧರೇsರ್ಜ್ಜುನ ಏವ ಗಙ್ಗಾಂ ಗನ್ಧರ್ವರಾಜ ಇಹ ಚಿತ್ರರಥೋsರ್ದ್ಧರಾತ್ರೇ

ದೃಷ್ಟ್ವೈವ ವಿಪ್ರರಹಿತಾನುದಕಾನ್ತರಸ್ಥಃ ಕ್ಷತ್ರಾತ್ಮಜಾ ಇತಿ ಹ ಧರ್ಷಯಿತುಂ ಸ ಚಾsಗಾತ್ ॥೧೯.೧೦೯॥

ಪಂಜನ್ನು ಹಿಡಿದು ಅರ್ಜುನ ಮುಂದೆ ಸಾಗುತ್ತಿದ್ದ ,

ಆ ನದಿ ನೀರಲ್ಲಿ ಚಿತ್ರರಥನೆಂಬ ಗಂಧರ್ವ ತಾನಿದ್ದ .

ಕ್ಢತ್ರಿಯರಿವರು ಎಂದರಿತು ಆಕ್ರಮಣಕ್ಕೆ ಮುಂದಾದ .

 

ಹನ್ತಾsಸ್ಮಿ ವೋ ಹ್ಯುಪಗತಾನುದಕಾನ್ತಮಸ್ಯಾ ನದ್ಯಾಶ್ಚ ಮರ್ತ್ತ್ಯಚರಣಾಯ ನಿಷಿದ್ಧಕಾಲೇ ।

ಇತ್ಥಂ ವದನ್ತಮಮುಮಾಹ ಸುರೇನ್ದ್ರಸೂನುರ್ಗ್ಗನ್ಧರ್ವ ನಾಸ್ತ್ರವಿದುಷಾಂ ಭಯಮಸ್ತಿ ತೇsದ್ಯ ॥೧೯.೧೧೦॥

ಮನುಷ್ಯರು ಓಡಾಡಬಾರದ ರಾತ್ರಿಸಮಯ ,

ನದಿತೀರಕ್ಕೆ ಬಂದ ನಿಮ್ಮನ್ನು ಕೊಲ್ಲುವೆನೆಂದವ .

ಅರ್ಜುನನೆಂದ -ಅಸ್ತ್ರ ಶಸ್ತ್ರ ಗೊತ್ತು ನಮಗೆ ,

ನಿನ್ನಿಂದಾವ ಭಯವೂ ಒದಗದು ಎಮಗೆ .

 

ಸರ್ವಂ ಹಿ ಫೇನವದಿದಂ ಬಹುಲಂ ಬಲಂ ತೇ ನಾರ್ತ್ಥಪ್ರದಂ ಭವತಿ ಚಾಸ್ತ್ರವಿದಿ ಪ್ರಯುಕ್ತಮ್ ।

ಇತ್ಯುಕ್ತವನ್ತಮಮುಮುತ್ತಮಯಾನಸಂಸ್ಥೋ ಬಾಣಾನ್ ಕ್ಷಿಪನ್ನಭಿ ಸಸಾರ ಸುರೇಶಭೃತ್ಯಃ ॥೧೯.೧೧೧॥

ಆದರೂ ನಿನ್ನ ಎಲ್ಲಾ ಬಲದ ಉಪಯೋಗ ,

ನೀರಗುಳ್ಳೆಯಂತೆ ಅದು ವ್ಯರ್ಥವಾಗುವುದಾಗ .

ಗಂಧರ್ವನ ಕುರಿತು ಅರ್ಜುನ ಮೇಲಿನ ಮಾತಂದ ,

ರಥದಲ್ಲಿ ಕೂತ ಚಿತ್ರರಥ ಬಾಣಗಳ ಬಿಡುತ್ತಾ ಬಂದ .

 

ಆಗ್ನೇಯಮಸ್ತ್ರಮಭಿಮನ್ತ್ರ್ಯ ತದೋಲ್ಮುಕೇ ಸ ಚಿಕ್ಷೇಪ ಶಕ್ರತನಯೋsಸ್ಯ ರಥಶ್ಚ ದಗ್ಧಃ ।

ತಂ ಚಾಗ್ನಿನಾ ಪರಿಗೃಹೀತಮಭಿಪ್ರಗೃಹ್ಯ ಕೇಶೇಷು ಸಞ್ಚಕರ್ಷಾSಶು ಸುರೇನ್ದ್ರಸೂನುಃ ॥೧೯.೧೧೨॥

ಅರ್ಜುನ ಹಿಡಿದ ಕೊಳ್ಳಿಗೇ ಆಗ್ನೇಯಾಸ್ತ್ರ ಅಭಿಮಂತ್ರಿಸಿದ ,

ರಥವ ಸುಟ್ಟುಕೊಂಡ ಚಿತ್ರರಥನ ಕೂದಲ ಹಿಡಿದು ಎಳೆದ . 

[Contributed by Shri Govind Magal]


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 101 - 106

 [ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ಸಮಯದಲ್ಲಿ ದ್ವಾರಕಾಪಟ್ಟಣದಲ್ಲಿ ಪಿತೂರಿಯೊಂದು ನಡೆಯಿತು:]

ತಸ್ಯಾನ್ತರೇ ಹೃದಿಕಸೂನುರನನ್ತರಂ ಸ್ವಂ ಶ್ವಾಫಲ್ಕಿಬುದ್ಧಿಬಲಮಾಶ್ರಿತ ಇತ್ಯುವಾಚ ।

ಸತ್ರಾಜಿದೇಷ ಹಿ ಪುರಾ ಪ್ರತಿಜಜ್ಞ ಏನಾಮಸ್ಮತ್ಕೃತೇ ಸ್ವತನಯಾಂ ಮಣಿನಾ ಸಹೈವ ॥೧೯.೧೦೧॥

ಸರ್ವಾಂಶ್ಚ ನಃ ಪುನರಸಾವವಮತ್ಯ ಕೃಷ್ಣಾಯಾದಾತ್ ಸುತಾಂ ಜಹಿ ಚ ತಂ ನಿಶಿ ಪಾಪಬುದ್ಧಿಮ್ ।

ಆದಾಯ ರತ್ನಮುಪಯಾಹಿ ಚ ನೌ ವಿರೋಧೇ ಕೃಷ್ಣಸ್ಯ ದಾನಪತಿನಾ ಸಹ ಸಾಹ್ಯಮೇಮಿ ॥೧೯.೧೦೨॥

ಈಮಧ್ಯೆ ಅತ್ತ ದ್ವಾರಕೆಯಲ್ಲಿ ,

ಪಿತೂರಿಯೊಂದು ಜರುಗಿತಲ್ಲಿ .

ಕೃತವರ್ಮ ಅಕ್ರೂರನ ಮಾತ ಆಲಿಸಿ ತನ್ನ ತಮ್ಮ ಶತಧನ್ವಗೆ ಹೀಗೆ ಹೇಳಿದ ,

ಸತ್ರಾಜಿತ ಸತ್ಯಭಾಮೆ ಜೊತೆ ಮಣಿಯನ್ನೂ ನಮಗೆ ಕೊಡುವುದಾಗಿ ಹೇಳಿದ್ದ .

ಆದರೆ ನಮ್ಮನ್ನ ಕಡೆಗಣಿಸಿ ಮಗಳನ್ನು ಕೃಷ್ಣಗೆ ಕೊಟ್ಟ ,

ಅವನನ್ನು ರಾತ್ರಿವೇಳೆ ನೀ ಕೊಂದುಬಿಡು ಅವ ಪಾಪಿಷ್ಟ.

ಅವನನ್ನು ಕೊಂದುಬಿಟ್ಟು ಆ ಮಣಿಯನ್ನು ನೀನು ತಂದುಬಿಡು ,

ಕೃಷ್ಣ ವಿರೋಧಿಸಿದರೆ ಅಕ್ರೂರನೊಡನೆ ನಾನಿದ್ದೇನೆ ಚಿಂತೆ ಬಿಡು .

 

ಇತ್ಯುಕ್ತ ಆಶು ಕುಮತಿಃ ಸ ಹಿ ಪೂರ್ವದೇಹೇ ದೈತ್ಯೋ ಯತಸ್ತದಕರೋದಥ ಸತ್ಯಭಾಮಾ ।

ಆನನ್ದಸಂವಿದಪಿ ಲೋಕವಿಡಮ್ಬನಾಯ ತದ್ದೇಹಮಸ್ಯ ತಿಲಜೇ ಪತಿಮಭ್ಯುಪಾಗಾತ್ ॥೧೯.೧೦೩॥

ಇದನ್ನು ಕೇಳಿದ ಆ ಶತಧನ್ವ ಪೂರ್ವದಲ್ಲಿ ಒಬ್ಬ ದೈತ್ಯ ,

ಆ ಕೆಟ್ಟಬುದ್ಧಿಯವ ಮಾಡಿಬಿಟ್ಟ ಸತ್ರಾಜಿತನ ಹತ್ಯಾ .

ಎಲ್ಲ ಬಲ್ಲ ಸತ್ಯಭಾಮೆ ಲೋಕಾನುಸರಣೆಗಾಗಿ ತಂದೆ ಶವವ ಎಣ್ಣೆಯಲ್ಲಿಟ್ಟಳು ,

ಸತ್ರಾಜಿತನ ಶವರಕ್ಷಣೆ ಮಾಡಿ ತಾನು ಗಂಡ ಶ್ರೀಕೃಷ್ಣನ ಬಳಿಗೆ ಹೊರಟಳು .

 

ಶ್ರುತ್ವಾ ತದೀಯವಚನಂ ಭಗವಾನ್ ಪುರೀಂ ಸ್ವಾಮಾಯಾತ ಏವ ತು ನಿಶಮ್ಯ ಮಹೋತ್ಸವಂ ತಮ್ ।

ಪಾಞ್ಚಾಲರಾಜಪುರುಷೋದಿತಮಾಶು ವೃಷ್ಣಿವರ್ಯ್ಯೈರಗಾನ್ಮುಸಲಿನಾ ಸಹ ತತ್ಪುರೀಂ ಚ ॥೧೯.೧೦೪॥

ಸತ್ಯಭಾಮೆಯ ಮಾತ ಕೇಳಿದ ಶ್ರೀಕೃಷ್ಣ ತನ್ನ ಪಟ್ಟಣದತ್ತ ಹೊರಟ ,

ಆ ಹೊತ್ತಿಗೆ ದ್ರೌಪದೀ ಸ್ವಯಂವರದ ಸುದ್ದಿ ತಂದ ಪಾಂಚಾಲದೂತ .

ಆಗ ಯಾದವರು ಬಲರಾಮನಿಂದ ಕೂಡಿದವನಾಗಿ ,

ಹೊರಟ ತಾನು ಪಾಂಚಾಲಪಟ್ಟಣದ ಕಡೆಗೆ ತಿರುಗಿ .

 

ಭೀಮೋsಪಿ ರುದ್ರವರರಕ್ಷಿತರಾಕ್ಷಸಂ ತಂ ಹತ್ವಾ ತೃಣೋಪಮತಯಾ ಹರಿಭಕ್ತವನ್ದ್ಯಃ ।

ಉಷ್ಯಾಥ ತತ್ರ ಕತಿಚಿದ್ದಿನಮಚ್ಯುತಸ್ಯ ವ್ಯಾಸಾತ್ಮನೋ ವಚನತಃ ಪ್ರಯಯೌ ನಿಜೈಶ್ಚ ॥೧೯.೧೦೫॥

ಇತ್ತ ರುದ್ರವರ ರಕ್ಷಿತ ಬಕನ ಭೀಮ ಹುಲ್ಲಿನಂತೆ ಸೀಳಿ ಕೊಂದ ,

ದೈವಭಕ್ತರಿಂದ ವಂದ್ಯನಾಗಿ ಕೆಲಕಾಲ ಭೀಮ ಅಲ್ಲೇ ವಾಸಿಸಿದ .

ನಂತರ ವೇದವ್ಯಾಸರ ಮಾತನ್ನು ಅನುಸರಿಸಿ ,

ತನ್ನವರೊಡನೆ ಹೊರಟ ಪಾಂಚಾಲನಗರ ಅರಸಿ .

 

ಮಙ್ಗಲ್ಯಮೇತದತುಲಂ ಪ್ರತಿ ಯಾತ ಶೀಘ್ರಂ ಪಾಞ್ಚಾಲಕಾನ್  ಪರಮಭೋಜನಮತ್ರ ಸಿದ್ಧ್ಯೇತ್ ।

ವಿಪ್ರೈರಿತಸ್ತತ ಇತೀರಿತವಾಕ್ಯಮೇತೇ ಶೃಣ್ವನ್ತ ಏವ ಪರಿ ಚಕ್ರಮುರುತ್ತರಾಶಾಮ್ ॥೧೯.೧೦೬॥

ನಡೆದಿದೆ ಅಲ್ಲಿ ಮಂಗಳಕರವಾದ ಮದುವೆಯ ಹಬ್ಬ ,

ಪಾಂಚಾಲದಲ್ಲಿ ಒಳ್ಳೆಯ ಊಟತಿಂಡಿಗಳವು ಲಭ್ಯ .

ಹೀಗಿತ್ತು ಅಲ್ಲಲ್ಲಿ ಸಿಕ್ಕ ಬ್ರಾಹ್ಮಣರೆಲ್ಲರ ಮಾತು ,

ಕೇಳಿದವರು ಹೊರಟರು ಉತ್ತರದಿಕ್ಕನ್ನು ಕುರಿತು.