Monday 5 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 83 - 88


ದೇವಮೀಮಾಂಸಿಕಾದ್ಯನ್ತಂ ಕೃತ್ವಾ ಪೈಲಮಥಾsದಿಶತ್ ।
ಶೇಷಂ ಚ ಮದ್ಧ್ಯಕರಣೇ ಪುರಾಣಾನ್ಯಥ ಚಾಕರೋತ್  ॥೧೦.೮೩॥

ವೇದವ್ಯಾಸರಿಂದ ದೈವೀಮೀಮಾಂಸದ ಆದಿ -ಅಂತ್ಯ ಭಾಗದ ರಚನೆ,
ಪೈಲಮುನಿಗೆ  ಇತ್ತರು ಉಳಿದ ಮಧ್ಯಭಾಗವ ರಚಿಸಲು ಆಜ್ಞೆ.
ತದನಂತರ ವೇದವ್ಯಾಸರೇ ಮಾಡಿದರು ಪುರಾಣಗಳ ರಚನೆ

ಶೈವಾನ್ ಪಾಶುಪತಾಚ್ಚಕ್ರೇ ಸಂಶಯಾರ್ತ್ಥಂ ಸುರದ್ವಿಷಾಮ್ ।
ವೈಷ್ಣವಾನ್ ಪಞ್ಚರಾತ್ರಾಚ್ಚ ಯಥಾರ್ತ್ಥಜ್ಞಾನಸಿದ್ಧಯೇ  ॥೧೦.೮೪॥

ದೈತ್ಯರ ಸಮೂಹಕ್ಕೆ ಸಂಶಯ ಮತ್ತು ಮೋಹನಾರ್ಥ,
ಪಾಶುಪತಾಗಮ ಆಧರಿಸಿ ಮಾಡಿದರು ಶೈವಗ್ರಂಥ.
ಅರ್ಹ ಯಥಾರ್ಥಜ್ಞಾನಕ್ಕಾಗಿ ಪಂಚರಾತ್ರಾಗಮನ,
ಸಂಗ್ರಹಿಸಿ ಮಾಡಿದರು ವೈಷ್ಣವಪುರಾಣಗಳ ರಚನ.

ಬ್ರಾಹ್ಮಾಂಶ್ಚ ವೇದತಶ್ಚಕ್ರೇ ಪುರಾಣಗ್ರನ್ಥಸಙ್ಗ್ರಹಾನ್ ।
ಏವಂ ಜ್ಞಾನಂ ಪುನಃ ಪ್ರಾಪುರ್ದ್ದೇವಾಶ್ಚ ಋಷಯಸ್ತಥಾ   ॥೧೦.೮೫॥

ಸನತ್ಕುಮಾರಪ್ರಮುಖಾ ಯೋಗಿನೋ ಮಾನುಷಾಸ್ತಥಾ ।
ಕೃಷ್ಣ ದ್ವೈಪಾಯನಾತ್ ಪ್ರಾಪ್ಯ ಜ್ಞಾನಂ ತೇ ಮುಮುದುಃ ಸುರಾಃ  ॥೧೦.೮೬ ॥

ದುರ್ಜನ ಮೋಹಕ್ಕಾಗಿ ಬ್ರಹ್ಮನನ್ನೇ ಪ್ರತಿಪಾದಿಸುವ ಪುರಾಣ,
ವೇದದ ಅಪಾತವಾದ ಅರ್ಥಗಳ  ಆಧರಿಸಿ ಗ್ರಂಥ ಸಂಗ್ರಹಣ.
ವ್ಯಾಸಾವತಾರದಿಂದ ದೇವತೆ ಋಷಿಗಳು ಮೊದಲಾದವರಿಗೆ ಆಯಿತು ಜ್ಞಾನ,
ಸನತ್ಕುಮಾರ ಮೊದಲಾದ ಯೋಗಿಗಳಿಗೂ ಮನುಷ್ಯರಿಗೂ ಅರಿವಿನ ಪಾನ.

ಸಮಸ್ತವಿಜ್ಞಾನಗಭಸ್ತಿಚಕ್ರಂ ವಿತಾಯವಿಜ್ಞಾನಮಹಾದಿವಾಕರಃ ।
ನಿಪೀಯ ಚಾಜ್ಞಾನತಮೋ ಜಗತ್ತತಂ ಪ್ರಭಾಸತೇ ಭಾನುರಿವಾವಭಾಸಯನ್  ॥೧೦.೮೭॥

ಜ್ಞಾನಮಯ ಮಹಾಸೂರ್ಯರಾದ ವೇದವ್ಯಾಸ,
ಹರಡಿದರೆಲ್ಲೆಡೆ ತಮ್ಮ ಜ್ಞಾನಕಿರಣಗಳ ಪ್ರಕಾಶ.
ಅಜ್ಞಾನವೆಂಬ ಕತ್ತಲ ಕಡಿದು ಕುಡಿದ ಧೀರ,
ಜಗವ ಬೆಳಗಿಸಿ ಹೊಳೆಸಿದ ಅರಿವಿನ ಸೂರ್ಯ.

ಚತುರ್ಮ್ಮುಖೇಶಾನಸುರೇನ್ದ್ರಪೂರ್ವಕೈಃ ಸದಾ ಸುರೈಃ ಸೇವಿತಪಾದಪಲ್ಲವಃ ।
ಪ್ರಕಾಶಯಂಸ್ತೇಷು ಸದಾತ್ಮಗುಹ್ಯಂ ಮುಮೋದ ಮೇರೌ ಚ ತಥಾ ಬದರ್ಯ್ಯಾಮ್  ॥೧೦.೮೮ ॥

ಬ್ರಹ್ಮ ರುದ್ರ ದೇವೇಂದ್ರ ಮುಂತಾದ ದೇವತೆಗಳಿಂದ,
ಸೇವಿತವಾದ ಚಿಗುರೆಲೆ ಕಮಲದಂಥ ವ್ಯಾಸಪಾದ.
ಪ್ರಕಟಿಸಿದರು ಸಮೀಚೀನ ಗುಣಾದಿ ರಹಸ್ಯ ಜ್ಞಾನ,
ಮಾಡಿದರು ಮೇರು ಬದರೀಕ್ಷೇತ್ರದಲ್ಲಿ ಸುಖಯಾನ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ವ್ಯಾಸಾವತಾರಾನುವರ್ಣ್ಣನಂ ನಾಮ ದಶಮೋsಧ್ಯಾಯಃ ॥
ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತ ತಾತ್ಪರ್ಯನಿರ್ಣಯ ವಾದ,
ವ್ಯಾಸಾವತಾರ ವರ್ಣನೆ ಎಂಬ ಹತ್ತನೇ ಅಧ್ಯಾಯ,
ಹದಿನೆಂಟರ ಬಂಟಗೆ ಅರ್ಪಿಸಿದ ಧನ್ಯತಾ ಭಾವ.
ಶ್ರೀಕೃಷ್ಣಾರ್ಪಣಮಸ್ತು॥
[Contributed by Shri Govind Magal]

No comments:

Post a Comment

ಗೋ-ಕುಲ Go-Kula