Wednesday 14 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 51 - 55

ಮೀಮಾಂಸಮಾನಂ ತಮವಾಪ ಗಙ್ಗಾ ಸುತಂ ಸಮಾದಾಯ ಪತಿಂ ಜಗಾದ ಚ ।
ಅಯಂ ಸುತಸ್ತೇ ಪರಮಾಸ್ತ್ರವೇತ್ತಾ ಸಮರ್ಪ್ಪಿತೋ ವೀರ್ಯ್ಯಬಲೋಪಪನ್ನಃ ॥೧೧.೫೧॥
‘ಇವನು ಯಾರಿರಬಹುದು’ ಎಂದು ಶಂತನು ಮಾಡುತ್ತಿರಲು ವಿಚಾರ,
ಗಂಗೆ ಮಗನನ್ನು ಕರೆದುಕೊಂಡು ಬರುತ್ತಾಳೆ ಶಂತನುವಿನ ಹತ್ತಿರ.
ಅಸ್ತ್ರವೇತ್ತನಾದ ನಿನ್ನ ಸುತನೀತ;ವೀರ್ಯ ಬಲದಿಂದ ಕೂಡಿರುವಾತ,
ಒಪ್ಪಿಸಿಕೋ ಮಹಾರಾಜ-ನಿನಗೆ ಆಗುತ್ತಿದ್ದಾನೆ ಈಗ  ಸಮರ್ಪಿತ.

ಅಸ್ಯಾಗ್ರಜಾಃ ಸ್ವಾಂ ಸ್ಥಿತಿಮೇವ ಯಾತಾ ಹರೇಃ ಪದಾಮ್ಭೋಜಸುಪಾವಿತೇ ಜಲೇ ।
ತನೂರ್ಮ್ಮದೀಯೇ ಪ್ರಣಿಧಾಯ ತತ್ ತ್ವಂ ತಾನ್ ಮಾ ಶುಚೋsನೇನ ಚ ಮೋದಮಾನಃ ॥೧೧.೫೨॥
ಇತಿ ಪ್ರದಾಯಾಮುಮದೃಶ್ಯತಾಮಗಾದ್ ಗಙ್ಗಾ ತಮಾದಾಯ ಯಯೌ ಸ್ವಕಂ ಗೃಹಮ್ ।
ರಾಜಾsಭಿಷಿಚ್ಯಾಥ ಚ ಯೌವರಾಜ್ಯೇ ಮುಮೋದ ತತ್ಸದ್ಗುಣತರ್ಪ್ಪಿತೋ ಭೃಶಮ್ ॥೧೧.೫೩॥
ಈ ದೇವವ್ರತನ ಅಣ್ಣಂದಿರುಗಳೆಲ್ಲಾ,
ಹರಿಪಾದತೊಳೆದ ನನ್ನಲ್ಲಿ ಶರೀರ ಬಿಟ್ಟವರೆಲ್ಲ.
ಅವರೆಲ್ಲ ಹೊಂದಿದ್ದಾರಾಗಲೇ ತಮ್ಮ ಮೂಲರೂಪ,
ಇವನೊಂದಿಗೆ ಸುಖಿಸು-ಅವರ ಬಗ್ಗೆ ಬೇಡ ಸಂತಾಪ.
ಹೀಗೆ ದೇವವ್ರತನನ್ನು ಶಂತನುವಿಗೊಪ್ಪಿಸಿ ಅದೃಶ್ಯಳಾಗುತ್ತಾಳೆ ಗಂಗೆ,
ಶಂತನು ದೇವವ್ರತನನ್ನು ಯುವರಾಜನನ್ನಾಗಿಸಿ ಬೀರುತ್ತಾನೆ ಸಂತುಷ್ಟ ನಗೆ.

ಪುನಃ ಸ ಪಿತ್ರಾsನುಮತೋ ಬೃಹಸ್ಪತೇರವಾಪ ವೇದಾನ್ ಪುರುಷಾಯುಷೋsರ್ದ್ಧತಃ ।
ರಾಮಾತ್ ತಥಾsಸ್ತ್ರಾಣಿ ಪುನಸ್ತ್ವವಾಪ ತಾವದ್ಭಿರಬ್ದೈಸ್ತ್ರಿಶತೈಶ್ಚ ತತ್ತ್ವಮ್ ॥೧೧.೫೪॥

ಮತ್ತೆ ದೇವವ್ರತ ತಂದೆಯಿಂದ ಪಡೆದುಕೊಂಡು  ಅನುಮತಿ,
ಪಡೆದ ಬೃಹಸ್ಪತ್ಯಾಚಾರ್ಯರಿಂದ ಐವತ್ತು ವರ್ಷ ವೇದ ಪರಿಣಿತಿ.
ಮತ್ತೆ ಐವತ್ತು ವರ್ಷ ಪರಶುರಾಮನಲ್ಲಿ ಅಸ್ತ್ರವಿದ್ಯೆ,
ಪಡೆದುಕೊಂಡ ಮುನ್ನೂರು ವರ್ಷತನಕ ತತ್ತ್ವ ವಿದ್ಯೆ.

ಸ ಸರ್ವವಿತ್ತ್ವಂ ಸಮವಾಪ್ಯ ರಾಮಾತ್ ಸಮಸ್ತವಿದ್ಯಾಧಿಪತೇರ್ಗ್ಗುಣಾರ್ಣ್ಣವಾತ್ ।
ಪಿತುಃ ಸಮೀಪಂ ಸಮವಾಪ್ಯ ತಂ ಚ ಶುಶ್ರೂಷಮಾಣಃ ಪ್ರಮುಮೋದ ವೀರಃ ॥೧೧.೫೫॥

ಹೀಗೆ ಯುವರಾಜ ದೇವವ್ರತ ಎಲ್ಲಾ ವಿದ್ಯೆಗಳ ಒಡೆಯನಾದ,
ಗುಣಸಾಗರ ಪರಶುರಾಮನಿಂದ ಸರ್ವಜ್ಞತೆ ಹೊಂದಿದ.
ತಂದೆಯ ಬಳಿಯಿದ್ದು ಸೇವೆಮಾಡುತ್ತಾ ತಾನೂ ಸಂತಸದಿಂದಿದ್ದ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula