Friday 31 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 125 - 129

ಇತ್ಯಶೇಷಪುರಾಣೇಭ್ಯಃ ಪಞ್ಚರಾತ್ರೇಭ್ಯ ಏವ ಚ ।
ಭಾರತಾಚ್ಚೈವ ವೇದೇಭ್ಯೋ ಮಹಾರಾಮಾಯಣಾದಪಿ ॥೯.೧೨೫॥

ಪರಸ್ಪರವಿರೋಧಸ್ಯ ಹಾನಾನ್ನಿರ್ಣ್ಣೀಯ ತತ್ತ್ವತಃ ।
ಯುಕ್ತ್ಯಾ ಬುದ್ಧಿಬಲಾಚ್ಚೈವ ವಿಷ್ಣೋರೇವ ಪ್ರಸಾದತಃ ॥೯.೧೨೬॥

ಬಹುಕಲ್ಪಾನುಸಾರೇಣ ಮಯೇಯಂ ಸತ್ಕಥೋದಿತಾ ।
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ॥೯.೧೨೭॥

(ಆಚಾರ್ಯರು ತಾವು ಪ್ರಸ್ತುತಪಡಿಸಿದ ರಾಮಾಯಣ,
ನಿರ್ಣಯಕ್ಕೆ ತೋರಿಸಿ ಕೊಟ್ಟಿದ್ದಾರೆ ಯಾವ್ಯಾವ್ದು ಪ್ರಮಾಣ)
ಸಕಲ ಪುರಾಣ ,ಪಂಚರಾತ್ರ ಮಹಾಭಾರತದಲ್ಲಿ,
ವೇದ ಮೂಲರಾಮಾಯಣದಲ್ಲಿ ಸೇರಿದ್ದ ಕಸ ತೆಗೆದಿಲ್ಲಿ.
ನಿವಾರಿಸಿ ಪರಸ್ಪರ ವಿರೋಧ ; ಶಾಸ್ತ್ರ  ಯುಕ್ತಿ ಪ್ರಜ್ಞಾಬಲದಿಂದ,
ನಿರ್ಣಯಿಸಿ ತತ್ವಕ್ಕಾಗದಂತೆ ಬಾಧ; ಭಗವಂತನ ಅನುಗ್ರಹದಿಂದ.
ಆಗಿದೆಯಿಲ್ಲಿ ಕಲ್ಪಕ್ಕನುಗುಣವಾಗಿ ರಾಮಾಯಣದ ಪ್ರಸ್ತುತಿ,
ಒಂದಲ್ಲದೆ ಅನೇಕ ಗ್ರಂಥಗಳಾಶ್ರಯವಾದಿದಕೆ ಬೇಡ ಅಸಮ್ಮತಿ.

ಕ್ವಚಿನ್ಮೋಹಾಯಾಸುರಾಣಾಂ ವ್ಯತ್ಯಾಸಃ ಪ್ರತಿಲೋಮತಾ ।
ಉಕ್ತಾ ಗ್ರನ್ಥೇಷು ತಸ್ಮಾದ್ಧಿ ನಿರ್ಣ್ಣಯೋSಯಂ ಕೃತೋ ಮಯಾ ॥೯.೧೨೮॥

ಅಸುರಮೋಹನಕ್ಕಾಗಿ ಗ್ರಂಥಗಳಲ್ಲಿ ವ್ಯತ್ಯಾಸ ಪ್ರತಿಲೋಮ,
ಅವೆಲ್ಲದರ ನಿವಾರಣೆಗಾಗಿ ಕೊಟ್ಟಿದ್ದೇನೆ ನಿರ್ಣಯ ಎಂಬ ಸುಮ.

ಏವಂ ಚ ವಕ್ಷ್ಯಮಾಣೇಷು ನೈವಾsಶಙ್ಕ್ಯಾ ವಿರುದ್ಧತಾ ।
ಸರ್ವಕಲ್ಪಸಮಶ್ಚಾಯಂ ಪಾರಾವರ್ಯ್ಯಕ್ರಮಃ ಸದಾ ॥೯.೧೨೯॥

ಹೇಳಿದ ಈ ಕಥೆಗಳಲ್ಲಿ ಬಾರದಿರಲಿ ಶಂಕೆ ವಿರೋಧ,
ಈ ಕ್ರಮ ಎಲ್ಲಾ ಕಲ್ಪದಲ್ಲೂ ಸರಿಸಾಧಾರಣ ಅಬಾಧ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula