Thursday 16 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 60 - 62


ಅಥ ರಾಘವಃ ಸ್ವಭವನೋಪಗತೌ ವಿದಧೇ ಮತಿಂ ಸಹ ಜನೈರಖಿಲೈಃ ।
ಸಮಘೋಷಯಚ್ಚ ಯ ಇಹೇಚ್ಛತಿ ತತ್ ಪದಮಕ್ಷಯಂ ಸಪದಿ ಮೈತ್ವಿತಿ ಸಃ ॥೯.೬೦॥

ತದನಂತರ ಶ್ರೀರಾಮ ಮಾಡುತ್ತಾನೆ ಆತನ ಸ್ವಧಾಮಕ್ಕೆ ತೆರಳುವ ತೀರ್ಮಾನ,
ಯೋಗ್ಯ ಜೀವಗಳನ್ನೂ ತನ್ನೊಂದಿಗೆ ಕರೆದೊಯ್ವ ಕರುಣೆಯ ಮನ.
ಘೋಷಿಸಿದ ಯಾರ್ಯಾರು ಮೋಕ್ಷ ಬಯಸುವಿರೋ ಹಿಂಬಾಲಿಸಿ ಎಂಬ ಆಹ್ವಾನ.

ಶ್ರುತ್ವಾ ತು ತದ್ ಯ ಇಹ ಮೋಕ್ಷಪದೇಚ್ಛವಸ್ತೇ ಸರ್ವೇ ಸಮಾಯಯುರಥಾsತೃಣಮಾಪಿಪೀಲಮ್ ।
ರಾಮಾಜ್ಞಯಾ ಗಮನಶಕ್ತಿರಭೂತ್ ತೃಣಾದೇರ್ಯ್ಯೇ ತತ್ರ ದೀರ್ಘಭವಿನೋ ನಹಿ ತೇ ತದೈಚ್ಛನ್ ॥೯.೬೧ ॥

ಕೇಳುತ್ತಾ ಶ್ರೀ ರಾಮಚಂದ್ರನ ವಿಶಿಷ್ಟವಾದ  ಘೋಷಣೆ,
ಇರುವೆ ,ಸ್ಥಾವರ ಕಡ್ಡಿಯೂ ಹೊರಟವಂತೆ ಬಂದು ಚಲನೆ.
ಯಾರ್ಯಾರಿಗೆ ಇತ್ತೋ ಸಂಸಾರವಾಸ ದೀರ್ಘಕಾಲ,
ಅವರ್ಯಾರೂ ರಾಮನ ಜೊತೆ ಹೊರಡ ಬಯಸಲಿಲ್ಲ.

ಸಂಸ್ಥಾಪಯಾಮಾಸ ಕುಶಂ ಸ್ವರಾಜ್ಯೇ ತೈಃ ಸಾಕಮೇವ ಚ ಲವಂ ಯುವರಾಜಮೀಶಃ ।
ಸಂಸ್ಥಾಪ್ಯ ವಾಲಿತನಯಂ ಕಪಿರಾಜ್ಯ ಆಶು ಸೂರ್ಯ್ಯಾತ್ಮಜೋsಪಿ ರಘುವೀರಸಮೀಪಮಾಯಾತ್ ॥೯.೬೨ ॥

ಶ್ರೀರಾಮ ಮಾಡಿದ ಕುಶಗೆ ಪಟ್ಟಾಭಿಷೇಕ,
ಲವನ ಮಾಡಿದ ಯುವರಾಜನಾಗಿ ನೇಮಕ.
ಸುಗ್ರೀವ ಅಂಗದನ ಕಪಿರಾಜ್ಯದ ರಾಜನಾಗಿ ಮಾಡಿದ,
ಅಂಗದಗೆ ರಾಜ್ಯಾಭಿಷೇಕ ಮಾಡಿ ರಾಮನ ಬಳಿ ಬಂದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula