Thursday 16 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 63 - 68

ಅಥಾsಹ ವಾಯುನನ್ದನಂ ಸ ರಾಘವಃ ಸಮಾಶ್ಲಿಷನ್ ।
ತವಾಹಮಕ್ಷಗೋಚರಃ ಸದಾ ಭವಾಮಿ ನಾನ್ಯಥಾ ॥೯.೬೩॥

ಆದಮೇಲೆ ಶ್ರೀರಾಮ ಸ್ವಧಾಮಕ್ಕೆ ತೆರಳುವ ಘೋಷಣೆ,
ಅದರಂತೆ ಎಲ್ಲರದೂ ಆದ  ಮೇಲೆ ಅಲ್ಲಿ ಜಮಾವಣೆ.
ಹನುಮನ ತಬ್ಬಿ ನಾನಿನಗೆಂದೂ ವ್ಯಕ್ತ ಎಂದ ರಾಮನ ಕರುಣೆ.

ತ್ವಯಾ ಸದಾ ಮಹತ್ ತಪಃ ಸುಕಾರ್ಯ್ಯಮುತ್ತಮೋತ್ತಮಮ್ ।
ತದೇವ ಮೇ ಮಹತ್ ಪ್ರಿಯಂ ಚಿರಂ ತಪಸ್ತ್ವಯಾ ಕೃತಮ್ ॥೯.೬೪ ॥

ನಿನ್ನಿಂದ ಹೀಗೆಯೇ ಮಾಡಲ್ಪಡಬೇಕು ಮಹಾ ತಪದ ಯಾಗ,
ಜೀವಗಣರಲ್ಲಿ ಯಾರಿಗೂ ಸಾಧ್ಯವಿರದ ಆ ವಿಶೇಷ ಯೋಗ.
ಅದು ಎನಗೆ ಅತ್ಯಂತ ಪ್ರಿಯಕರ,
ಮಾಡುತ್ತಿರುವೆ ಅದ ನೀನು ನಿರಂತರ.
ಮುಂದೆಯೂ ನೀ ಮಾಡುವೆ ಆ ಕಾರ್ಯ.

ದಶಾಸ್ಯಕುಮ್ಭಕರ್ಣ್ಣಕೌ ಯಥಾ ಸುಶಕ್ತಿಮಾನಪಿ।
ಜಘನ್ಥ ನ ಪ್ರಿಯಾಯ ಮೇ ತಥೈವ ಜೀವ ಕಲ್ಪಕಮ್ ॥೯.೬೫॥

ರಾವಣ ಕುಂಭಕರ್ಣರ ಕೊಲ್ಲಲು ನೀನಾಗಿದ್ದರೂ ಶಕ್ತ,
ನೀನು ಅವರುಗಳನ್ನು ಕೊಲ್ಲಲಿಲ್ಲ ಕೇವಲ ನನ್ನ ಪ್ರೀತ್ಯರ್ಥ.
ನನ್ನ ಪ್ರೀತಿಗಾಗಿ ನೀ ಜೀವಿಸು ಕಲ್ಪವಾಗುವವರೆಗೆ ಪೂರ್ತ.

ಪಯೋಬ್ಧಿಮಧ್ಯಗಂ ಚ ಮೇ ಸುಸದ್ಮ ಚಾನ್ಯದೇವ ವಾ ।
ಯಥೇಷ್ಟತೋ ಗಮಿಷ್ಯಸಿ ಸ್ವದೇಹಸಂಯುತೋsಪಿ ಸನ್ ॥೯.೬೬॥

ಕ್ಷೀರಸಾಗರದ ಮಧ್ಯದಲ್ಲಿರುವ ನನ್ನ ಆ ಧಾಮ,
ಇತರ ಮನೆಗಳಾದ ಅನಂತಾಸನ ವೈಕುಂಠ-ನಾಮ.
ನನ್ನ ಮನೆಗಳ ಬಾಗಿಲುಗಳು ನಿನಗೆ ಸದಾ ಮುಕ್ತ,
ಬಯಸಿದಾಗ ಬರಬಹುದು ನೀ ನಿನ್ನ ದೇಹ ಸಮೇತ.

ಯಥೇಷ್ಟಭೋಗಸಂಯುತಃ ಸುರೇಶಗಾಯಕಾದಿಭಿಃ ।
ಸಮೀಢ್ಯಮಾನಸದ್ಯಶಾ ರಮಸ್ವ ಮತ್ಪುರಃ ಸದಾ ॥೯.೬೭ ॥

ತವೇಪ್ಸಿತಂ ನ ಕಿಞ್ಚನ ಕ್ವಚಿತ್ ಕುತಶ್ಚಿದೇವ ವಾ ।
ಮೃಷಾ ಭವೇತ್ ಪ್ರಿಯಶ್ಚ ಮೇ ಪುನಃಪುನರ್ಭವಿಷ್ಯಸಿ ॥೯.೬೮ ॥

ನಿನಗೆ ಬೇಕಾದಾಗ ಪಡೆಯಬಹುದು ಬಯಸಿದ್ದನ್ನ,
ಗಂಧರ್ವರು ಮಾಡುತ್ತಿರುತ್ತಾರೆ ನಿನ್ನೆಶಸ್ಸಿನ ಗಾಯನ.
ನೀ ಯಶಸ್ಸಿನ ಶಿಖರ; ನನ್ನೆದುರು ನಿನ್ನದಾಗಲೀ ಸಂತಸದ ವಿಹಾರ,
ನಿನ್ನ ಬಯಕೆ ಎಂದೂ ಎಲ್ಲೆಲ್ಲೂ ಸಾಕಾರ;ನೀನು ನನಗೆ ಸದಾ ಪ್ರಿಯಕರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula