Sunday 29 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 26 - 30

ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್ ।
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ॥೧೫.೨೬॥
ಆಡುತ್ತಿದ್ದ ಧರ್ಮರಾಜನ ಉಂಗುರದೊಂದಿಗೆ ಚೆಂಡೂ ಬಾವಿಗೆ ಬಿತ್ತು,
ಎಲ್ಲ ಕುಮಾರರೂ ಎತ್ತಲು ಅಸಮರ್ಥರಾದಾಗ ಭೀಮನಾಡಿದ ಮಾತು.

ನಿಷ್ಪತ್ಯ ಚೋದ್ಧೃತ್ಯ  ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ ।
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ ವೀರ್ಯ್ಯಸಂಶ್ರಯಾತ್ ॥೧೫.೨೭॥
ನೋಡಿರೆಲ್ಲ -ಈ ಬಾವಿಯಿದೆ ಅತ್ಯಂತ ಆಳ,
ನನ್ನಲ್ಲಿದೆ ಚೆಂಡು ಉಂಗುರ ಎತ್ತಿ ತರುವ ಬಲ.

ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ ಪ್ರವೃತ್ತಿಮ್ ।
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ ಸುರಾರ್ಚ್ಚಿತಾನಿ ॥೧೫.೨೮॥
ಇದನ್ನು ನೋಡಿ ನುಡಿಯುತ್ತಾರೆ ದ್ರೋಣಾಚಾರ್ಯ,
ಅಸ್ತ್ರವ ಬಿಟ್ಟ ನಿಮ್ಮ ಪ್ರಯತ್ನದ ಪ್ರವೃತ್ತಿಗೆ ಧಿಕ್ಕಾರ.
ನೀವು ಹುಟ್ಟಿದ್ದು ಉತ್ಕೃಷ್ಟವಾದ ಭರತ ಕುಲ,
ದೇವತಾರ್ಚಿತವಾದ ಅಸ್ತ್ರಗಳ ನೀವು ತಿಳಿದಿಲ್ಲ.

ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್ ।
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ ಪ್ರಧಾನಮುದ್ರಾಯುತಕನ್ದುಕಸ್ಯ ॥೧೫.೨೯॥
ಈರೀತಿ ಕುಮಾರರು ಕೇಳಿಸಿಕೊಂಡರು ದ್ರೋಣರ ಆ ಮಾತ,
ಅರಿವಾಯಿತವರಿಗೆ ಬೃಹಸ್ಪತಿ ಮೊಮ್ಮಗ ಬ್ರಾಹ್ಮಣ ಅಸ್ತ್ರವೇತ್ತ.
ಬೇಡಿಕೊಂಡರು -ಉಂಗುರ ಚೆಂಡನ್ನು ಎತ್ತಿ ಕೊಡಿರಿ ಅಂತ.

ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್ ।
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ ಕಲ್ಪ್ಯತಾಮಿತಿ ॥೧೫.೩೦॥
ದ್ರೋಣರು ಮಾಡಿದರು ದರ್ಭೆಗಳ ಬಳಕೆ,
ದಿವ್ಯಾಸ್ತ್ರ ಬಲದಿಂದಾಯ್ತು ಚೆಂಡೆತ್ತುವಿಕೆ.
ಉಂಗುರವನ್ನೂ ಎತ್ತಲು ಧರ್ಮರಾಜ ಬಯಸಿದ,
ಜೀವನೋಪಾಯಕ್ಕೆ ಬೇಡಿಕೆ ಆಗ ದ್ರೋಣರಿಂದ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula