Monday 7 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 152 - 157

 ಪಞ್ಚದೇವೀತನುಸ್ತ್ವೇಷಾ ದ್ರೌಪದೀ ನಾಮ ಚಾಭವತ್ ।

ವೇದೇಷು ಸಪುರಾಣೇಷು ಭಾರತೇ ಚಾವಗಮ್ಯತೇ ॥೧೮.೧೫೨॥

ಉಕ್ತೋsರ್ತ್ಥಃ ಸರ್ವ ಏವಾಯಂ ತಥಾ ಪೂರ್ವೋದಿತಾಶ್ಚ ಯೇ  ।

ಮುಮುದುಃ ಸರ್ವಪಾಞ್ಚಾಲಾ ಜಾತಯೋಃ ಸುತಯೋಸ್ತಯೋಃ ॥೧೮.೧೫೩॥

ಈ ತೆರನಾಗಿ ಪಂಚ ದೇವಿಯರ ಒಂದು ಶರೀರದ ಆ ಇಂದ್ರಸೇನೆ ,

ದ್ರೌಪದಿ ಹೆಸರಿಂದ ಬಂದಳು ಅಗ್ನಿಕುಂಡದಿಂದ ಪಡೆದು ಜನ್ಮವನ್ನೇ .

ವೇದ ಪುರಾಣ ಭಾರತದಲ್ಲಿ ಭಾರತೀ ಎಂದು ಕರೆವರು ಅವಳನ್ನೇ .

ಇದೆಲ್ಲವೂ ಕೂಡಾ ಹೇಳಲ್ಪಟ್ಟಿದೆ ಶ್ರಿಮನ್ಮಹಾಭಾರತದಲ್ಲಿ

ದ್ರೌಪದಿ ಧೃಷ್ಟದ್ಯುಮ್ನರು ಹುಟ್ಟಲು ಹರ್ಷಿಸಿದರು ಪಾಂಚಾಲರಲ್ಲಿ .

 

ಮಾನುಷಾನ್ನೋಪಭೋಗೇನ ಸಂಸರ್ಗ್ಗಾನ್ಮಾನುಷೇಷು ಚ ।

ಮನುಷ್ಯಪುತ್ರತಾಯಾಶ್ಚ ಭಾವೋ ಮಾನುಷ ಏತಯೋಃ ॥೧೮.೧೫೪॥

ಅಭೂನ್ನಾತಿತರಾಮಾಸೀತ್ ತದಯೋನಿತ್ವಹೇತುತಃ ।

ಯಾಜೋಪಯಾಜೌ ತಾವೇವ ದಯಿತಾ ದ್ರುಪದಸ್ಯ ಸಾ ॥೧೮.೧೫೫॥

ಮಾತೃಸ್ನೇಹಾರ್ತ್ಥಮನಯೋರ್ಯ್ಯಯಾಚೇ ದದತುಶ್ಚ ತೌ ।

ಜಾತಮಾತ್ಮನಿಹನ್ತಾರಂ ಭಾರದ್ವಜೋ ನಿಶಮ್ಯ ತಮ್ ॥೧೮.೧೫೬॥

ಯಶೋರ್ತ್ಥಮಸ್ತ್ರಾಣಿ ದದಾವಗ್ರಹೀತ್ ಸೋsಪಿ ಲೋಭತಃ ।

ರಾಮಾಸ್ತ್ರಾಣಾಂ ದುರ್ಲ್ಲಭತ್ವಾತ್ ತ್ರಿದಶೇಷ್ವಪಿ ವೀರ್ಯ್ಯವಾನ್ ॥೧೮.೧೫೭॥

ಮಾನುಷಾನ್ನ ,ಮನುಷ್ಯ ಸಂಪರ್ಕ ,ಮನುಷ್ಯ ಪ್ರೇರಣೆಯಿಂದಾದ ಯಾಗ ,

ತಂದುಕೊಟ್ಟಿತ್ತು ಅವರಿಬ್ಬರಲ್ಲಿ ಮನುಷ್ಯಸ್ವಭಾವದ ಒಂದಷ್ಟು ಭಾಗ .

ಆದರೆ ಆಗಿರಲಿಲ್ಲ ಮಾನುಷಯೋನಿಯಿಂದ ಅವರಿಬ್ಬರ ಜನನ ,

ಹಾಗಾಗೇ ಬರಲಿಲ್ಲವರಿಗೆ ದೇಶ , ತಂದೆ ತಾಯಿಯರ ಅಭಿಮಾನ .

ದ್ರುಪದನ ಪತ್ನಿಗೆ ತಾನು ಇವರಿಬ್ಬರಿಗೆ ತಾಯಿಯಾಗಿ ಇರಬೇಕೆಂಬ ವ್ಯಾಮೋಹ ,

ಯಾಜ ಉಪಯಾಜರಲ್ಲಿ ಬೇಡಲು-ಹರಸಿದರವರು ಉದಿಸುವಂತೆ ಅವಳಲ್ಲಿ ಸ್ನೇಹ .

ದ್ರೋಣರಿಗಿದ್ದರೂ ಧೃಷ್ಟದ್ಯುಮ್ನ ತನ್ನನ್ನು ಕೊಲ್ಲಲು ಹುಟ್ಟಿದ್ದಾನೆ ಎಂಬ ಜ್ಞಾನ ,

ಕೀರ್ತಿಗಾಗಿ ಅವರು ಮಾಡುತ್ತಾರೆ ಅವನಿಗೆ ಅಸ್ತ್ರ ಶಸ್ತ್ರ ವಿದ್ಯಾ ಪ್ರದಾನ .

ಪರಶುರಾಮರು ಕೊಟ್ಟ ಅಸ್ತ್ರಗಳು ದೇವತೆಗಳಿಗೂ ದುರ್ಲಭ ,

ಹಾಗೆಂದೇ ಧೃಷ್ಟದ್ಯುಮ್ನ ಪಡಕೊಂಡ ಗುರುತಿಸಿ ಅದರ ಲಾಭ .

No comments:

Post a Comment

ಗೋ-ಕುಲ Go-Kula