Saturday 26 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 83 - 87

 ಉಕ್ತ್ವೈವಮೇತ್ಯ ನಿಖಿಲಂ ಚ ಜಗಾದ ಭೀಮ ಉದ್ಧರ್ಶ ಆಸ ಸ ನಿಶಮ್ಯ ಮಹಾಸ್ವಧರ್ಮ್ಮಮ್ ।

ಪ್ರಾಪ್ತಂ ವಿಲೋಕ್ಯ ತಮತೀವ ವಿಘೂರ್ಣ್ಣನೇತ್ರಂ ದೃಷ್ಟ್ವಾ ಜಗಾದ ಯಮಸೂನುರುಪೇತ್ಯ ಚಾನ್ಯೈಃ ॥೧೯.೮೩॥

ಕುಂತಿ ವಿಪ್ರನಿಗೆ ಇಷ್ಟು ಹೇಳಿ , ಭೀಮನ ಬಳಿ ಬಂದು ಎಲ್ಲವನ್ನೂ ಹೇಳಲು ,

ಸ್ವಧರ್ಮ ಪಾಲನಾವಕಾಶ ಸಿಕ್ಕಿತೆಂದು ಭೀಮನ ಮೊಗದಿ ಹರ್ಷದ ಹೊನಲು .

ಆ ಸಮಯಕ್ಕೆ ಅರ್ಜುನಾದಿಗಳೊಡನೆ ಧರ್ಮರಾಜ ಬಂದ ,

ಭೀಮನ ಹಿಗ್ಗಿನ ಬಗ್ಗೆ ತಾಯಿ ಕುಂತಿಯಲ್ಲಿ ಪ್ರಶ್ನೆ ಮಾಡಿದ .

 

ಮಾತಃ ಕಿಮೇಷ ಮುದಿತೋsತಿತರಾಮಿತಿ ಸ್ಮ ತಸ್ಮೈ ಚ ಸಾ ನಿಖಿಲಮಾಹ ಸ ಚಾಬ್ರವೀತ್ ತಾಮ್ ।

ಕಷ್ಟಂ ತ್ವಯಾ ಕೃತಮಹೋ ಬಲಮೇವ ಯಸ್ಯ ಸರ್ವೇ ಶ್ರಿತಾ ವಯಮಮುಂ ಚ ನಿಹನ್ಸಿ ಭೀಮಮ್ ॥೧೯.೮೪॥

ಅಮ್ಮಾ , ಭೀಮ ಯಾಕೆ ಇಷ್ಟೊಂದು ಹಿಗ್ಗಿದ್ದಾನೆ ,

ಆಗ ಕುಂತಿಯಿಂದ ಎಲ್ಲಾ ವಿಷಯದ ವಿವರಣೆ .

ಅಮ್ಮಾ , ಏನಿದು ನಿನ್ನ ಅವಿವೇಕದ ಕಾರ್ಯ ,

ಅಪಾಯಕಾರಿ ಕೆಲಸಕ್ಕಿಳಿದಿರುವುದು ಆಶ್ಚರ್ಯ .

ನಾವೆಲ್ಲಾ ನಂಬಿರುವೆವೋ ಯಾರ ತೋಳ ಬಲ ,

ಆ ಭೀಮಸೇನನನ್ನೇ ಸಾವಿಗೆ ತಳ್ಳುತ್ತಿರುವೆಯಲ್ಲ .

 

ಯದ್ಬಾಹುವೀರ್ಯ್ಯಪರಮಾಶ್ರಯತೋ ಹಿ ರಾಜ್ಯಮಿಚ್ಛಾಮ ಏವ ನಿಖಿಲಾರಿವಧಂ ಸ್ವಧರ್ಮ್ಮಮ್ ।

ಸೋsಯಂ ತ್ವಯಾsದ್ಯ ನಿಶಿಚಾರಿಮುಖಾಯ ಮಾತಃ ಪ್ರಸ್ಥಾಪ್ಯತೇ ವದ ಮಮಾsಶು ಕಯೈವ ಬುದ್ಧ್ಯಾ॥೧೯.೮೫॥

ಯಾರ ಬಾಹುಬಲದ ಮೇಲಿದೆಯೋ ನಮ್ಮೆಲ್ಲರ ಅವಲಂಬನೆ ,

ಯಾರಿಂದಾಗಬೇಕಿದೆಯೋ ಶತ್ರುನಾಶ ಮತ್ತು ಸ್ವಧರ್ಮದ ರಕ್ಷಣೆ .

ಆ ಭೀಮಸೇನನನ್ನು ರಾಕ್ಷಸನ ಬಾಯಿಗೆ ತಳ್ಳುತ್ತಿರುವೆ ,

ಯಾವ ಕಾರಣಕ್ಕಾಗಿ ನೀನು ಈ ಕೆಲಸ ಮಾಡುತ್ತಿರುವೆ .

 

ಇತ್ಯುಕ್ತವನ್ತಮಮುಮಾಹ ಸುಧೀರಬುದ್ಧಿಃ ಕುನ್ತೀ ನ ಪುತ್ರಕ ನಿಹನ್ತುಮಯಂ ಹಿ ಶಕ್ಯಃ ।

ಸರ್ವೈಃ ಸುರೈರಸುರಯೋಗಿಭಿರಪ್ಯನೇನ ಚೂರ್ಣ್ಣೀಕೃತೋ ಹಿ ಶತಶೃಙ್ಗಗಿರಿಃ ಪ್ರಸೂತ್ಯಾಮ್ ॥೧೯.೮೬॥

ಧರ್ಮರಾಜ ಹೀಗೆ ಹೇಳಲು , ಹೇಳುತ್ತಾಳೆ ಧೈರ್ಯದೆದೆಯ ಕುಂತಿ ,

ಭೀಮಸೇನನ ಕೊಲ್ಲಲು ಯಾವ ದೇವಾಸುರರಿಗೂ ಇಲ್ಲವದು ಶಕ್ತಿ .

ಹುಟ್ಟಿದಾಗಲೇ ಅವನು ತೋರಿದ್ದ ಶತಶೃoಗಕ್ಕೆ ಪುಡಿಯಾಗುವ ಗತಿ .

 

ಏಷ ಸ್ವಯಂ ಹಿ ಮರುದೇವ ನರಾತ್ಮಕೋsಭೂತ್ ಕೋ ನಾಮ ಹನ್ತುಮಿಮಮಾಪ್ತಬಲೋ  ಜಗತ್ಸು ।

ಇತ್ಯೇವಮಸ್ತ್ವಿತಿ ಸ ತಾಮವದತ್ ಪರೇದ್ಯುರ್ಭೀಮೋ ಜಗಾಮ ಶಕಟೇನ ಕೃತೋರುಭೋಗಃ ॥೧೯.೮೭॥

ಸಾಕ್ಷಾತ್ ವಾಯುದೇವನೇ ಮಾನವ ಶರೀರಿಯಾದ ಭೀಮನಾಗಿ ಹುಟ್ಟಿದ್ದಾನೆ,

ಅವನನ್ನು ಕೊಲ್ಲುವ ಶಕ್ತಿಯುಳ್ಳವ ಪ್ರಪಂಚದಲ್ಲಿ ಯಾವನು ತಾನೇ ಇದ್ದಾನೆ .

ಹಾಗಿದ್ದರೆ ಸರಿಯೆಂದು ಧರ್ಮರಾಜ ಸೂಚಿಸುತ್ತಾನೆ ಒಪ್ಪಿಗೆ ,

ಭೋಗಸಾಮಗ್ರಿಗಳನಿಟ್ಟ ಗಾಡಿಯಲ್ಲಿ ಭೀಮ ಹೊರಟ ಕಾಡಿಗೆ .

No comments:

Post a Comment

ಗೋ-ಕುಲ Go-Kula