Monday 14 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 16 - 21

 ತ್ರಿಂಶಚ್ಛತಂ ಪರಮಕಾಃ ಸುರದುರ್ಲ್ಲಭಾಶ್ಚ ದುರ್ವಾಸಸೋ ಹಿ ಮನವೋsದ್ಯ ಮಯಾ ಗೃಹೀತಾಃ ।

ಅನ್ಯತ್ರ ತೇ ಪ್ರವಿಹಿತಾ ನಹಿ ವೀರ್ಯ್ಯವನ್ತಃ ಸ್ಯುರ್ಭೀಮ ಇತ್ಯಹಮಮೂನ್ ನ ನಿಯೋಜಯಾಮಿ ॥೧೯.೧೬॥

ದೇವತೆಗಳಿಗೂ ಲಭ್ಯವಲ್ಲದ ಶ್ರೇಷ್ಠ ಮೂವತ್ತುನೂರು ಆ ಮಂತ್ರಗಳು ,

ನನ್ನಿಂದ ಗ್ರಹಿಸಲ್ಪಟ್ಟು ಅವುಗಳ ವೀರ್ಯ ಕುಂದದಂತೆ ಕಾಪಾಡಲ್ಪಟ್ಟವುಗಳು .

ಭೀಮನಲ್ಲಿಯೇ ಆಗಬೇಕೆಂದು ಅವುಗಳ ಪೂರ್ಣ ವಿನಿಯೋಗ ,

ನಾನವುಗಳ ಬೇರೆಲ್ಲೂ ಬಳಸದೇ ಇಟ್ಟೀನಿ ಮಾಡದೇ ಉಪಯೋಗ .

 

ತೇ ವೀರ್ಯ್ಯದಾ ವಿಜಯದಾ ಅಪಿ ವಹ್ನಿವಾರಿಸ್ತಮ್ಭಾದಿದಾಃ ಸಕಲದೇವನಿಕಾಯರೋಧಾಃ ।

ವೃಷ್ಟ್ಯಾದ್ಯಭೀಪ್ಸಿತಸಮಸ್ತಕರಾ ಅಮೂಭಿರ್ಜ್ಜ್ಯೇಷ್ಯಾಮಿ ಭೀಮಮಮುಮೇಕಮಯಾತಯಾಮೈಃ ॥೧೯.೧೭॥

ಆ ವೀರ್ಯವತ್ತ ಮಂತ್ರಗಳು ವಿಶೇಷ ವಿಜಯ ಕೊಡುವಂಥವುಗಳು ,

ಬೆಂಕಿ ನೀರನ್ನೂ ತಡೆಯಬಲ್ಲ ಶಕ್ತಿ ಇರುವಂಥ ಅಪೂರ್ವಮಂತ್ರಗಳು .

ಈ ಮಂತ್ರಗಳು ಎಲ್ಲಾ ದೇವತೆಗಳನ್ನೂ ಎದುರಿಸಬಲ್ಲವು,

ಬೇಕಾದಾಗ ಮಳೆ,ಇನ್ಯಾವುದೇ ಅಭೀಷ್ಟಗಳ ನೀಡಬಲ್ಲವು.

ಬಹಳ ಕಾಲಾನಂತರ ಬಳಸಿದರೆ ಅದು ಫಲ ನೀಡದು ,

ಈ ಸಿದ್ಧ ಮಂತ್ರಗಳಿಂದ ಭೀಮನಮೇಲೆ ಗೆಲುವು ನನ್ನದು.

 

ಸೌಹಾರ್ದ್ದಮೇಷು ಯದಿವಾsತಿತರಾಂ ಕರೋಷಿ ತತ್ರಾಪಿ ನೈವ ಹಿ ಮಯಾ ಕ್ರಿಯತೇ ವಿರೋಧಃ ।

ವತ್ಸ್ಯನ್ತು ವಾರಣವತೇ ಭವತು ಸ್ಮ ರಾಷ್ಟ್ರಂ ತೇಷಾಂ ತದೇವ ಮಮ ನಾಗಪುರಂ ತ್ವದರ್ತ್ಥೇ ॥೧೯.೧೮॥

ಒಂದುವೇಳೆ ನೀನು ನಿನ್ನ ತಮ್ಮನ ಮಕ್ಕಳಲ್ಲಿ ತೋರಿದರೆ ಬಹಳ ಸ್ನೇಹ,

ಅದಕ್ಕಿರುವುದಿಲ್ಲ ನನ್ನ ಕಡೆಯಿಂದ ಯಾವುದೇ ತೆರನಾದ ವಿರೋಧಿಭಾವ .

ಅವರು ವಾರಣವತದಲ್ಲಿ ಮಾಡಲಿ ವಾಸ ,

ಆದರೆ ನಮ್ಮದಾಗಿರಲಿ ಹಸ್ತಿನಾವತಿ ದೇಶ .

 

ಏವಂ ಸ್ವಪುತ್ರಪರಿಪಾಲನತೋ ಯಶಸ್ತೇ ಭೂಯಾದ್ ವಿನಶ್ಯತಿ ಪರಪ್ರಸವಾತಿಪುಷ್ಟೌ ।

ಜಾತೇ ಬಲೇ ತವ ವಿರೋಧಕೃತಶ್ಚ ತೇ ಸ್ಯುಃ ಸ್ವಾರ್ತ್ಥಂ ಹಿ ತಾವದನುಯಾನ್ತ್ಯಪಿ ಕೇವಲಂ ತ್ವಾಮ್ ॥೧೯.೧೯॥

ಹೀಗೆ ನಿನ್ನ ಮಕ್ಕಳ ಗೌರವಿಸಿ ನೋಡು ,

ದೊರಕುತ್ತದೆ ನಿನಗೆ ಯಶಸ್ಸಿನ ಜಾಡು .

ಬೇರೊಬ್ಬರ ಮಕ್ಕಳ ನೀ ಗೌರವಿಸಿದರೆ ನಿನ್ನ ಯಶಸ್ಸು ನಾಶ ,

ಈಗ ಬಲವಿರದ ಪಾಂಡವರು ನಿನಗೆ ತಗ್ಗಿಬಗ್ಗುವುದದು  ವೇಷ .

ಬಲವಂತರಾದಮೇಲೆ ಅವರದು ಎದುರು ಬೀಳುವ ನೀತಿ ,

ತಮ್ಮ ಸ್ವಾರ್ಥಸಾಧನೆವರೆಗೆ ಮೃದುನಿಲುವು ಅವರ ರೀತಿ .

 

ಕ್ಷತ್ತೈಕ ಏವ ಸತತಂ ಪರಿಪೋಷಕೋsಲಂ ತೇಷಾಂ ಮಮ ದ್ವಿಡಥ ಮನ್ತ್ರಬಲಾದಮುಷ್ಯ ।

ಪೌರಾಶ್ಚ ಜಾನಪದಕಾಃ ಸತತಂ ದ್ವಿಷನ್ತಿ ಮಾಂ ತೇಷ್ವತೀವ ದೃಢಸೌಹೃದಚೇತಸಶ್ಚ ॥೧೯.೨೦॥

ನನ್ನ ವಶವಾಗದ ಒಬ್ಬನೇ ಒಬ್ಬನೆಂದರೆ ಅವನು ವಿದುರ ,

ಅವನು ಮಾಡುತ್ತಾನೆ ಪಾಂಡವರ ಪೋಷಣೆ ಮತ್ತಾದರ .

ಅವನಿಗೆ ನನ್ನಲ್ಲಿದೆ ದ್ವೇಷ ,

ಶಕ್ತಿಯುತ ಅವನ ಮಂತ್ರಪಾಶ .

ಅವನ ಮಂತ್ರಶಕ್ತಿಯಿಂದ ಪಟ್ಟಣಿಗರು ಹಳ್ಳಿಗರಿಗೆ ದ್ವೇಷ ನನ್ನಲ್ಲಿ ,

ತದ್ವಿರುದ್ಧ ಅತ್ಯಂತ ಭದ್ರವಾದ ಸ್ನೇಹ ಇಟ್ಟಿದ್ದಾರೆ ಪಾಂಡವರಲ್ಲಿ.

 

ತೇ ತೇಷು ದೂರಗಮಿತೇಷು ನಿರಾಶ್ರಯತ್ವಾನ್ಮಾಮೇವ ದುರ್ಬಲತಯಾ ಪರಿತಃ ಶ್ರಯನ್ತೇ ।

ಭೀಷ್ಮಾದಯಶ್ಚ ನಹಿ ತನ್ನಿಕಟೇ ವಿರೋಧಂ ಕುರ್ಯ್ಯುರ್ವಿನಶ್ಯತಿ ಗತೇಷು ಹಿ ಸೌಹೃದಂ ತತ್ ॥೧೯.೨೧॥

ಅವರೆಲ್ಲರಿಂದಲೂ ಪಾಂಡವರಾದಮೇಲೆ ದೂರ ,

ನಿಶ್ಯಕ್ತರಾದವರಿಗೆ ನನ್ನಾಶ್ರಯವು ಅನಿವಾರ್ಯ .

ಪಾಂಡವರು ಇಲ್ಲಿದ್ದಾಗ ಭೀಷ್ಮಾದಿಗಳಿಂದ ನನ್ನ ವಿರೋಧ ,

ಅವರೊಮ್ಮೆ ದೂರ ಹೋಗಲು ನಾಶವಾಗುವುದು ಸೌಹಾರ್ದ .

No comments:

Post a Comment

ಗೋ-ಕುಲ Go-Kula