Tuesday 29 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 88 - 95

 ಗತ್ವಾ ತ್ವರನ್ ಬಕವನಸ್ಯ ಸಕಾಶ ಆಶು ಭೀಮಃ ಸ ಪಾಯಸಸುಭಕ್ಷ್ಯಪಯೋಘಟಾದ್ಯೈಃ ।

ಯುಕ್ತಂ ಚ ಶೈಲನಿಭಮುತ್ತಮಮಾದ್ಯರಾಶಿಂ ಸ್ಪರ್ಶಾತ್ ಪುರೈವ ನರಭಕ್ಷಿತುರತ್ತುಮೈಚ್ಛತ್ ॥೧೯.೮೮॥

ಬಕಾಸುರನಿರುವ ಕಾಡಿನ ಸಮೀಪಕ್ಕೆ ತೆರಳಿದ ಭೀಮಸೇನ,

ಇತ್ತು-ಬಗೆಬಗೆಯ ಭಕ್ಷ್ಯ ಕ್ಷೀರಾದಿಗಳಿಂದ ಕೂಡಿದ ಪರಮಾನ್ನ.

ಅದೆಲ್ಲವ ತಿನ್ನಬಯಸಿದ ನರಭಕ್ಷಕ ಅದನ್ನ ಮುಟ್ಟುವ ಮುನ್ನ.

 

ತೇನೈವ ಚಾನ್ನಸಮಿತೌ ಪರಿಭುಜ್ಯಮಾನ ಉತ್ಪಾಟ್ಯ ವೃಕ್ಷಮಮುಮಾದ್ರವದಾಶು ರಕ್ಷಃ ।

ವಾಮೇನ ಮಾರುತಿರಪೋಹ್ಯ ತದಾ ಪ್ರಹಾರಾನ್ ಹಸ್ತೇನ ಭೋಜ್ಯಮಖಿಲಂ ಸಹಭಕ್ಷ್ಯಮಾದತ್ ॥೧೯.೮೯॥

ಭೀಮಸೇನನಿಂದ ಅದೆಲ್ಲಾ ಆಹಾರ ಪದಾರ್ಥಗಳು ತಿನ್ನಲ್ಪಡುತ್ತಿರಲು ,

ಅದನ್ನ ನೋಡಿದ ಬಕ ಮರವ ಕಿತ್ತು ಭೀಮಸೇನನತ್ತ ಧಾವಿಸಿ ಬರಲು ,

ಭೀಮಸೇನ ತನ್ನ ಎಡಗೈನಿಂದವನ ಸರಿಸಿ ತಡೆದ ,

ಎಲ್ಲಾ ಭಕ್ಷ್ಯಭೋಜ್ಯಗಳ ತಾನು ತಿಂದು ಮುಗಿಸಿದ .

 

ಪೀತ್ವಾ ಪಯೋ ತ್ವರಿತ ಏನಮವೀಕ್ಷಮಾಣ ಆಚಮ್ಯ ತೇನ ಯುಯುಧೇ ಗುರುವೃಕ್ಷಶೈಲೈಃ ।

ತೇನಾsಹತೋsಥ ಬಹುಭಿರ್ಗ್ಗಿರಿಭಿರ್ಬಲೇನ ಜಗ್ರಾಹ ಚೈನಮಥ ಭೂಮಿತಳೇ ಪಿಪೇಷ ॥೧೯.೯೦॥

ಆ ರಕ್ಕಸನತ್ತ ನೋಡದೇ ಹಾಲು ಇತ್ಯಾದಿ ಪಾನೀಯಗಳ ಕುಡಿದ ,

ಎಲ್ಲವ ಮುಗಿಸಿ ಕೈತೊಳೆದು ಆಚಮನ ಮಾಡಿ ಯುದ್ಧವ ಮಾಡಿದ .

ಬಕ ದೊಡ್ಡ ಮರ ಬಂಡೆಗಳಿಂದ ಭೀಮಗೆ ಹೊಡೆದ ,

ಭೀಮ ಅವನ ಬಲವಾಗಿ ನೆಲಕ್ಕೆ ಕೆಡವಿ ಮರ್ದಿಸಿದ .

 

ಆಕ್ರಮ್ಯ ಪಾದಮಪಿ ಪಾದತಳೇನ ತಸ್ಯ ದೋರ್ಭ್ಯಾಂ ಪ್ರಗೃಹ್ಯ ಚ ಪರಂ ವಿದದಾರ ಭೀಮಃ ।

ಮೃತ್ವಾ ಸ ಚೋರು ತಮ ಏವ ಜಗಾಮ ಪಾಪೋ ವಿಷ್ಣುದ್ವಿಡೇವ ಹಿ ಶನೈರನಿವೃತ್ತಿ ಚೋಗ್ರಮ್ ॥೧೯.೯೧ ॥

ಭೀಮ ಬಕನ ಒಂದು ಕಾಲನ್ನು ತನ್ನ ಪಾದದಿ ಮೆಟ್ಟಿ ಹಿಡಿದ ,

ಇನ್ನೊಂದು ಕಾಲನ್ನು ತನ್ನೆರಡು ಕೈಗಳಿಂದ ಹಿಡಿದವನ ಸೀಳಿದ .

ಹೀಗೆ ಸತ್ತ ಪಾಪಿಷ್ಠ ನಾರಾಯಣದ್ವೇಷಿ ಬಕ ,

ಕ್ರಮೇಣ ಮರಳಲಾಗದ ಅಂಧoತಮಸ್ಸ ಹೊಕ್ಕ .

 

ಹತ್ವಾ ತಮಕ್ಷತಬಲೋ ಜಗದನ್ತಕಂ ಸ  ಯೋ ರಾಕ್ಷಸೋ ನ ವಶ ಆಸ ಜರಾಸುತಸ್ಯ ।

ಭೌಮಸ್ಯ ಪೂರ್ವಮಪಿ ನೋ ಭರತಸ್ಯ ರಾಜ್ಞೋ ಭೀಮೋ ನ್ಯಧಾಪಯದಮುಷ್ಯ ಶರೀರಮಗ್ರೇ ॥೧೯.೯೨ ॥

ಹೀಗೆ ನಾಶವಿರದ ಬಲವಂತನಾದ ಜಗತ್ಕಂಟಕನಾದ  ಭಯಂಕರ ಬಕಾಸುರ ,

ಜರಾಸಂಧನ ವಶವಾಗದೆ ನರಕಾಸುರನ ಮಿತ್ರನಾಗದೆ ಭೀಮನಿಂದಾದ ಸಂಹಾರ .

ಭರತನ ವಶವೂ ಆಗದವನು ಹೆಣವಾಗಿ ಸೇರಿದ್ದು ಅಗಸೇಬಾಗಿಲ ಪ್ರವೇಶದ್ವಾರ .

 

ದ್ವಾರ್ಯೇವ ತತ್ ಪ್ರತಿನಿಧಾಯ ಪುನಃ ಸ ಭೀಮಃ ಸ್ನಾತ್ವಾ ಜಗಾಮ ನಿಜಸೋದರಪಾರ್ಶ್ವಮೇವ ।

ಶ್ರುತ್ವಾsಸ್ಯ ಕರ್ಮ್ಮ ಪರಮಂ ತುತುಷುಃ ಸಮೇತಾ ಮಾತ್ರಾ ಚ ತೇ ತದನು ವವ್ರುರತಃ ಪುರಸ್ಥಾಃ ॥೧೯.೯೩॥

ದೃಷ್ಟ್ವೈವ  ರಾಕ್ಷಸಶರೀರಮುರು ಪ್ರಭೀತಾ  ಜ್ಞಾತ್ವೈವ ಹೇತುಭಿರಥ ಕ್ರಮಶೋ ಮೃತಂ ಚ ।

ವಿಪ್ರಸ್ಯ ತಸ್ಯ ವಚನಾದಪಿ ಭೀಮಸೇನಭಗ್ನಂ ನಿಶಮ್ಯ ಪರಮಂ ತುತುಷುಶ್ಚ ತಸ್ಮೈ ॥೧೯.೯೪॥

ಹೀಗೆ ಊರಬಾಗಿಲಲ್ಲಿ ಅವನ ಹೆಣವಿಟ್ಟ ಭೀಮ ಸ್ನಾನ ಮಾಡಿ ಸೋದರರ ಸೇರಿದ ,

ಇವನ ಒಳ್ಳೇ ಕೆಲಸ ಕೇಳಿದ ತಾಯಿ ಸೋದರರಿಗಾದದ್ದು ಅತೀವವಾದ ಆನಂದ .

ರಕ್ಕಸನ ಸಾವಿನ ಬಗ್ಗೆ ಜನಕ್ಕೆ ಭಯ ಅನುಮಾನ ,

ಅವನ ಸಾವನ್ನು ಖಚಿತಮಾಡಿಕೊಂಡರು ಆ ಜನ.

ಇದೆಲ್ಲಾ ನಡೆದಮೇಲೆ ಅಲ್ಲಿ ನೆರೆದ ಜನರಿಗೆ ರಕ್ಕಸನ ಹೆಣ ನೋಡಿ ಭಯ ,

ಸತ್ತದ್ದವನು ವಿಪ್ರ ಕಳಿಸಿದ ಭೀಮನಿಂದೆoದರಿತವರಿಗೆ ಸಂತಸದ ಅಭಯ .

 

ಅನ್ನಾತ್ಮಕಂ  ಕರಮಮುಷ್ಯ ಚ ಸಮ್ಪ್ರಚಕ್ರುಃ ಸೋsಪ್ಯೇತಮಾಶು ನರಸಿಂಹವಪುರ್ದ್ಧರಸ್ಯ।

ಚಕ್ರೇ ಹರೇಸ್ತದನು ಸತ್ಯವತೀಸುತಸ್ಯ ವಿಷ್ಣೋರ್ಹಿ ವಾಕ್ಪ್ರಚುದಿತಾಃ ಪ್ರಯಯುಸ್ತತಶ್ಚ ॥೧೯.೯೫॥

ನೀಡಲ್ಪಟ್ಟಿತು ಭೀಮಸೇನಗೆ ಜನರಿಂದ ಅನ್ನದ ಕಂದಾಯ ,

ಅದನ್ನವ ಮಾಡಿದ ನೃಸಿಂಹರೂಪಿ ನಾರಾಯಣಗೆ ಸಂದಾಯ .

ವ್ಯಾಸರ ಮಾತಿನಂತೆ ಏಕಚಕ್ರ ನಗರಕ್ಹೇಳಿದರೆಲ್ಲಾ ವಿದಾಯ.

No comments:

Post a Comment

ಗೋ-ಕುಲ Go-Kula