Friday 25 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 78 - 82

     ಪೃಷ್ಟಸ್ತಯಾssಹ ಸ ತು ವಿಪ್ರವರೋ ಬಕಸ್ಯ ವೀರ್ಯ್ಯಂ ಬಲಂ ಚ ದಿತಿಜಾರಿಭಿರಪ್ಯಸಹ್ಯಮ್ ।

ಸಂವತ್ಸರತ್ರಯಯುತೇ ದಶಕೇ ಕರಂ ಚ ಪ್ರಾತಿಸ್ವಿಕಂ ದಶಮುಖಸ್ಯ ಚ ಮಾತುಲಸ್ಯ ॥೧೯.೭೮॥

ಹೀಗೆ ಕುಂತಿದೇವಿಯಿಂದ ಪ್ರಶ್ನಿಸಲ್ಪಟ್ಟ ಆ ಬ್ರಾಹ್ಮಣಶ್ರೇಷ್ಠ ,

ವಿವರಿಸುತ್ತಾನೆ ರಾವಣನ ಸೋದರಮಾವ ಬಕ ತಂದ ಕಷ್ಟ .

ಅವನದು ದೇವತೆಗಳಿಗೂ ತಡೆಯಲಸಾಧ್ಯವಾದ ಬಲ ವೀರ್ಯ ,

ಸಾಗಿದೆ ಅವನಿಗೆ ಹದಿಮೂರು ವರ್ಷದಿಂದ ಕಪ್ಪವೀವ ಕಾರ್ಯ .

 

ಶ್ರುತ್ವಾ ತಮುಗ್ರಬಲಮತ್ಯುರುವೀರ್ಯ್ಯಮೇವ ರಾಮಾಯಣೇ ರಘುವರೋರುಶರಾತಿಭೀತಮ್ ।

ವಿಷ್ಟಂ ಬಿಲೇಷ್ವಥ ನೃಪಾನ್ ವಶಮಾಶು ಕೃತ್ವಾ ಭೀತ್ಯೈವ ತೈಸ್ತದನು ದತ್ತಕರಂ ನನನ್ದ ॥೧೯.೭೯॥

ರಾಮಾಯಣ ಕಾಲದಲ್ಲಿ ರಾಮನ ಉಗ್ರಬಾಣಕೆ ಹೆದರಿಕೊಂಡು ,

ಕುಳಿತಿದ್ದ ಅವ ಅವತಾರ ಸಮಾಪ್ತಿ ಆಗುವವರೆಗೂ ಅಡಗಿಕೊಂಡು .

ಆಮೇಲೆ ಎಲ್ಲಾ ರಾಜರನ್ನೂ ಮಾಡಿಕೊಂಡಿದ್ದ ವಶ ,

ಹೆದರಿಸಿ ಎಲ್ಲರಿಂದ ಕರ ಪಡೆಯುತ್ತಿದ್ದ ಆ ರಾಕ್ಷಸ .

ವಿಪ್ರನಿಂದ ಈ ವಿಷಯ ಕೇಳಿದ ಕುಂತಿಗೆ ಸಂತೋಷ .

 

[ಕುಂತೀದೇವಿ ಏಕೆ ಸಂತೋಷಪಟ್ಟಳು ಎನ್ನುವುದನ್ನು ವಿವರಿಸುತ್ತಾರೆ:]

ಏವಂ ಬಲಾಢ್ಯಮಮುಮಾಶು ನಿಹತ್ಯ ಭೀಮಃ ಕೀರ್ತ್ತಿಂ ಚ ಧರ್ಮ್ಮಮಧಿಕಂ ಪ್ರತಿಯಾಸ್ಯತೀಹ ।

ಸರ್ವೇ ವಯಂ ಚ ತಮನು ಪ್ರಗೃಹೀತಧರ್ಮ್ಮಾ ಯಾಸ್ಯಾಮ ಇತ್ಯವದದಾಶು ಧರಾಸುರಂ ತಮ್ ॥೧೯.೮೦॥

ಇಂತಹಾ ಬಲಾಢ್ಯ ಬಕನ ಕೊಂದರೆ ಭೀಮಗೆ ಕೀರ್ತಿ ಮತ್ತು ಪುಣ್ಯ ,

ಸಹಕರಿಸಿದರೆ ತಮಗೂ ಪುಣ್ಯವೆಂದು ವಿಪ್ರಗ್ಹೇಳಿದ ತೀರ್ಮಾನ .

 

ಸನ್ತಿ ಸ್ಮ ವಿಪ್ರವರ ಪಞ್ಚ ಸುತಾ ಮಮಾದ್ಯ ತೇಷ್ವೇಕ ಏವ ನರವೈರಿಮುಖಾಯ ಯಾತು ।

ಇತ್ಯುಕ್ತ ಆಹ ಸ ನ ತೇ ಸುತವದ್ಧ್ಯಯಾsಹಂ ಪಾಪೋ ಭವಾನಿ ತವ ಹನ್ತ ಮನೋsತಿಧೀರಮ್ ॥೧೯.೮೧॥

ಬ್ರಾಹ್ಮಣೋತ್ತಮ, ನನ್ನದು ಐದು ಜನ ಮಕ್ಕಳ ಸಂಸಾರ,

ಅವರಲ್ಲಿ ಒಬ್ಬನು ಹೋಗಲಿ ಭಕ್ಷಕ ಬಕನಿಗೆ ಆಗಿ  ಆಹಾರ .

ಅಮ್ಮಾ , ನಾ ಹೊರಲಾರೆ ನಿನ್ನ ಮಗನ ಕೊಂದ ಪಾಪದ ಭಾರ ,

ನಿನ್ನದು ಧೈರ್ಯದ ಮನಸ್ಸು ಎಂದವ ತೆಗೆದ ಅಚ್ಚರಿಯ ಉದ್ಗಾರ .

 

ಉಕ್ತೈವಮಾಹ ಚ ಪೃಥಾ  ತನಯೇ ಮದೀಯೇ ವಿದ್ಯಾsಸ್ತಿ ದಿಕ್ಪತಿಭಿರಪ್ಯವಿಷಹ್ಯರೂಪಾ ।

ಉಕ್ತೋsಪಿ ನೋ ಗುರುಭಿರೇಷ ನಿಯುಙ್ಕ್ತ ಏತಾಂ ವದ್ಧ್ಯಸ್ತಥಾsಪಿ ನ ಸುರಾಸುರಪಾಲಕೈಶ್ಚ ॥೧೯.೮೨॥

ಕುಂತಿದೇವಿಗೆ ಮೇಲಿನಂತೆ ಹೇಳಲು ಆ ಬ್ರಾಹ್ಮಣ ,

ಕುಂತಿ ಹೇಳಿದಳು-ನನ್ನ ಮಗನಲ್ಲಿದೆ ವಿದ್ಯಾಹೂರಣ .

ಅದು ದೇವತೆಗಳಿಂದಲೂ ಎದುರಿಸಲಾಗದ ವಿದ್ಯಾಬಲ ,

ಗುರು ಹೇಳಿದರೂ ಸ್ವರಕ್ಷಣೆಗದನ್ನು ಅವ ಬಳಸುವುದಿಲ್ಲ.

ಯಾರಿಂದಲೂ ಕೂಡಾ ಅವನಿಗೆ ಮರಣವದು ಬರುವುದಿಲ್ಲ .

No comments:

Post a Comment

ಗೋ-ಕುಲ Go-Kula