Thursday 24 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 63 - 71

 [ಭೀಮ-ಹಿಡಿಮ್ಬೀ ಪುತ್ರ ಯಾರೆಂದು ವಿವರಿಸುತ್ತಾರೆ]

ದೇವೋsಪಿ ರಾಕ್ಷಸತನುರ್ನ್ನಿರೃತಿಃ ಪುರಾ ಯ ಆವೇಶಯುಕ್ ಚ ಗಿರಿಶಸ್ಯ ಘಟೋತ್ಕಚಾಖ್ಯಃ ।

ಪೂರ್ವಂ ಘಟೋಪಮಮಮುಷ್ಯ ಶಿರೋ ಬಭೂವ ಕೇಶಾ ನಿಮೇಷತ ಉದಾಸುರತೋ ಹಿ ನಾಮ ॥೧೯.೬೩॥

ಸ್ವಭಾವದಿಂದ ದೇವತೆಯಾದರೂ, ರಾಕ್ಷಸದೇಹ ಬಂದ ಕಾರಣ ನಿರ್ಋತಿ ,

ರುದ್ರಾವೇಶದಿಂದ ಘಟೋತ್ಕಚ ಎಂಬ ಹೆಸರಿನವನಾಗಿ ಹುಟ್ಟಿಬಂದ ಗತಿ .

ಹುಟ್ಟಿದಾಗ ಅವನ ತಲೆ ಕೂದಲಿರದೆ ಮಡಕೆ(ಘಟ )ಯಂತಿದ್ದ ನೋಟ ,

ನಂತರ ನಿಮಿಷದಲ್ಲೇ ಕೂದಲು ಬಂದೂ  ಬಂತು ಘಟೋತ್ಕಚ ಎಂಬ ಪಟ್ಟ .

 

ಜಾತೇ ಸುತೇ ಸಮಯತೋ ಭಗವತ್ಕೃತಾತ್ ಸ ಭೀಮೋ ಜಗಾದ ಸಸುತಾಂ ಗಮನಾಯ ತಾಂ ಚ ।

ಸ್ಮೃತ್ಯಾsಭಿಯಾನ ಉಭಯೋರಪಿ ಸಾ ಪ್ರತಿಜ್ಞಾಂ ತೇಷಾಂ ವಿಧಾಯ ಚ ಯಯೌ ಸುರಲೋಕಮೇವ ॥೧೯.೬೪॥

ಹೀಗೆ ಮಗ ಹುಟ್ಟಿದಮೇಲೆ ವ್ಯಾಸರು ಹೇಳಿದಂತೆ ಮಗನೊಂದಿಗೆ ಹೊರಡಲು ಹಿಡಿಂಬಿಗೆ ಹೇಳುತ್ತಾನೆ ಭೀಮಸೇನ ,

ನೀವುಗಳು ನೆನೆಸಿಕೊಂಡ ಕೂಡಲೇ ನಾವುಗಳು ಬರುತ್ತೇವೆ ಎಂದ ಹಿಡಿಂಬಿ ಮಾಡಿದಳು ಸುರಲೋಕ ಯಾನ .

 

ವ್ಯಾಸೋsಪಿ ಪಾಣ್ಡುತನಯೈಃ  ಸಹಿತೋ ಬಕಸ್ಯ ರೌದ್ರಾದ್ ವರಾಜ್ಜಯವಧಾಪಗತಸ್ಯ ನಿತ್ಯಮ್ ।

ಯಾತೋ ವಧಾಯ ಪರಮಾಗಣಿತೋರುಧಾಮಾ ಪೂರ್ಣ್ಣಾಕ್ಷಯೋರುಸುಖ ಆಶು ತದೈಕಚಕ್ರಾಮ್ ॥೧೯.೬೫॥

ಎಣಿಸಲಾಗದ ಗುಣಗಳ ದೀಪ, ಪರಿಪೂರ್ಣ, ನಾಶವಿರದ ಸುಖದ ವೇದವ್ಯಾಸದೇವರು ,

ರುದ್ರಬಲದಿ ಸೋಲು ಸಾವಿರದ ಬಕನ ಕೊಲ್ಲಲು ಏಕಚಕ್ರನಗರಕ್ಕೆ ಪಾಂಡವರೊಂದಿಗೆ ಹೊರಟರು.

 

ತಾನ್ ಬ್ರಾಹ್ಮಣಸ್ಯ ಚ ಗೃಹೇ ಪ್ರಣಿಧಾಯ ಕೃಷ್ಣಃ ಶಿಷ್ಯಾ ಮಮೈತ ಇತಿ ವಿಪ್ರಕುಮಾರರೂಪಾನ್ ।

ಆಯಾಮಿ ಕಾಲ ಇತಿ ತಾನನುಶಾಸ್ಯ ಚಾಯಾತ್ ತೇ ತತ್ರ ವಾಸಮಥ ಚಕ್ರುರನೂಚ್ಯ ವೇದಾನ್ ॥೧೯.೬೬॥

ಬ್ರಾಹ್ಮಣವೇಷ ಧರಿಸಿದ ಅವರನ್ನು ವೇದವ್ಯಾಸರು,

ಏಕಚಕ್ರನಗರದ ವಿಪ್ರನೊಬ್ಬನ ಮನೆಯಲ್ಲಿ ಬಿಟ್ಟರು .

ನನ್ನ ಶಿಷ್ಯರಿವರು, ನಾನು ಮುಂದೆ ಬರುವೆನೆಂದು ಅಲ್ಲಿಂದ ಹೊರಟರು ,

ಪಾಂಡವರು ವೇದಚಿಂತನೆ ಮಾಡುತ್ತಾ ಅಲ್ಲಿಯೇ ವಾಸಮಾಡಿಕೊಂಡಿದ್ದರು.

 

ಭಿಕ್ಷಾಮಟತ್ಸು ಸತತಂ ಪ್ರತಿಹುಙ್ಕೃತೇನ ಭೀಮೇ ವಿಶಾಂ ಸದನ ಏವ ಗೃಹಪ್ರಮಾಣಮ್ ।

ಭಾಣ್ಡಂ  ಕುಲಾಲವಿಹಿತಂ ಪ್ರತಿಗೃಹ್ಯ ಗಚ್ಛತ್ಯಾಶಙ್ಕಯಾsವಗಮನಸ್ಯ ತಮಾಹ ಧಾರ್ಮ್ಮಃ ॥೧೯.೬೭॥

ಸ್ಥೂಲಂ ಹಿ ಸದ್ಮ ಪೃಥಿವೀಸಹಿತಂ  ತ್ವರಕ್ಷ ಉದ್ಧೃತ್ಯ ವಹ್ನಿಮುಖತಸ್ತದು ಚೈಕದೋಷ್ಣಾ ।

ಭಾಣ್ಡಂ ತದರ್ತ್ಥಮುರು ಕುಮ್ಭಕರೇಣ ದತ್ತಂ ಭಿಕ್ಷಾಂ ಚ ತೇನ ಚರಸಿ ಪ್ರತಿಹುಙ್ಕೃತೇನ ॥೧೯.೬೮॥

ಬ್ರಾಹ್ಮಣವೇಷದ ಪಾಂಡವರು ಐವರು ಅಲ್ಲಿ ಭಿಕ್ಷೆ ಬೇಡುತ್ತಿರಲು ,

ಭೀಮ ಕುಂಬಾರ ಮಾಡಿದ ದೊಡ್ಡ ಮಡಕೆ ಹಿಡಿದು ಭಿಕ್ಷೆಗೆ ಹೊರಟಿರಲು ,

ಧರ್ಮಜ ಹೇಳುವನಾಗ ಭೀಮನ ಗುರುತಾದೀತೆಂಬ ಭಯವು ಕಾಡಿರಲು .

ಭೂಮಿಯಿಂದ ಕೂಡಿದ ಬಹಳ ದೊಡ್ಡದಾದ ಕುಂಬಾರನ ಮನೆ ,

ಒಂದೇ ಕೈಯಿಂದ ಎತ್ತಿ ಬೆಂಕಿಯಿಂದ ರಕ್ಷಿಸಿದ ಉಪಕಾರ ಸ್ಮರಣೆ .

ಅದರ ನೆನಪಿಗಾಗಿ ನಿನಗೆ ಕುಂಬಾರ ಮಡಕೆ ಮಾಡಿ ಕೊಟ್ಟ ಭೀಮ ,

ಅದನ್ನೇ ಹಿಡಿದು ಹುಂಕಾರದಿಂದ ಭಿಕ್ಷಾಟನೆ ಆಗಿದೆ ನಿನ್ನ ನೇಮ.

 

ಧರ್ಮ್ಮಸ್ಯ ತೇ ಸುನಿಯತೇರ್ಬಲತಶ್ಚ ಬೋಧೋ ಭೂಯಾತ್ ಸುಯೋಧನಜನಸ್ಯ ತತೋ ಭಯಂ ಮೇ

ಮಾತ್ರಾ ಸಹೈವ ವಸ ಫಲ್ಗುನಪೂರ್ವಕೈಸ್ತ್ವಮಾನೀತಮೇವ ಪರಿಭುಙ್ಕ್ಷ್ವನತು ವ್ರಜೇಥಾಃ ॥೧೯.೬೯

ನಿನ್ನ ಧರ್ಮನಿಷ್ಠೆ ಮತ್ತು ನಿನ್ನ ಈ ಅಪರಿಮಿತ ಬಲದಿಂದ ,

ದುರ್ಯೋಧನನ ದೂತರಿಗಾದೀತು ಮೇಲಿನ ಸುಳಿವುಗಳಿಂದ .

ಆ ಭಯದಿಂದ ಹೇಳುತ್ತಿದ್ದೇನೆ ನೀನು ಅಮ್ಮನೊಡನೆ ಮನೆಯಲ್ಲಿರು,

ಅರ್ಜುನಾದಿಗಳು ತಂದದ್ದು ಉಂಡು ಮನೆಯಾಚೆಗೆ ಹೋಗದಿರು .

 

ಇತ್ಯುಕ್ತ ಆಶು ಸ ಚಕಾರ ತಥೈವ ಭೀಮಸ್ತೇsಪಿ ಸ್ವಧರ್ಮ್ಮಪರಿರಕ್ಷಣಹೇತುಮೌನಾಃ ।

ಭಿಕ್ಷಾಂ ಚರನ್ತ್ಯಥ ಚತುರ್ಷ್ವಪಿ ತೇಷು ಯಾತೇಷ್ವೇಕತ್ರ ಮಾತೃಸಹಿತಃ ಸ ಕದಾಚಿದಾಸ್ತೇ ॥೧೯.೭೦॥

ಇದನ್ನೆಲ್ಲ ಕೇಳಿಸಿಕೊಂಡ ಭೀಮ ಆಯಿತೆಂದು ಒಪ್ಪಿ ಹಾಗೇ ಮಾಡಿದ ,

ಹೀಗೆ ಪಾಂಡವರು ಅಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು ಧರ್ಮಮಾರ್ಗದಿಂದ .

ಒಮ್ಮೆ ನಾಲ್ವರು ಭಿಕ್ಷೆಗೆ ಹೋಗಿರಲು ಭೀಮ ಅಮ್ಮನೊಡನೆ ಮನೆಯಲ್ಲಿದ್ದ .

 

ತತ್ಕಾಲ ಏವ ರುದಿತಂ ನಿಜವಾಸಹೇತೋರ್ವಿಪ್ರಸ್ಯ ದಾರಸಹಿತಸ್ಯ ನಿಶಮ್ಯ ಭೀಮಃ ।

ಸ್ತ್ರೀಬಾಲಸಂಯುತಗೃಹೇ ಶಿಶುಲಾಳನಾದೌ ಲಜ್ಜೇದಿತಿ ಸ್ಮ ಜನನೀಮವದನ್ನಚಾಗಾತ್ ॥೧೯.೭೧॥

ಆ ಸಮಯದಲ್ಲಿ ಕೇಳಿಸುತ್ತದೆ ತಾವಿದ್ದ ಮನೆಯ ಬ್ರಾಹ್ಮಣ ದಂಪತಿಗಳ ಅಳು ,

ಹೆಂಗಸರು ಮಕ್ಕಳ ಚಟುವಟಿಕೆ ಎಲ್ಲಾ ಮನೆಯಲ್ಲಿ ತುಂಬಿಕೊಂಡಿರಲು ,

ಸಂಕೋಚದಿ ತಾನು ಹೋಗದೇ ತಾಯಿಯ ಕಳಿಸಿದ 'ಅಮ್ಮ ಹೋಗಿ ಅದೇನುಕೇಳು.'

No comments:

Post a Comment

ಗೋ-ಕುಲ Go-Kula