Wednesday 30 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 96 - 100

 ಉತ್ಪತ್ತಿಪೂರ್ವಕಕಥಾಂ ದ್ರುಪದಾತ್ಮಜಾಯಾ ವ್ಯಾಸೋ ಹ್ಯನೂಚ್ಯ ಜಗತಾಂ ಗುರುರೀಶ್ವರೇಶಃ ।

ಯಾತೇತ್ಯಚೋದಯದಥಾಪ್ಯಪರೇ ದ್ವಿಜಾಗ್ರ್ಯಾಸ್ತಾನ್ ಬ್ರಾಹ್ಮಣಾ ಇತಿ ಭುಜಿರ್ಭವತೀತಿ ಚೋಚುಃ ॥೧೯.೯೬॥

ಜಗದ್ಗುರುಗಳೂ ಸರ್ವಜ್ಞ ಸರ್ವೇಶರರೂ ಆದಂತಹ  ವೇದವ್ಯಾಸ ದೇವರು  ,

ದ್ರೌಪದಿಯ ಹುಟ್ಟು ಮತ್ತೆಲ್ಲಾ ಹೇಳಿ ಅವಳ ಸ್ವಯಂವರಕ್ಕೆ ಹೋಗಲ್ಹೇಳಿದರು.

ಬೇರೆ ಬ್ರಾಹ್ಮಣರು ಪಾಂಡವರ ಬ್ರಾಹ್ಮಣರೆಂದೇ ತಿಳಿದರು,

ಬನ್ನಿ , ಅಲ್ಲಿ ಉತ್ತಮ ಊಟ ಸಿಗುತ್ತದೆ ಎಂದು ಹೇಳಿದರು .

 

ಪೂರ್ವಂ ಹಿ ಪಾರ್ಷತ ಇಮಾನ್ ಜತುಗೇಹದಗ್ಧಾನ್ ಶ್ರುತ್ವಾsತಿದುಃಖಿತಮನಾಃ ಪುನರೇವ ಮನ್ತ್ರಃ ।

ಯಾಜೋಪಯಾಜಮುಖನಿಸ್ಸೃತ ಏವಮೇಷ ನಾಸತ್ಯತಾರ್ಹ ಇತಿ ಜೀವನಮೇಷು ಮೇನೇ ॥೧೯.೯೭॥

ಇತ್ತ ಪಾಂಡವರು ಅರಗಿನ ಮನೆಯಲ್ಲಿ ಸತ್ತರು ಎಂಬ ವಿಷಯ ತಿಳಿದು ,

ದ್ರುಪದರಾಜ ಅತ್ಯಂತ ದುಃಖಿತನಾಗಿದ್ದ ಮನದಲ್ಲಿ ಬಹಳವಾಗಿ ನೊಂದು .

ಆದರೆ ಯಾಜೋಪಯಾಜರ ಮಂತ್ರ ಮತ್ತವರ ಮಾತು,

ಸುಳ್ಳಾಗಲಸಾಧ್ಯ , ಬದುಕಿರಲೇಬೇಕೆಂಬ ನಂಬಿಕೆ ಬಂದಿತ್ತು .

 

ಯತ್ರಕ್ವಚಿತ್ ಪ್ರತಿವಸನ್ತಿ ನಿಲೀನರೂಪಾಃ ಪಾರ್ತ್ಥಾ ಇತಿ ಸ್ಮ ಸ ತು ಫಲ್ಗುನಕಾರಣೇನ ।

ಚಕ್ರೇ ಸ್ವಯಮ್ಬರವಿಘೋಷಣಮಾಶು ರಾಜಸ್ವನ್ಯೈರಧಾರ್ಯ್ಯಧನುರೀಶವರಾಚ್ಚ ಚಕ್ರೇ ॥೧೯.೯೮॥

ಎಲ್ಲೋ ಒಂದುಕಡೆ ತಮ್ಮ ರೂಪವನ್ನು ಬದಲು ಮಾಡಿಕೊಂಡು ,

ಪಾಂಡವರು ಜೀವಿಸುತ್ತಿದ್ದಾರೆಂದೇ ದ್ರುಪದರಾಜ ಅಂದುಕೊಂಡು ,

ಮಗಳು ದ್ರೌಪದೀದೇವಿಯ ಸ್ವಯಂವರದ ಘೋಷಣೆಯ ಮಾಡಿದ ,

ಅರ್ಜುನನ ಬಿಟ್ಟಿನ್ಯಾರೂ ಎತ್ತಲಾಗದ ಬಿಲ್ಲ ಶಿವದಯದಿ ಸಿದ್ಧಪಡಿಸಿದ .

 

[ಅರಗಿನಮನೆ  ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಶ್ರೀಕೃಷ್ಣ ಏನು ಮಾಡುತ್ತಿದ್ದ ಎನ್ನುವುದನ್ನು ವಿವರಿಸುತ್ತಾರೆ:]

ತತ್ಕಾಲ ಏವ ವಸುದೇವಸುತೋsಪಿ ಕೃಷ್ಣಃ ಸಮ್ಪೂರ್ಣ್ಣನೈಜಪರಿಬೋಧತ ಏವ ಸರ್ವಮ್ ।

ಜಾನನ್ನಪಿ ಸ್ಮ ಹಲಿನಾ ಸಹಿತೋ ಜಗಾಮ ಪಾರ್ತ್ಥಾನ್ ನಿಶಮ್ಯ ಚ ಮೃತಾನಥ ಕುಲ್ಯಹೇತೋಃ ॥೧೯.೯೯॥

ಆಗ ವಸುದೇವನ ಮಗನಾದ ಶ್ರೀಕೃಷ್ಣ ವಾಸುದೇವ ,

ಸರ್ವಜ್ಞ , ಎಲ್ಲಾ ವಿಷಯಗಳ ತಿಳಿದವನೇ ಆಗಿದ್ದವ .

ಆದರೂ ಲೋಕನೀತಿಯಂತೆ ಅಣ್ಣ ಬಲರಾಮನ  ಒಡಗೂಡಿ ,

ಧರ್ಮೋದಕಕ್ಕೆ ಹೋದ ಪಾಂಡವರು ಸತ್ತ ಕಾರಣ ನೀಡಿ.

 

ಸ ಪ್ರಾಪ್ಯ ಹಸ್ತಿನಪುರಂ ಧೃತರಾಷ್ಟ್ರಪುತ್ರಾನ್ ಸಂವಞ್ಚಯಂಸ್ತದನುಸಾರಿಕಥಾಶ್ಚ ಕೃತ್ವಾ ।

ಭೀಷ್ಮಾದಿಭಿಃ ಪರಿಗತಾಪ್ರಿಯವಜ್ಜಗಾಮ ದ್ವಾರಾವತೀಮುದಿತಪೂರ್ಣ್ಣಸುನಿತ್ಯಸೌಖ್ಯಃ ॥೧೯.೧೦೦॥

ನಿತ್ಯತೃಪ್ತ ಪೂರ್ಣಸುಖಿ ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ,

ದುರ್ಯೋಧನಾದಿಗಳ ಮೋಹಕ್ಕೆ ತಕ್ಕ ಮಾತನಾಡಿದ .

ಭೀಷ್ಮಾದಿಗಳಿಂದ ಸುತ್ತುವರಿಯಲ್ಪಟ್ಟಿದ್ದ ಶ್ರೀಕೃಷ್ಣ ತಾನು,

ತುಂಬಾ ನೊಂದವನಂತೆ ದ್ವಾರಾವತೀ ಕಡೆ ಹೊರಟನು.

No comments:

Post a Comment

ಗೋ-ಕುಲ Go-Kula