Sunday 20 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 33 - 37

 ಪೂರ್ವಂ ಪ್ರಹಸ್ತ ಇತಿ ಯಸ್ತ್ವಭವತ್ ಸುಪಾಪಃ ಸೋsಭ್ಯೇತ್ಯ ಪಾಣ್ಡುತನಯಾನಭವಚ್ಚ ಮನ್ತ್ರೀ ।

ದುರ್ಯ್ಯೋಧನಂ ಪ್ರತಿವಿಹಾಯ ಭವತ್ಸಕಾಶಮಾಯಾತ ಇತ್ಯವದದೇಷು ಸ ಕೂಟವಾಕ್ಯಮ್ ॥೧೯.೩೩॥

ರಾವಣನ ಸೇನಾಮುಖ್ಯಸ್ತನಾಗಿದ್ದ ಪ್ರಹಸ್ತ ರಾಮಾಯಣ ಕಾಲದಲ್ಲಿ ,

ಆ ಪಾಪಿಯೇ ಪುರೋಚನನಾಗಿ ಹುಟ್ಟಿದ್ದ ಮಹಾಭಾರತ ಕಾಲದಲ್ಲಿ .

ಆ ಪುರೋಚನ ಪಾಂಡವರ ಬಳಿ ಬಂದ ,

ದುರ್ಯೋಧನನ ಬಿಟ್ಟು ಬಂದಿದ್ದೇನೆಂದ .

ನಂಬಿಸಿ ಪಾಂಡವರ ಮಂತ್ರಿಯೂ ಆದ .

 

ದಿವ್ಯಂ ಗೃಹಂ ಚ ಭವತಾಂ ಹಿ ಮಯೋಪನೀತಂ ಪ್ರೀತ್ಯೈವ ಪಾಪಮನುಯಾತುಮಹಂ ನ ಶಕ್ತಃ ।

ಯುಷ್ಮಾಸು ಧರ್ಮ್ಮಧೃತಿಮತ್ಸು ಸದಾ ನಿವತ್ಸ್ಯ ಇತ್ಯೂಚಿವಾಂಸಮಮುಮಾಹುರಹೋ ಸುಭದ್ರಮ್ ॥೧೯.೩೪॥

ನಿಮಗೆಂದೇ ಪ್ರೀತಿಯಿಂದ ಸುಂದರ ಅಲೌಕಿಕ ಮನೆಯೊಂದು ಕಟ್ಟಲ್ಪಟ್ಟಿದೆ,

ಪಾಪಿಷ್ಠ ದುರ್ಯೋಧನನ ಸಂಗ ಬಿಟ್ಟು ನಿಮ್ಮ ಧರ್ಮಸಂಗದಲ್ಲಿ ನನ್ನ ಮನಸಿದೆ.

ನಿಮ್ಮೊಂದಿಗೆ ಇರುತ್ತೇನೆ ಎಂದ ಕಪಟಿ ಪುರೋಚನ ,

ಆಶ್ಚರ್ಯದಿಂದ ಒಳ್ಳೇದೆಂದರು ಪಾಂಡವರೈದು ಜನ .

 

ದೃಷ್ಟ್ವೈವ ಜಾತುಷಗೃಹಂ ವಸಯಾ ಸಮೇತಂ ತದ್ಗನ್ಧತೋ ವೃಷಸುತಃ ಪವಮಾನಜಾತಮ್ ।

ತಂ ಚಾತಿಪಾಪಮವದತ್ ಸುಮುಖೈಷ ಪಾಪೋ ಹನ್ತುಂ ನ ಇಚ್ಛತಿ ಸದಾ ಭವ ಚ ಪ್ರತೀತಃ ॥೧೯.೩೫॥

ಕೊಬ್ಬಿನ ಪದಾರ್ಥಗಳಿಂದ ತುಂಬಿರುವ ವಿಚಿತ್ರ ಅರಗಿನ ಮನೆ ,

ಧರ್ಮರಾಜ ಭೀಮಗೆ ಹೇಳುತ್ತಾನೆ ಗ್ರಹಿಸುತ್ತಾ ಅದರ ವಾಸನೆ .

ಹೇ ಮಂಗಲಮುಖನಾದ ಭೀಮಸೇನಾ ,

ನಮ್ಮ ಕೊಲ್ಲಬಯಸಿದ್ದಾನೆ ಪುರೋಚನ .

ಇರಲಿ ಯಾವಾಗಲೂ ಎಚ್ಚರಿಕೆಯ ಗಮನ .

 

ಕ್ಷತ್ತಾsಥ ನೀತಿಬಲತೋsಖಿಲಲೋಕವೃತ್ತಂ ಜಾನನ್ತ್ಸ್ವಚಾರಮುಖತಃ ಖನಕಾಯ ಚೋಚೇ ।

ಉಕ್ತ್ವೈವ ಧರ್ಮ್ಮತನಯಾಯ ಮದೀಯವಾಕ್ಯಂ ಪೂರ್ವೋಕ್ತಮಾಶು ಕುರು ತತ್ರ ಬಿಲಂ ಸುದೂರಮ್ ॥೧೯.೩೬॥

ಕುಶಾಗ್ರಮತಿಯಾದ ಮತ್ತು ನೀತಿಬಲದ ವಿದುರ ,

ಅರಿತವನಾದ ಎಲ್ಲಾ ಕಾರಸ್ಥಾನದ ಪೂರ್ತಿ ವಿವರ.

ಬಳಸಿ ಧರ್ಮರಾಜನಿಗೆ ಹೇಳಿದ ಒಗಟುಮಾತಿನ ಗುಟ್ಟು ,

ಕಳಿಸಿದನೊಬ್ಬನ ತೋಡಲು ದೂರಸುರಂಗ ಆಜ್ಞೆ ಕೊಟ್ಟು.

 

ಚಕ್ರೇ ಸ ಚೈವಮಥ ವರ್ತ್ಮ ವೃತಿಚ್ಛಲೇನ ದ್ವಾರಂ ಚ ತಸ್ಯ ಸ ಪಿಧಾಯ ಯಯೌ ಗೃಹಂ ಸ್ವಮ್ ।

ಭೀಮಃ ಪೂರೋಚನ ಉಭಾವಪಿ ತೌ ವಧಾಯ ಚ್ಛಿದ್ರಾರ್ತ್ಥಿನೌ ಮಿಥ ಉತೋಷತುರಬ್ದಕಾರ್ದ್ಧಮ್ ॥೧೯.೩೭॥

ಆ ಸುರಂಗ ತೋಡುವವ ಪ್ರಾಕಾರ ಮಾಡುವ ನೆಪನೀಡಿ ,

ವಿದುರ ಹೇಳಿದ ದಾರಿ ನಿರ್ಮಿಸಿದ ಸುರಂಗವ ತೋಡಿ .

ಮನೆಗೆ ಹೊರಟನವ ಸುರಂಗದ್ವಾರವನ್ನು ಭದ್ರಮಾಡಿ .

ಭೀಮಸೇನ ಪುರೋಚನ ಪರಸ್ಪರ ಕಾಯುತ್ತಾ ಸಂಹಾರದ ಅವಕಾಶ ,

ಆರು ತಿಂಗಳಕಾಲ ಅಲ್ಲೇ ಮಾಡಿಕೊಂಡಿದ್ದರು ಅವರಿಬ್ಬರೂ ವಾಸ .

No comments:

Post a Comment

ಗೋ-ಕುಲ Go-Kula