Sunday 13 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 06 -10

 

ಜ್ಯೇಷ್ಠಸ್ಯ ತೇsಪಿ ಹಿ ವಯಂ ಹೃದಯಪ್ರಜಾತಾ ನಾರ್ಹತ್ವಮೇವ ಗಮಿತಾ ಭವತೈವ ರಾಜ್ಯೇ ।

ಭ್ರಾತುಃ ಕನೀಯಸ ಉತಾಪಿ ಹಿ ದಾರಜಾತಾ ಅನ್ಯೈಶ್ಚ ರಾಜ್ಯಪದವೀಂ ಭವತೈವ ನೀತಾಃ ॥೧೯.೦೬॥

ಅಪ್ಪಾ , ಕುಲಕ್ಕೆ ಹಿರಿಯನಾದ ನಿನ್ನಿಂದಲೇ ಹುಟ್ಟಿದವರು ನಾವು ,

ಹಾಗಿದ್ದರೂ ನಮಗೆ ರಾಜ್ಯಾಭಿಷೇಕ ಆಗಲಿಲ್ಲವೆಂಬುದೇ ನೋವು .

ಆದರೆ ಪರಪುರುಷರಿಂದ ನಿನ್ನ ತಮ್ಮನ ಹೆಂಡತಿಯಲ್ಲಿ ,

ಹುಟ್ಟಿದವರು ಪದವಿಯೇರಿ ಆಳ್ವಿಕೆ ಮಾಡುತ್ತಿದ್ದಾರಿಲ್ಲಿ.

 

ರಾಜ್ಯಂ ಮಹಚ್ಚ ಸಮವಾಪ್ಸ್ಯತಿ ಧರ್ಮ್ಮಸೂನುಸ್ತ್ವತ್ತೋsಥವಾsನುಜಬಲಾತ್ ಪ್ರಸಭಂ ವಯಂ ತು ।

ದಾಸಾ ಭವೇಮ ನಿಜತನ್ತುಭಿರೇವ ಸಾಕಂ ಕುನ್ತೀಸುತಸ್ಯ ಪರತೋsಪಿ ತದನ್ವಯಸ್ಯ ॥೧೯.೦೭॥

ಧರ್ಮರಾಜ ನಿನ್ನನುಗ್ರಹ ಮತ್ತು ತಮ್ಮಂದಿರ ಬಲದ ದ್ವಾರ ,

ಪಡೆಯುವ ಬಲದಿಂದ ಸಂಪೂರ್ಣ ಸಾಮ್ರಾಜ್ಯದ ಅಧಿಕಾರ .

ನಿನ್ನ ಸಂತತಿಯವರೆಲ್ಲಾ ಅನುಭವಿಸಬೇಕು ಧರ್ಮರಾಜನ ದಾಸ್ಯ ,

ಕುಂತೀಪುತ್ರನ ಸಂತತಿಯ ಅಡಿಗೆ ನಮ್ಮ ಸಂತತಿಯ ಭವಿಷ್ಯ .

 

ನಾsತ್ಮಾರ್ತ್ಥಮಸ್ತಿ ಮಮ ದುಃಖಮಥಾತಿಶುದ್ಧಲೋಕಪ್ರಸಿದ್ಧಯಶಸಸ್ತವ ಕೀರ್ತ್ತಿನಾಶಃ 

ಅಸ್ಮನ್ನಿಮಿತ್ತ ಇತಿ ದುಃಖಮತೋ ಹಿ ಸರ್ವೇsಪೀಚ್ಛಾಮ ಮರ್ತ್ತುಮಥ ನಃ ಕುರು ಚಾಪ್ಯನುಜ್ಞಾಮ್ ॥೧೯.೦೮॥

ಈ ಸಂದರ್ಭದಲ್ಲಿ ನನಗಾಗಿ ನಾನಿಲ್ಲಿ ದುಃಖಪಡುತ್ತಿಲ್ಲ ,

ಲೋಕದಿ ನಮ್ಮಿಂದ ನಿನ್ನ ಕೀರ್ತಿನಾಶ ಆಗುತ್ತಿದೆಯಲ್ಲ .

ನಮ್ಮನ್ನು ಸಾವಿಗೆಳಸುತ್ತಿದೆ ಆ ಪಾಪಪ್ರಜ್ಞೆ ,

ನಾವು ಸಾಯಲು ಬೇಗ ಕೊಡು ನಿನ್ನ ಆಜ್ಞೆ .

 

ಏವಂ ಸ್ವಪುತ್ರವಚನಂ ಸ ನಿಶಮ್ಯ ರಾಜಾ ಪ್ರೋವಾಚ ನಾನುಗುಣಮೇತದಹೋ ಮನಸ್ತೇ ।

ಕೋ ನಾಮ ಪಾಣ್ಡುತನಯೇಷು ಗುಣೋತ್ತಮೇಷು ಪ್ರೀತಿಂ ನ ಯಾತಿ ನಿಜವೀರ್ಯ್ಯಭವೋಚ್ಚಯೇಷು ॥೧೯.೦೯॥

ಧೃತರಾಷ್ಟ್ರ ತನ್ನ ಮಗನ ಮಾತ ಕೇಳಿಸಿಕೊಂಡ ,

ಆನಂತರ ಕುರುಡರಾಜ ಅವನಿಗೆ ಹೀಗೆ ಹೇಳಿದ .

ಇಲ್ಲ , ಸರಿಯಾಗಿಲ್ಲ ನಿನ್ನ ಮನದ ಯೋಚನೆಯ ಈ ರೀತಿ ,

ಉತ್ತಮ ಸ್ವಸಾಮರ್ಥ್ಯದ ಪಾಂಡವರಲ್ಲಿ ಯಾರಿಗಿರದು ಪ್ರೀತಿ .

 

ತೇ ಹಿ ಸ್ವಭಾಹುಲತೋsಖಿಲಭೂಪಭೂತಿಂ ಮಯ್ಯಾಕೃಷನ್ತಿ ನಚ ವಃ ಪ್ರತಿಷೇಧಕಾಸ್ತೇ ।

ತಸ್ಮಾಚ್ಛಮಂ ವ್ರಜ ಶುಭಾಯ ಕುಲಸ್ಯ ತಾತ ಕ್ಷೇಮಾಯ ನೋ ಭವತಿ ವೋ ಬಲವದ್ವಿರೋಧಃ॥೧೯.೧೦॥

ಪಾಂಡವರು ತಮ್ಮ ತೋಳ್ಬಲದಿಂದ ನನಗೆ ತಂದೊಪ್ಪಿಸುತ್ತಿರುವ ರಾಜರ ಸಂಪತ್ತು ,

ನಿಮ್ಮ ವಿರೋಧಿಗಳಲ್ಲವರು,ಅವರನ್ನು ನೀವು ಒಪ್ಪಿಕೊಳ್ಳುವುದರಲ್ಲಿದೆ ಕುಲದ ಒಳಿತು .

ಬಲಿಷ್ಠರಾದ ಅವರೊಂದಿಗೆ ವಿರೋಧ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ ಒಂದಿನಿತು .

[Contributed by Shri Govind Magal]

No comments:

Post a Comment

ಗೋ-ಕುಲ Go-Kula