Tuesday 15 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 22 - 27

 [ಇನ್ನು ಪಾಂಡವರನ್ನು ವಾರಣಾವತಕ್ಕೆ ಹೇಗೆ ಕಳುಹಿಸುವುದು ಎನ್ನುವ ಉಪಾಯವನ್ನು ಆಗಲೇ ನಿಶ್ಚಯಿಸಿಕೊಂಡಿದ್ದ ದುರ್ಯೋಧನ, ಅದನ್ನೂ ಧೃತರಾಷ್ಟ್ರನಿಗೆ ವಿವರಿಸುತ್ತಾನೆ].

 ಭೇದಃ ಕುಲಸ್ಯ ಭವಿತಾ ಕುಲನಾಶಹೇತುರಸ್ಮಾಭಿರೇಷು ಸಹಿತೇಷು ಪುರೇ ವಸತ್ಸು ।

ತಸ್ಮಾದುಪಾಯಬಲತಃ ಪ್ರತಿಯಾತನೀಯಾಸ್ತೇ ವಾರಣಾವತಮಿತೇ ವಿಹಿತೋsಪ್ಯುಪಾಯಃ॥೧೯.೨೨॥

ಪಾಂಡವರು ಇಲ್ಲೇ ನಮ್ಮೊಟ್ಟಿಗೇ ವಾಸ ಮಾಡುತ್ತಿದ್ದರೆ ,

ಕುಲದಲ್ಲಿ ಒಡಕಾಗಿ-ಆ ಭೇದದಿಂದ ಕುಲನಾಶದ ಬರೆ .

ಹಾಗಾಗಿ ಯಾವುದಾದರೂ ಒಂದುಪಾಯದ ಬಲದಿಂದ ಕಳಿಸಬೇಕು

ಅವರನ್ನು ವಾರಣಾವತಕ್ಕೆ ಅಟ್ಟುವ ಉಪಾಯ ನನ್ನಲ್ಲಿದೆ ತಿಳಿಯಬೇಕು .

 

ವಿಷ್ಣುರ್ಜ್ಜಯನ್ತ ಇತಿ ಶಮ್ಭುಸಹಾಯ ಆಸ್ತೇ ದೇವೋತ್ಸವಶ್ಚ ಸುಮಹಾನ್ ಭವಿತಾsತ್ರ ಸುಷ್ಠು ।

ಭಕ್ತಾಶ್ಚ ತೇ ಹಿ ನಿತರಾಮರಿಶಙ್ಖಪಾಣೌ ತ್ವಚ್ಚೋ. ದಿತಾಃ ಸಮುಪಯಾನ್ತಿ ತಮುತ್ಸವಂ ದ್ರಾಕ್॥೧೯.೨೩॥

ವಾರಣಾವತದಲ್ಲಿ ರುದ್ರ ಸಹಾಯಕನಾಗಿರುವ ಜಯಂತ ಹೆಸರಿನ ನಾರಾಯಣ ,

ಸನ್ನಿಹಿತನಾಗಿದ್ದಾನಲ್ಲಿ -ಜಯಂತೇಶ್ವರನ ಹೆಸರಲ್ಲಿ ಇದೆ ವಿಷ್ಣುವಿನ ದೇವಸ್ಥಾನ .

ಅಲ್ಲಿ ನಡೆಯುತ್ತದೆ ದೊಡ್ಡದಾದ ಹಬ್ಬ ಜಾತ್ರೆ ಮಹೋತ್ಸವ ,

ಪಾಂಡವರಲ್ಲಿದೆ ಶಂಖ ಚಕ್ರ ಗದಾಪಾಣಿಯಲ್ಲಿ ಭಕ್ತಿಯ ಭಾವ .

ನಿನ್ನಿಂದ ಪ್ರೇರಿಸಲ್ಪಟ್ಟ ಪಾಂಡವರು ,

ಅದನೋಡಲಲ್ಲಿಗೆ ಬೇಗ ತೆರಳುವರು.

[ಇದ್ದಕ್ಕಿದ್ದಂತೆ ಹೇಳಿದರೆ ಹೇಗೆ ಹೋಗುತ್ತಾರೆ ಎನ್ನುವ ಪ್ರಶ್ನೆಗೂ ತನ್ನ ಪೂರ್ವನಿಯೋಜಿತ ಉಪಾಯವನ್ನು ದುರ್ಯೋಧನ ಧೃತರಾಷ್ಟ್ರನಿಗೆ ವಿವರಿಸುತ್ತಾನೆ].  

 

ಅಜ್ಞಾಪ್ಯ ಮತ್ಪುರುಷತಾಂ ಪುರಷೈರ್ಮ್ಮದೀಯೈರ್ಮ್ಮದ್ಧ್ಯಸ್ಥವದ್ ಬಹುಗುಣಾ ಉದಿತಾಶ್ಚ ತತ್ರ ।

ತೇಷಾಂ ಪುರೋsತ್ರ ಗಮನಾಭಿರುಚಿಶ್ಚ ಜಾತಾ ದ್ರಷ್ಟುಂ ಪುರಂ ಬಹುಗುಣಂ ನನು ಪಾಣ್ಡವಾನಾಮ್ ॥೧೯.೨೪॥

ನನ್ನಕಡೆಯವರೇ ಆದ ಕೆಲಜನ ಬಚ್ಚಿಟ್ಟುಕೊಂಡು ತಮ್ಮತನ ,

ಪರದೇಶದವರಂತೆ ನಟಿಸಿ ಮಾಡಲು ಆ ದೇಶದ ಗುಣಗಾನ ,

ಪಾಂಡವರಲ್ಲಿ ಹುಟ್ಟಿಸಿದೆ ಅಲ್ಲಿಗೆ ಹೋಗಬೇಕೆಂಬ ಅಭಿಮಾನ .

 

ಇತ್ಯುಕ್ತವತ್ಯಥ ಸುತೇ ಸ ತಥೇತ್ಯುವಾಚ ಪ್ರಾಪ್ತೇಷು ಪಾಣ್ಡುತನಯೇಷು ತಥೈವ ಚೋಚೇ ।

ಜ್ಞಾತ್ವೈವ ತೇsಪಿ ನೃಪತೇರ್ಹೃದಯಂ ಸಮಸ್ತಂ ಜಗ್ಮುಃ ಪಿತೇತಿ ಪೃಥಯಾ ಸಹ ನೀತಿಹೇತೋಃ ॥೧೯.೨೫॥

ಮಗ ದುರ್ಯೋಧನನ ಎಲ್ಲಾ ಪಿತೂರಿಗೆ ಒಪ್ಪಿದ ತಂದೆ ಧೃತರಾಷ್ಟ್ರ ,

ಪಾಂಡವರಿಗೆ ಹೇಳುತ್ತಾನೆ ಹೋಗಿ ಸೇರಲು ವಾರಣಾವತ ರಾಷ್ಟ್ರ .

ಪಾಂಡವರು ಅನುಸರಿಸಿ ಪಿತೃವಾಕ್ಯ ಪರಿಪಾಲನಾ ನೀತಿ ,

ಕುಂತಿಯೊಡನೆ ವಾರಣಾವತಕ್ಕೆ ಹೊರಡಿಸಿದ ಆ ರೀತಿ .

[ದೊಡ್ಡಪ್ಪನ ಮಾತನ್ನು ಉಲ್ಲಂಘಿಸಿದರೆ ಮುಂದೆ ಅಪಕೀರ್ತಿ ಬರುತ್ತದೆ ಮತ್ತು ಜನರೂ ಅದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ. ಅದು ಆಗಬಾರದು ಎಂದು ಪಾಂಡವರು ವಾರಣಾವತಕ್ಕೆ ತೆರಳಿದರು].

 

ಭೀಮಸ್ತದಾ ಹ ಭವಿತಾsತ್ರ ಹಿ ಭೈಕ್ಷಚಾರ ಇತ್ಯೇವ ಸಮ್ಯಗನುವಿದ್ಯ ನಿಜಂ ನ ಕರ್ಮ್ಮ ।

ತ್ಯಾಜ್ಯಂ ತ್ವಿತಿ ಪ್ರತಿಜಗಾದ ನಿಜಾಗ್ರಜಾಯ ಯಾಮೋ ವಯಂ ನತು ಗೃಹಾತ್ ಸ ಹಿ ನ ಸ್ವಧರ್ಮ್ಮಃ ॥೧೯.೨೬॥

ಆಗ ಭೀಮನೆಂದ-ನಾವಲ್ಲಿಗೆ ಹೋದರೆ ಬೇಡಬೇಕಾದೀತು ಭಿಕ್ಷೆ ,

ಆದರೆ ನಾವು ಇರುವುದು ರಾಜ್ಯವಾಳುವಂಥ ಕ್ಷತ್ರಿಯರ ಕಕ್ಷೆ .

ರಾಜ್ಯಪಾಲನೆ ನಮ್ಮ ಕ್ಷತ್ರಿಯ ಧರ್ಮ,

ಭಿಕ್ಷಾಟನೆ ಅಲ್ಲವೆಂದರುಹಿದ ಮರ್ಮ.

 

ನಿಷ್ಕಾಳಯನ್ತಿ ಯದಿ ನೋ ನಿಜಧರ್ಮ್ಮಸಂಸ್ಥಾನ್ ಯೋತ್ಸ್ಯಾಮಹೇsತ್ರ ನಹಿ ದಸ್ಯುವಧೋsಪ್ಯಧರ್ಮ್ಮಃ ।

ಇತ್ಯೂಚಿವಾಂಸಮಮುಮಾಹ ಚ ಧರ್ಮ್ಮಸೂನುಃ ಕೀರ್ತ್ತಿರ್ವಿನಶ್ಯತಿ ಹಿ ನೋ ಗುರುಭಿರ್ವಿರೋಧೇ ॥೧೯.೨೭॥

ಒಂದುವೇಳೆ ಅವರಲ್ಲಿದ್ದರೆ ನಮ್ಮನ್ನು ದಬ್ಬುವ ಮತಿ,

ಕಳ್ಳರ ವಧೆ ತಪ್ಪಲ್ಲ-ಅನುಸರಿಸೋಣ ಯುದ್ಧದ ನೀತಿ .

ಭೀಮನ ಮಾತನೆಲ್ಲ ಕೇಳಿಸಿಕೊಂಡು ನುಡಿದ ಅಣ್ಣ ಯುಧಿಷ್ಠಿರ,

ಬೇಡ ಗುರುಹಿರಿಯರಲಿ ವಿರೋಧ ಹೊರಡುವುದು ಅನಿವಾರ್ಯ.

No comments:

Post a Comment

ಗೋ-ಕುಲ Go-Kula