Wednesday 11 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 143 - 146

ಅಥೋ ನಿಬದ್ಧ್ಯಾsಶು ಹರೀನ್ ಸಲಕ್ಷ್ಮಣಾನ್ ಜಗಾಮ ರಕ್ಷಃ ಸ್ವಪಿತುಃ ಸಕಾಶಮ್ ।
ನನನ್ದ ಚಾಸೌ ಪಿಶಿತಾಶನೇಶ್ವರಃ ಶಶಂಸ ಪುತ್ರಂ ಚ ಕೃತಾತ್ಮಕಾರ್ಯ್ಯಮ್ ॥೮.೧೪೩॥

ಇಂದ್ರಜಿತು ಕಪಿಗಳನ್ನು ಲಕ್ಷ್ಮಣನನ್ನು ಬಂಧಿಸಿದ,
ಬಳಿಕ ತನ್ನ ತಂದೆ ರಾವಣನ ಬಳಿಗೆ ತೆರಳಿದ.
ಮಾಂಸ ತಿನ್ನುವವರ ಒಡೆಯ ಸಂತುಷ್ಟನಾದ,
ರಾವಣ ಕಾರ್ಯ ಸಾಧಿಸಿದ ಮಗನ ಹೊಗಳಿದ.

ಸ ಪಕ್ಷಿರಾಜೋsಥ ಹರೇರ್ನ್ನಿದೇಶಂ ಸ್ಮರಂಸ್ತ್ವರಾವಾನಿಹ ಚಾsಜಗಾಮ ।
ತತ್ಪಕ್ಷವಾತಸ್ಪರ್ಶೇನ ಕೇವಲಂ ವಿನಷ್ಟ ಏಷಾಂ ಸ ಉರಙ್ಗಬನ್ಧಃ ॥೮.೧೪೪॥

ಶ್ರೀಹರಿಯ ಆದೇಶವನ್ನು ನೆನೆದು ತ್ವರೆಯಿಂದ ಗರುಡನ ಆಗಮನ,
ಅವನ ರೆಕ್ಕೆಯ ಗಾಳಿ ಸ್ಪರ್ಶಮಾತ್ರದಿಂದ ನಾಗಪಾಶದ ವಿಮೋಚನ.

ಸ ರಾಮಮಾನಮ್ಯ ಪರಾತ್ಮದೈವತಂ ಯಯೌ ಸುಮಾಲ್ಯಾಭರಣಾನುಲೇಪನಃ ।
ಕಪಿಪ್ರವೀರಾಶ್ಚ ತರೂಞ್ಛೆಲಾಶ್ಚ ಪ್ರಗೃಹ್ಯ ನೇದುರ್ಬಲಿನಃ ಪ್ರಹೃಷ್ಟಾಃ ॥೮.೧೪೫॥

ಮಾಲೆ, ಆಭರಣ, ಗಂಧಲೇಪನಯುಕ್ತನಾದ ಗರುಡ,
ತನ್ನ ಪರದೇವತೆಯಾದ ಶ್ರೀರಾಮನ ನಮಿಸಿ ನಡೆದ.
ಬಲತುಂಬಿಕೊಂಡು ಹರ್ಷಿತವಾದ ಕಪಿಸೇನೆ,
ಮಾಡಿದರು ಮರ ಬಂಡೆಗಳ ಹಿಡಿದು ಘರ್ಜನೆ.

ಶ್ರುತ್ವಾ ನಿನಾದಂ ಪ್ಲವಗೇಶ್ವರಾಣಾಂ ಪುನಃ ಸಪುತ್ರೋsತ್ರಸದತ್ರ ರಾವಣಃ ।
ಬನ್ಧಾದಮುಷ್ಮಾತ್ ಪ್ರತಿನಿಸ್ಸೃತಾಸ್ತೇ ಕಿಮತ್ರ ಕಾರ್ಯ್ಯಂ ತ್ವಿತಿ ಚಿನ್ತಯಾನಃ ॥೮.೧೪೬॥

ಕಪಿಗಳ ಗರ್ಜನೆಯ ಕೇಳಿದ ಕಾರಣ,
ಭಯಗೊಂಡರು ಇಂದ್ರಜಿತು ರಾವಣ.
ಆಯಿತು ಉಪಾಯಕಾಣದ ವಾತಾವಾರಣ.


No comments:

Post a Comment

ಗೋ-ಕುಲ Go-Kula