Sunday 22 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 197 - 201

ತದಾ ದಶಾಸ್ಯೋsನ್ತಕದಣ್ಡಕಲ್ಪಾಂ ಮಯಾಯ ದತ್ತಾಂ ಕಮಲೋದ್ಭವೇನ ।
ಮಯಾದ್ ಗೃಹೀತಾಂ ಚ ವಿವಾಹಕಾಲೇ ಪ್ರಗೃಹ್ಯ ಶಕ್ತಿಂ ವಿಸಸರ್ಜ್ಜ 
ಲಕ್ಷ್ಮಣೇ ॥೮.೧೯೭॥

ಬ್ರಹ್ಮ ಮಯಾಸುರಗಿತ್ತಿದ್ದ ಯಮದಂಡದಂಥಾ ಶಕ್ತ್ಯಾಯುಧ,
ಮಯಪುತ್ರಿಯೊಂದಿಗಿನ ಮದುವೆಯಲ್ಲಿ ರಾವಣ ಅದ ಪಡೆದಿದ್ದ.
ಮಾವ ಮಗಳೊಂದಿಗೆ ಅಳಿಯ ರಾವಣಗೆ ಉಡುಗೊರೆಯಾಗಿತ್ತಿದ್ದ,
ಅದೇ ಶಕ್ತ್ಯಾಯುಧವ ರಾವಣ ಲಕ್ಷ್ಮಣನ ಮೇಲೆ ಪ್ರಯೋಗಿಸಿದ.

 ತಯಾ ಸ ವೀರಃ ಸುವಿದಾರಿತೋರಾಃ ಪಪಾತ ಭೂಮೌ ಸುಭೃಶಂ ವಿಮೂರ್ಚ್ಛಿತಃ ।
ಮರುತ್ಸುತಃ ಶೈಲಮತಿಪ್ರಮಾಣಂ ಚಿಕ್ಷೇಪ ರಕ್ಷಃಪತಿವಕ್ಷಸಿ ದ್ರುತಮ್ ॥೮.೧೯೮॥

ಶಕ್ತ್ಯಾಯುಧದ ಹೊಡೆತದಿಂದ ಎದೆಯೊಡದ ಲಕ್ಷ್ಮಣ,
ಬಹಳ  ಮೂರ್ಛಿತನಾಗಿ ಧರಾಶಾಯಿಯಾದ ಆ ಕ್ಷಣ.
ಹನುಮನೆಸೆದ ಹಿರಿಬೆಟ್ಟ ಸೇರಿತು ರಾವಣನೆದೆಯ ತಾಣ.

ತೇನಾತಿಗಾಢಂ ವ್ಯಥಿತೋ ದಶಾನನೋ ಮುಖೈರ್ವಮನ್ ಶೋಣಿತಪೂರಮಾಶು ।
ತದನ್ತರೇಣ ಪ್ರತಿಗೃಹ್ಯ ಲಕ್ಷ್ಮಣಂ ಜಗಾಮ ಶಕ್ತ್ಯಾ ಸಹ ರಾಮಸನ್ನಿಧಿಮ್ ॥೮.೧೯೯॥

ರಾವಣನ ಮುಖಗಳಿಂದ ರಕ್ತಪ್ರವಾಹ,
ರಕ್ತಕಾರಿಕೊಳ್ಳುತ್ತಾ ರಾವಣನುಂಡ ನೋವ.
ಅದೇ ವೇಳೆಗೆ ವೀರ ಹನುಮಂತ,
ಲಕ್ಷ್ಮಣನನ್ನು ಶಕ್ತ್ಯಾಯುಧ ಸಮೇತ,
ಹೊತ್ತು ನಡೆದ ಶ್ರೀರಾಮಸನ್ನಿಧಿಯತ್ತ.

ಸುಮುದ್ಬಬರ್ಹಾಥ ಚ ತಾಂ ಸ ರಾಘವೋ ದಿದೇಶ ಚ ಪ್ರಾಣವರಾತ್ಮಜಂ ಪುನಃ ।
ಪ್ರಭುಃ ಸಮಾನೇತುಮಥೋ ವರೌಷಧೀಃ ಸ ಚಾsನಿನಾಯಾsಶು ಗಿರಿಂ 
ಪುನಸ್ತಮ್ ॥೮.೨೦೦॥

ಶಕ್ತ್ಯಾಯುಧವ ಕಿತ್ತಿಹಾಕಿದ ಪ್ರಭು ಶ್ರೀರಾಮ,
ಸಂಜೀವಿನಿಗಾಗಿ ಹನುಮನ ಕಳುಹಿದ ನೇಮ.
ಔಷಧಿಗಾಗಿ ಕಳುಹಿಸಲ್ಪಟ್ಟ ವೀರ ಹನುಮ,
ಕ್ಷಣದಲ್ಲಿ ಬೆಟ್ಟ ತಂದಿಟ್ಟನಾ ಶಕ್ತಿಯುಕ್ತಿಧಾಮ.

ತದ್ಗನ್ಧಮಾತ್ರೇಣ ಸಮುತ್ಥಿತೋsಸೌ ಸೌಮಿತ್ರಿರಾತ್ತೋರುಬಲಶ್ಚ ಪೂರ್ವವತ್ ।
ಶಶಂಸ ಚಾsಶ್ಲಿಷ್ಯ ಮರುತ್ಸುತಂ ಪ್ರಭುಃ ಸ ರಾಘವೋsಗಣ್ಯಗುಣಾರ್ಣ್ಣವಃ 
ಸ್ಮಯನ್ ॥೮.೨೦೧॥

ಲಕ್ಷ್ಮಣನ ಎಚ್ಚರಿಸಿತು ಆ ಬೆಟ್ಟದ ಪರಿಮಳ,
ಮುಂಚಿನಂತೆ ಲಕ್ಷ್ಮಣ ಪಡೆದ ಮಹಾಬಲ.
ಅಸಂಖ್ಯ ಗುಣಸಾಗರನಾದ ಪ್ರಭು ಶ್ರೀರಘುನಂದನ,
ನಗುತ್ತಾ ಕೊಂಡಾಡುತ್ತಾ ಹನುಮಂತನಿಗಿತ್ತ ಆಲಿಂಗನ.

No comments:

Post a Comment

ಗೋ-ಕುಲ Go-Kula