Thursday 12 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 147 - 151

ಪುನಶ್ಚ ಹುತ್ವಾ ಸ ಹುತಾಶಮೇವ ರಥಂ ಸಮಾರು̐ಹ್ಯ ಯಯಾವದರ್ಶನಮ್
ವವರ್ಷ ಚಾಸ್ತ್ರಾಣಿ ಮಹಾನ್ತ್ಯಜಸ್ರಂ ವರಾದುಮೇಶಸ್ಯ ತಥಾsಬ್ಜಜಸ್ಯ ॥೮.೧೪೭॥

ಮತ್ತೆ ಅಗ್ನಿಯಲ್ಲಿ ಅಭಿಚಾರಹೋಮ ಮಾಡಿದ ಮೇಘನಾದ,
ಹೋಮಬಲದ ದಿವ್ಯ ರಥವನ್ನೇರಿ ಇಂದ್ರಜಿತು ಅದೃಶ್ಯನಾದ.
ಶಿವಬ್ರಹ್ಮವರಬಲದಿಂದ  ಸತತ ಮಹಾಸ್ತ್ರಗಳ ಮಳೆಗರೆದ.

ಪುನಶ್ಚ ತಸ್ಯಾಸ್ತ್ರನಿಪೀಡಿತಾಸ್ತೇ ನಿಪೇತುರುರ್ವ್ಯಾಂ ಕಪಯಃ ಸಲಕ್ಷ್ಮಣಾಃ ।
ಸ್ಪೃಶನ್ತಿ ನಾಸ್ತ್ರಾಣಿ ದುರನ್ತಶಕ್ತಿಂ ತನುಂ ಸಮೀರಸ್ಯ ಹಿ ಕಾನಿಚಿತ್ ಕ್ವಚಿತ್ ॥೮.೧೪೮॥

ಇಂದ್ರಜಿತ್ತಿನ ಅಸ್ತ್ರದಿಂದ ಪೀಡಿತರಾದ ಕಪಿಗಳೂ ಲಕ್ಷ್ಮಣನೂ ನೆಲಕ್ಕೊರಗಿದ ನೋಟ,
ಶಕ್ತಿಭಂಡಾರ ಹನುಮಂತನ ವಜ್ರ ಶರೀರದೆದುರು ನಡೆಯಲಿಲ್ಲ ಯಾವ ಅಸ್ತ್ರಗಳ ಆಟ.

ವಿಜ್ಞಾತುಕಾಮಃ ಪುರಿ ಸಮ್ಪ್ರವೃತ್ತಿಂ ವಿಭೀಷಣಃ ಪೂರ್ವಗತಸ್ತದಾssಗಾತ್  ।
ದದರ್ಶ ಸರ್ವಾನ್ ಪತಿತಾನ್ ಸ ವಾನರಾನ್ ಮರುತ್ಸುತಂ 
ತ್ವೇಕಮನಾಕುಲಂ ಚ ॥೮.೧೪೯॥

ಲಂಕೆಯಲ್ಲಿ ನಡೆಯುವ ವಿದ್ಯಮಾನ,
ತಿಳಿಯಲಲ್ಲಿಗೆ ಹೋಗಿದ್ದ ವಿಭೀಷಣ.
ಹಾಗಾಗಿ ಅವನಿಗಾಗಲಿಲ್ಲ ಬಂಧನದ ಕಾಟ,
ಬಂದವನಿಗಾಯಿತು ಯುದ್ಧರಂಗದ ನೋಟ.
ಕಪಿಗಳೆಲ್ಲಾ ಕೆಳಗೆ ಬಿದ್ದಿರುವುದನ್ನು ಕಂಡ,
ಹನುಮಗೇನೂ ಆಗದಿರುವದನ್ನು ಮನಗಂಡ.

ಸ ತಂ ಸಮಾದಾಯ ಯಯೌ ವಿಧಾತೃಜಂ ವಿಮೂರ್ಚ್ಛಿತಂ ಚೋದಕಸೇಕತಸ್ತಮ್ ।
ಆಶ್ವಾಸ್ಯ ಕಿಂ ಜೀವಸಿ ಹೀತ್ಯುವಾಚ ತಥೇತಿ ಸ ಪ್ರಾಹ ಚ ಮನ್ದವಾಕ್ಯಃ ॥೮.೧೫೦॥

ವಿಭೀಷಣ ನಡೆದ ಹನುಮಂತನೊಂದಿಗೆ ಮೂರ್ಛಿತನಾದ ಜಾಂಬವಂತನತ್ತ,
ನೀರ ಸಿಂಪಡಿಸಿ ಕೇಳಿದ 'ಬದುಕಿದ್ದೀಯಾ'- ಕ್ಷೀಣದನಿಯಲಿ ಹೌದೆಂದ ಜಾಂಬವಂತ.

ಊಚೇ ಪುನರ್ಜ್ಜೀವತಿ ಕಿಂ ಹನೂಮಾನ್ ಜೀವಾಃ ಸ್ಮ ಸರ್ವೇsಪಿ ಹಿ ಜೀವಮಾನೇ ।
ತಸ್ಮಿನ್ ಹತೇ ನಿಹತಾಶ್ಚೈವ  ಸರ್ವ ಇತೀರಿತೇsಸ್ಮೀತ್ಯವದತ್ ಸ ಮಾರುತಿಃ ॥೮.೧೫೧॥

ಜಾಂಬವಂತ ಕೇಳಿದ ಹನುಮಂತ ಬದುಕಿರುವ ತಾನೇ,
ಅವನಿದ್ದರೆ ಮಾತ್ರ ಮೀಟುವುದು ನಮ್ಮ ಉಸಿರ ವೀಣೆ.
ಅವನಾದರೆ ಹತ ; ನಾವೆಲ್ಲರಿದ್ದರೂ ಮೃತ,
ಹನುಮ ನುಡಿದ 'ನಾನಿದ್ದೇನೆ' ಉಸಿರಿನ ತಾತ.


No comments:

Post a Comment

ಗೋ-ಕುಲ Go-Kula