Tuesday 31 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 244 - 248

ತ್ವಮೇವ ಸಾಕ್ಷಾತ್ ಪರಮಸ್ವತನ್ತ್ರಸ್ತ್ವಮೇವ ಸಾಕ್ಷಾದಖಿಲೋರುಶಕ್ತಿಃ ।
ತ್ವಮೇವ ಚಾಗಣ್ಯಗುಣಾರ್ಣ್ಣವಃ ಸದಾ 
ರಮಾವಿರಿಞ್ಚಾದಿಭಿರಪ್ಯಶೇಷೈಃ   ॥೮.೨೪೪॥
ಸಮೇತ್ಯ ಸರ್ವೇsಪಿ ಸದಾ ವದನ್ತೋsಪ್ಯನನ್ತಕಾಲಾಚ್ಚ ನವೈ ಸಮಾಪ್ನುಯುಃ ।
ಗುಣಾಂಸ್ತ್ವದೀಯಾನ್ ಪರಿಪೂರ್ಣ್ಣಸೌಖ್ಯಜ್ಞಾನಾತ್ಮಕಸ್ತ್ವಂ ಹಿ 
ಸದಾsತಿಶುದ್ಧಃ  ॥೮.೨೪೫॥

ನೀನೇ ಸರ್ವೋತ್ತಮ ಸ್ವತಂತ್ರ ಪೂರ್ಣಶಕ್ತಿಯ ಮೂಲಆಗರ,
ಲಕ್ಷ್ಮೀ ಬ್ರಹ್ಮಾದಿಗಳೆಲ್ಲರಿಂದಲೂ ಎಣಿಸಲಾಗದ ಗುಣಸಾಗರ.
ನಿನ್ನ ಶಕ್ತಿ ಹೊರಗಿಂದ ಇನ್ನೊಬ್ಬರಿಂದ ಬರುವುದಲ್ಲ,
ನೀನೇ ಶಕ್ತಿ ಮತ್ತು ಸಕಲ ಗುಣರಾಶಿಯ ಮೂಲ.
ಎಲ್ಲಾ ಮಾಡುತ್ತಿದ್ದರೂ ನಿನ್ನ ಗುಣಗಳ ವರ್ಣನೆ,
ಯಾರೂ ಎಂದೂ ಕಾಣಲಾರರದಕೊಂದು ಕೊನೆ.
ನೀನು ಪರಿಪೂರ್ಣ ಸುಖ ಜ್ಞಾನ ಸ್ವರೂಪ,
ಸದಾ ಶುದ್ಧವಾದ ಆರದ ಜ್ಞಾನಾನಂದ ದೀಪ.

ಯಸ್ತೇ ಕಥಾಸೇವಕ ಏವ ಸರ್ವದಾ ಸದಾರತಿಸ್ತ್ವಯ್ಯಚಲೈಕಭಕ್ತಿಃ ।
ಸ ಜೀವಮಾನೋ ನ ಪರಃ ಕಥಞ್ಚಿತ್ ತಜ್ಜೀವನಂ 
ಮೇsಸ್ತ್ವಧಿಕಂ ಸಮಸ್ತಾತ್  ॥೮.೨೪೬॥

ಯಾರು ನಿನ್ನ ಶಾಸ್ತ್ರ ಶ್ರವಣಾದಿಗಳಲ್ಲಿ ನಿರತ,
ಉತ್ತಮ ಭಕ್ತನಾಗಿ ನಿನ್ನೊಡನೆ ವಿಹಾರದಿ ರತ.
ಅದೇ ನಿಜವಾದ ಜೀವಂತ ಬಾಳು,
ಬೇರೆ ಇನ್ಯಾವುದೂ ಬಾಳಲ್ಲ ಕೇಳು.
ಶಿರದ ಮೇಲಿರಲಿ ನಿನ್ನನುಗ್ರಹದ ಧೂಳು.

ಪ್ರವರ್ದ್ಧತಾಂ ಭಕ್ತಿರಲಂ ಕ್ಷಣೇಕ್ಷಣೇ ತ್ವಯೀಶ ಮೇ ಹ್ರಾಸವಿವರ್ಜ್ಜಿತಾ ಸದಾ ।
ಅನುಗ್ರಹಸ್ತೇ ಮಯಿ ಚೈವಮೇವ ನಿರೌಪಧೌ ತೌ ಮಮ ಸರ್ವಕಾಮಃ   ॥೮.೨೪೭॥

ಪ್ರಭೂ ಎಂದೂ ಕುಂದದಿರಲಿ ನಿನ್ನಲ್ಲಿ ಎನ್ನ ಭಕ್ತಿ,
ಕ್ಷಣ ಕ್ಷಣ ಬೆಳೆಯುತ್ತಾ ಆಗುತ್ತಿರಲದರ ಅಭಿವ್ಯಕ್ತಿ.
ನಿನ್ನಲ್ಲೆನ್ನ ಭಕ್ತಿ ,ನನ್ನಲ್ಲಿ ನಿನ್ನನುಗ್ರಹ ಎರಡು ಬೇಕು,
ನಿರುಪಾಧಿಕವಾದ ಈ ಎರಡು ಪುರುಷಾರ್ಥ ಸಾಕು.

ಇತೀರಿತಸ್ತಸ್ಯ ದದೌ ಸ ತದ್ ದ್ವಯಂ ಪದಂ ವಿಧಾತುಃ ಸಕಲೈಶ್ಚ ಶೋಭನಮ್ ।
ಸಮಾಶ್ಲಿಷಚ್ಚೈನಮಥಾsರ್ದ್ರಯಾ ಧಿಯಾ ಯಥೋಚಿತಂ 
ಸರ್ವಜನಾನಪೂಜಯತ್  ॥೮.೨೪೮॥

ರಾಮ ಕೇಳಿದ ಹನುಮಂತನ ಕೋರಿಕೆ,
ಅನುಗ್ರಹಿಸಿದ ಮಗನ ಎರಡೂ ಬೇಡಿಕೆ.
ಬ್ರಹ್ಮಪದವಿ ಜೊತೆಗಿತ್ತ ಸಕಲ ಜೀವರ ಪುಣ್ಯ ಫಲದ ಭಾಗ,
ಯಥೋಚಿತ ಎಲ್ಲರನ್ನಾದರಿಸಿ ಹನುಮಗಿತ್ತ ಆಲಿಂಗನದ ಯೋಗ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಅಷ್ಟಮೋsಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯಾನುವಾದ,
ಶ್ರೀರಾಮಚರಿತೆಯೆಂಬ ಎಂಟನೇ ಅಧ್ಯಾಯ,
ಹದಿನೆಂಟರ ಬಂಟಗರ್ಪಿಸಿದ ಧನ್ಯತಾ ಭಾವ.

No comments:

Post a Comment

ಗೋ-ಕುಲ Go-Kula