Saturday 14 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 159 - 166

ಸ ದೇವಗನ್ಧರ್ವಮಹರ್ಷಿಸತ್ತಮೈರಭಿಷ್ಟುತೋ ರಾಮಕರೋಪಗೂಹಿತಃ ।
 ಪುನರ್ಗ್ಗಿರಿಂ ತಂ ಶತಯೋಜನೋಚ್ಛ್ರಿತಂ ನ್ಯಪಾತಯತ್ ಸಂಸ್ಥಿತ ಏವ 
ತತ್ರ ಚ ॥೮.೧೫೯॥

ದೇವತೆಗಳು, ಗಂಧರ್ವರು, ಮಹರ್ಷಿಗಳಿಂದ ಹನುಮನ ಗುಣಗಾನ,
ಶ್ರೀರಾಮಚಂದ್ರ ಹನುಮಗೆ ಕೊಟ್ಟ ಅನುಗ್ರಹದ ಅದ್ಭುತ ಆಲಿಂಗನ.
ಹನುಮಂತನಿಂದ ಎಸೆಯಲ್ಪಟ್ಟ ಆ ಬೆಟ್ಟ ಸೇರಿತು ಅದರ ಸ್ವಸ್ಥಾನ.

ಸ ಪೂರ್ವವನ್ಮಾರುತಿವೇಗಚೋದಿತೋ ನಿರನ್ತರಂ ಶ್ಲಿಷ್ಟತರೋsತ್ರ ಚಾಭವತ್ ।
ಪುನಶ್ಚ ಸರ್ವೇ ತರುಶೈಲಹಸ್ತಾ ರಣಾಯ ಚೋತ್ತಸ್ಥುರಲಂ ನದನ್ತಃ ॥೮.೧೬೦॥

ಪುನಶ್ಚ ತಾನ್ ಪ್ರೇಕ್ಷ್ಯ ಸಮುತ್ಥಿತಾನ್ ಕಪೀನ್ ಭಯಂ ಮಹಚ್ಛಕ್ರಜಿತಂ ವಿವೇಶ ।
ಸ ಪೂರ್ವವದ್ಧವ್ಯವಹೇ ಸಮರ್ಚ್ಚ್ಯ ಶಿವಂ ತಥಾsದರ್ಶನಮೇವ ಜಗ್ಮಿವಾನ್ ॥೮.೧೬೧॥

ಮಾರುತಿ ಉಗ್ರವೇಗದಿಂದ ಎಸೆದ ಆ ಬೆಟ್ಟ ಸೇರಿತದರ ಸ್ವಸ್ಥಾನ,
ಮತ್ತೆ ಮೇಲೆದ್ದ ಕಪಿಗಳ ಕಂಡ ಇಂದ್ರಜಿತುಗಾಯಿತು ಭಯದ ಕಂಪನ.
ಪೂರೈಸಿ ಅಗ್ನಿಯಲ್ಲಿ ಶಿವಪೂಜೆ ಯುದ್ಧಕ್ಕಾಗಿ ಅವನಾದ ಅಂತರ್ಧಾನ.




ವರಾಶ್ರಯೇಣಾಜಗಿರೀಶಯೋಸ್ತಥಾ ಪುನರ್ಮ್ಮಹಾಸ್ತ್ರೈಃ ಸ ಬಬನ್ಧ ತಾನ್ ಕಪೀನ್ ।
ಅಥಾsಹ ರಾಮಸ್ಯ ಮನೋsನುಸಾರತಃ ಪುರಾsಸ್ತ್ರಮೇವಾನುಸರನ್ ಸ ಲಕ್ಷ್ಮಣಃ ॥೮.೧೬೨॥

ಪಿತಾಮಹಾಸ್ತ್ರೇಣ ನಿಹನ್ಮಿ ದುರ್ಮ್ಮತಿಂ ತವಾsಜ್ಞಯಾ ಶಕ್ರಜಿತಂ ಸಬಾನ್ಧವಮ್ ।
ಇತೀರಿತೇ ತೇನ ಸ ಚಾsಹ ರಾಘವೋ ಭಯಾದದೃಶ್ಯೇ ನ ವಿಮೋಕ್ತುಮರ್ಹಸಿ ॥೮.೧೬೩॥

ಬ್ರಹ್ಮ-ರುದ್ರರ ವರಬಲದಿಂದ ಇಂದ್ರಜಿತು ಮಾಡಿದ ಮತ್ತೆ ಕಪಿಗಳ ಬಂಧನ,
ರಾಮನ ಕುರಿತು ಹೇಳುತ್ತಾನೆ ಅವನಿಚ್ಛೆಯಂತೆ ವಿಶೇಷಾಸ್ತ್ರ ಬಳಸದ ಲಕ್ಷ್ಮಣ.
ನೀನೊಪ್ಪಿಗೆ ಕೊಟ್ಟರೆ ಬ್ರಹ್ಮಾಸ್ತ್ರದಿ ಮಾಡುವೆ ಇಂದ್ರಜಿತುವಿನ ಸಂಹಾರ,
ರಾಮ ನುಡಿದ-ಕಳ್ಳನಂತವಿತು ಕಾದುತ್ತಿರುವವಗೆ ಬ್ರಹ್ಮಾಸ್ತ್ರ ಬಳಕೆ ಅಪಚಾರ.

ನ ಸೋಢುಮೀಶೋsಸಿ ಯದಿ ತ್ವಮೇತದಸ್ತ್ರಂ ತದಾsಹಂ ಶರಮಾತ್ರಕೇಣ ।
ಅದೃಶ್ಯಮಪ್ಯಾಶು ನಿಹನ್ಮಿ ಸನ್ತಂ ರಸಾತಳೇsಥಾಪಿ ಹಿ ಸತ್ಯಲೋಕೇ ॥೮.೧೬೪॥

ಒಂದು ವೇಳೆ ನಿನಗೆ ಆಗಿದ್ದರೆ ಆ ಕಾರ್ಯ ಅಸಾಧ್ಯ,
ಸಾಮಾನ್ಯ ಬಾಣದಿ ಅವನೆಲ್ಲಡಗಿದ್ದರೂ ನಾ ಮಾಡುವೆನವನ ವಧ.

ಇತಿ ಸ್ಮ ವೀನ್ದ್ರಸ್ಯ ಹನೂಮತಶ್ಚ ಬಲಪ್ರಕಾಶಾಯ ಪುರಾ ಪ್ರಭುಃ ಸ್ವಯಮ್ ।
ಸಮ್ಮಾನಯಿತ್ವಾsಸ್ತ್ರಮಮುಷ್ಯ ರಾಮೋ ದುರನ್ತಶಕ್ತಿಃ ಶರಮಾದದೇsಥ ॥೮.೧೬೫॥

ಅಮಿತಶಕ್ತಿಯ ಶ್ರೀರಾಮಚಂದ್ರನಾಗಿದ್ದರೂ ಸರ್ವಸಮರ್ಥ,
ಗರುಡ ಹನುಮರ ಬಲಪ್ರಕಾಶಕ್ಕೆ ಅನುವು ಕೊಟ್ಟಿದ್ದನಾತ.
ಅದಕೆಂದೇ ಇಂದ್ರಜಿತನ ಅಸ್ತ್ರಕ್ಕೆ ತೋರಿದ್ದ ಕೊಂಚ ಗೌರವ,
ಸಮಯಕ್ಕನುಗುಣವಾಗಿ ಬಾಣವೆತ್ತಿಕೊಂಡ ಸರ್ವಜ್ಞ ರಾಘವ.

ಅನೇನ ದೃಷ್ಟೋsಹಮಿತಿ ಸ್ಮ ದುಷ್ಟೋ ವಿಜ್ಞಾಯ ಬಾಹ್ವೋರ್ಬಲಮಸ್ಯ ಚೋಗ್ರಮ್ ।
ವಿನಿಶ್ಚಯಂ ದೇವತಮಸ್ಯ ಪಶ್ಯನ್ ಪ್ರದುದ್ರುವೇ ಪ್ರಾಣಪರೀಪ್ಸುರಾಶು ॥೮.೧೬೬ ॥

ಇಂದ್ರಜಿತುವಿಗನಿಸಿತು ರಾಮ ತನ್ನ ನೋಡಿದ,
ದುಷ್ಟರಕ್ಕಸ ರಾಮನ ಉಗ್ರಬಾಹುಬಲವ ತಿಳಿದ.
ರಾಮನಿಚ್ಛೆ ಕಂಡು ಪ್ರಾಣಭಯದಿಂದ ತಾ ಓಡಿದ.


No comments:

Post a Comment

ಗೋ-ಕುಲ Go-Kula