Wednesday 27 January 2016

Bhava Guccha 09

ಭಾವ ಗುಚ್ಛ by "ತ್ರಿವೇಣಿ ತನಯ"

ದಾಸ್ಯ -ಲಾಸ್ಯ

ನೈಜ ಭಕ್ತಿ ವೈರಾಗ್ಯಗಳಿರುವಲ್ಲಿ ಐಶ್ವರ್ಯದ ದಾಸ್ಯ,
ಲಕ್ಷ್ಮಿಪತಿ ನಿಜದಾಸನಾದವನಿಗೆ ಎಲ್ಲ ತಿಳಿವಿನ ಲಾಸ್ಯ,
ಸಾಮಾನ್ಯ ಅಲ್ಲ ಅಂಥವರು ಬಹಳ ಅಪರೂಪ,
ಕತ್ತಲಾಗಸದಲ್ಲಿ ಹೊಳೆವ ಜ್ಯೋತಿ ಸ್ವರೂಪ.


ಕಣ್ಮನ

ಹರಿನಾಮದರಗಿಣಿಯು ಹಾರುತಿದೆ ಜಗದಿ,
ದಾಸರು ಅನುಭವಿಸಿ ಕೊಟ್ಟ ಪಂಕ್ತಿಯದು ಮುದದಿ,
ನೋಡುವ ಕಣ್ಣಿರಲಿ ಮನಸದು ತಿಳಿಯಿರಲಿ,
ಈ ಪರಿಯ ಬಾಳಿನಲಿ ಸುಳಿಯನವ ಹತ್ತಿರ ಕಲಿ.


ಸ್ವಾತಂತ್ರ್ಯ

ಅನೇಕರ ತ್ಯಾಗ ಬಲಿದಾನಗಳಿಂದ ಬಂದಿದೆ ಸ್ವಾತಂತ್ರ್ಯ,
ಇಂದಾದರೂ ಸ್ಮರಿಸಿ ನಮಿಸೋಣ ಅವರ ಕ್ಷಣಮಾತ್ರ ,
ನಿಜಾರ್ಥದ ಸ್ವಾತಂತ್ರ್ಯವಿರಲಿ ಆಗದಿರಲಿ ಸ್ವೇಚ್ಛಾಚಾರ,
ಹಾಕೋಣ ಬದ್ಧತೆಯಿಂದ ಭಾರತಾಂಬೆಗೆ ಸತ್ಸಂಕಲ್ಪದ ಹಾರ .
ಬೇಡೋಣ ಭವಬಂಧನದಿಂದ ಸ್ವಾತಂತ್ರ್ಯ,
ಸತತ ಪ್ರಯತ್ನದೊಂದಿಗಿರಲಿ ಹರಿನಾಮ ಮಂತ್ರ,
ಬಾಳಾಗಲಿ ಸದಾಚಾರ ಸಮರ್ಪಣೆಗಳ ಯಾತ್ರ,
ರಕ್ಷಿಸಲಿ "ಗೋವಿಂದ"ನಮಗಿತ್ತು ಗುರುಮಂತ್ರ.


ಬಿಂಬ -ಪ್ರತಿಬಿಂಬ

ಬರೆವುದು ಒಳಗಿರುವ ಬಿಂಬ,
ದೇಹವಿದು ಉಪಕರಣ ಕಂಬ,
ಬೇಡ ಸಲ್ಲದ ಒಣ--- ಜಂಬ,
ಬಿಂಬದ ನೆರಳು -ಪ್ರತಿಬಿಂಬ.

2 comments:

  1. Replies
    1. ಗೋವಿಂದ ಮಾಗಲ್ ಅವರೊಳಗಿನ ಭಗವಂತನ ವಿಭೂತಿ....

      Delete

ಗೋ-ಕುಲ Go-Kula