Thursday 25 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 139 - 141

ಏವಮಧ್ಯಾತ್ಮನಿಷ್ಠಂ ಹಿ ಭಾರತಂ ಸರ್ವಮುಚ್ಯತೇ ।
ದುರ್ವಿಜ್ಞೇಯಮತಃ ಸರ್ವೈರ್ಭಾರತಂ ತು ಸುರೈರಪಿ ॥೨.೧೩೯॥

ಸ್ವಯಂ ವ್ಯಾಸೋ ಹಿ ತದ್ ವೇದ ಬ್ರಹ್ಮಾ ವಾ ತತ್ ಪ್ರಸಾದತಃ ।
ತಥಾsಪಿ ವಿಷ್ಣುಪರತಾ ಭಾರತೇ ಸಾರಸಙ್ಗ್ರಹಃ’ ॥೨.೧೪೦॥

ಇತ್ಯಾದಿವ್ಯಾಸವಾಕ್ಯೈಸ್ತು ವಿಷ್ಣೋತ್ಕರ್ಷೋsವಗಮ್ಯತೇ ।
ವಾಯ್ವಾದೀನಾಂ ಕ್ರಮಶ್ಚೈವ  ತದ್ವಾಕ್ಯೈರೇವ ಚಿನ್ತ್ಯತೇ ॥೨.೧೪೧॥

ಇಡೀ ಮಹಾಭಾರತವದು ಅಧ್ಯಾತ್ಮನಿಷ್ಠ ಗ್ರಂಥ.
ಧರ್ಮಾದಿ ಹತ್ತು ಗುಣಗಳುಳ್ಳವರಿಗೆ ಆಗುತ್ತದೆ ಅರ್ಥ.
ಎಲ್ಲಾ ದೇವತೆಗಳೂ ಅದನ್ನ ಪೂರ್ಣ ತಿಳಿಯಲು ಅಸಮರ್ಥ.

ಪೂರ್ಣ ಬಲ್ಲವರೊಬ್ಬರೇ ಅವರು ಸ್ವಯಂ ವೇದವ್ಯಾಸ.
ಅವರನುಗ್ರಹದಿಂದ ತಿಳಿದ ಬ್ರಹ್ಮದೇವ ವ್ಯಾಸರ ದಾಸ.

ಒಟ್ಟಿನಲ್ಲಿ ಮಹಾಭಾರತದ ತಿರುಳು ವಿಷ್ಣು ಸರ್ವೋತ್ತಮತ್ವ.
ಹಾಗೇ ಪ್ರಾಣನ ಹಿರಿಮೆ, ತಾರತಮ್ಯೋಕ್ತ ಜ್ಞಾನದ ತತ್ವ.

ಇವೆಲ್ಲವನ್ನೂ ತಿಳಿಸಿರುವುದು ವೇದವ್ಯಾಸರ ವಾಕ್ಯಗಳ ಸತ್ವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula