Saturday 27 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 153 - 156

ತಥಾ ಯುದಿಷ್ಠಿರೇಣಾಪಿ ಭೀಮಂ ಪ್ರತಿ ಸಮೀರಿತಮ್ ।
ಧರ್ಮಶ್ಚಾರ್ಥಶ್ಚ ಕಾಮಶ್ಚ ಮೋಕ್ಷಶ್ಚೈವ ಯಶೋ ಧ್ರುವಮ್ ।
ತ್ವಯ್ಯಾಯತ್ತಮಿದಂ ಸರ್ವಂ ಸರ್ವಲೋಕಸ್ಯ ಭಾರತ ॥೨.೧೫೩॥

ಹಾಗೇ ಧರ್ಮಜ ಭೀಮಗೆ ಹೇಳಿದ ಮಾತು ಸೆಳೆಯುತ್ತದೆ ಗಮನ,
ಧರ್ಮ ಅರ್ಥ ಕಾಮ ಮೋಕ್ಷ ಕೀರ್ತಿ ಇವೆಲ್ಲಾ ಎಲ್ಲೆಡೆಯೂ ನಿನ್ನಧೀನ.
ನಿನ್ನನುಗ್ರಹದಿಂದ ಇತರರಿಗಾಗುತ್ತದೆ ಅದು ಪ್ರದಾನ.

ವಿರಾಟಪರ್ವಗಂ ಚಾಪಿ ವಚೋ ದುರ್ಯೋಧನಸ್ಯ ಹಿ ।
ವೀರಾಣಾಂ ಶಾಸ್ತ್ರವಿಧುಷಾಂ ಕೃತಿನಾಂ ತತ್ತ್ವನಿರ್ಣಯೇ
ಸತ್ತ್ವೇ ಬಾಹುಬಲೇ ಧೈರ್ಯೇ ಪ್ರಾಣೇ ಶಾರೀರಸಮ್ಭವೇ ॥೨.೧೫೪॥

ಸಾಮ್ಪ್ರತಂ ಮಾನುಷೇ ಲೋಕೇ ಸದೈತ್ಯನರರಾಕ್ಷಸೇ ।
ಚತ್ವಾರಃ ಪ್ರಾಣಿನಾಂ ಶ್ರೇಷ್ಠಾಃ ಸಮ್ಪೂರ್ಣಬಲಪೌರುಷಾಃ ॥೨.೧೫೫॥

ಭೀಮಶ್ಚ ಬಲಭದ್ರಶ್ಚ ಮದ್ರರಾಜಶ್ಚ ವೀರ್ಯವಾನ್ ।
ಚತುರ್ಥಃ ಕೀಚಕಸ್ತೇಷಾಂ ಪಞ್ಚಮಂ ನಾನುಶುಶ್ರುಮಃ ।
ಅನ್ಯೋನ್ಯಾನನ್ತರಬಲಾಃ ಕ್ರಮಾದೇವ ಪ್ರಕೀರ್ತಿತಾಃ ॥೨.೧೫೬॥

ವಿರಾಟಪರ್ವದಲ್ಲಿ ಭೀಮನ ಕುರಿತು ದುರ್ಯೋಧನನ ವಚನ,
ಸಿದ್ಧಪಡಿಸುತ್ತದೆ ಭೀಮಸೇನ ಎಂಥಾ ಬಲವಂತ-ಪ್ರಧಾನ.
ಯುದ್ಧ ಶಾಸ್ತ್ರ ಸಂದಿಗ್ಧದಲ್ಲಿ ನಿರ್ಣಯ ಮಾನಸಿಕ ಸ್ಥೈರ್ಯ,
ಸತ್ವ ಬಾಹುಬಲ ಪೌರುಷ ಅಸಾಮಾನ್ಯ ಅದ್ಭುತ ಧೈರ್ಯ,
ದಾನವ ಮಾನವ ರಾಕ್ಷಸ ಲೋಕಗಳಲ್ಲಿ  ಎಲ್ಲಾ,
ಭೀಮ ಬಲಭದ್ರ ಶಲ್ಯ ಕೀಚಕನಲ್ಲದೆ ಐದನೆಯವನಿಲ್ಲ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula