Wednesday 5 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 176 - 180

ಜನಾರ್ದ್ದನಶ್ಚ ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್ ।

ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥

 ಶ್ರೀಕೃಷ್ಣ ಕೂಡಾ ಶುಭದಿನದಲ್ಲಿ ಮಾಡಿದ ರುಗ್ಮಿಣಿಯ ಪಾಣಿಗ್ರಹಣ ,

ಸಂಭ್ರಮದ ದೊಡ್ಡ ಉತ್ಸವಾಚರಣೆ ನಡೆಸಿತು ಆಗ ಇಡೀ ದ್ವಾರಕಾಪಟ್ಟಣ .

 

ಚತುರ್ಮ್ಮುಖೇಶಪೂರ್ವಕಾಃ ಸುರಾ ವಿಯತ್ಯವಸ್ಥಿತಾಃ ।

ಪ್ರತುಷ್ಟುವುರ್ಜ್ಜನಾರ್ದ್ದನಂ ರಮಾಸಮೇತಮವ್ಯಯಮ್ ॥೧೭.೧೭೭॥

ಬ್ರಹ್ಮ ರುದ್ರ ಮೊದಲಾದ ದೇವತೆಗಳೆಲ್ಲಾ ಆಕಾಶದಿ ನಿಂತು ,

ಸ್ತೋತ್ರ ಮಾಡಿದರು ಲಕ್ಷ್ಮೀಸಮೇತನಾದ ಭಗವಂತನ ಕುರಿತು .

 

ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।

ವಿಚೇರುರುತ್ತಮೋತ್ಸವೇ ರಮಾರಮೇಶಯೋಗಿನಿ ॥೧೭.೧೭೮॥

ಮುನಿಶ್ರೇಷ್ಠರು, ಗಂಧರ್ವರು ಮೊದಲಾದವರು,

ಯಾದವರ ಕೂಡಿ ರುಗ್ಮಿಣೀಕೃಷ್ಣರ ವಿವಾಹದಿ ನಲಿದರು .

 

ಸುರಾಂಶಕಾಶ್ಚ ಯೇ ನೃಪಾಃ ಸಮಾಹುತಾ ಮಹೋತ್ಸವೇ ।

ಸಪಾಣ್ಡವಾಃ ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥

ದೇವಾಂಶಸಂಭೂತರಾದ ಅನೇಕ ರಾಜರು ,

ಪಾಂಡವರನ್ನು ಸೇರಿ ಆವ್ಹಾನಿಸಲ್ಪಟ್ಟವರು ,

ಕೃಷ್ಣನ ವಿವಾಹಮಹೋತ್ಸವಕ್ಕೆ ಸಾರಿ ಬಂದರು .

 

ಸಮಸ್ತಲೋಕಸುನ್ದರೌ ಯುತೌ ರಮಾರಮೇಶ್ವರೌ ।

ಸಮೀಕ್ಷ್ಯಮೋದಮಾಯಯುಃ ಸಮಸ್ತಲೋಕಸಜ್ಜನಾಃ ॥೧೭.೧೮೦॥

ಸಮಸ್ತಲೋಕಕ್ಕೆಲ್ಲಾ ಅತ್ಯಂತ ಸುಂದರವಾದ ರುಗ್ಮಿಣೀ ಕೃಷ್ಣರ ಜೋಡಿ ,

ಮಾಡಿಬಿಟ್ಟಿತು ಲೋಕದ ಸಮಸ್ತ ಸಜ್ಜನರಿಗೆ ಸಂಭ್ರಮ ಸಂತಸದ ಮೋಡಿ .

No comments:

Post a Comment

ಗೋ-ಕುಲ Go-Kula