Thursday 13 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 249 - 256

 ದ್ವಿರಷ್ಟಸೇನಯಾ ಯುತೌ ಸಹೈಕಯೈವ ತೌ ನೃಪೌ ।

ಸಮೀಯತುರ್ಯ್ಯುಧೇ ಹರಿಂ ಹರಿಶ್ಚ ತೌ ಸಸಾರ ಹ ॥೧೭.೨೪೯॥

ಹದಿನೇಳು ಅಕ್ಷೋಹಿಣೀ ಸೇನೆಯೊಂದಿಗೆ ಹಂಸ ಡಿಭಕರು,

ಭಗವಂತ ಕೃಷ್ಣ ಯುದ್ಢದಿ ಪರಸ್ಪರ ಎದುರು ಬದಿರಾದರು .

 

ಅಥ ದ್ವಯೋರ್ದ್ದ್ವಯೋರಭೂದ್ ರಣೋ ಭಯಾನಕೋ ಮಹಾನ್ ।

ಹರಿರ್ವಿಚಕ್ರಮೇಯಿವಾನ್ ಬಲಶ್ಚ ಹಂಸಮುದ್ಧತಮ್ ॥೧೭.೨೫೦॥

ತದಾsಸ್ಯ ಚಾನುಜಂ ಯಯೌ ಶಿನಿಪ್ರವೀರ ಆಯುಧೀ ।

ಗದಶ್ಚ ನಾಮತೋsನುಜೋ ಹರೇಃ ಸ ರೋಹಿಣೀಸುತಃ ॥೧೭.೨೫೧॥

ಪುರಾ ಸ ಚಣ್ಡಕೋ  ಗಣೋ ಹರೇರ್ನ್ನಿವೇದಿತಾಶನಃ ।

ಸಮಾಹ್ವಯದ್ ರಣಾಯ ವೈ ತಯೋಃ ಸ ತಾತಮೇವ ಹಿ ॥೧೭.೨೫೨॥

ಸ್ವಲ್ಪ ಕಾಲಾನಂತರ ಪ್ರಾರಂಭವಾಯಿತಲ್ಲಿ ಭಾರೀ ದ್ವಂದ್ವಯುದ್ಧ ,

ಕೃಷ್ಣ ವಿಚಕ್ರನೆದುರಿಸಿದರೆ ಬಲರಾಮ ಉದ್ಧಟ ಹಂಸನೆದುರಿಸಿದ ,

ಆಯುಧಪಾಣಿಯಾದ ಸಾತ್ಯಕಿ ಹಂಸಸೋದರ ಡಿಭಕಗೆ ಎದುರಾದ .

ಗದನೆನ್ನುವವನು ಶ್ರೀಕೃಷ್ಣನ ಕಿರಿಯ ಸಹೋದರ ,

ವಸುದೇವ ರೋಹಿಣಿಸುತನಾಗಿ ಬಂದ ಚಂಡನವತಾರ .

ಅವನು ಭಗವಂತಗೆ ಮಾಡುತ್ತಿದ್ದ ಅನ್ನದ ಅರ್ಪಣೆ ,

ಯುದ್ಧಕೆ ಕರೆದ ಹಂಸ ಡಿಭಕರ ತಂದೆ ಬ್ರಹ್ಮದತ್ತನನ್ನೆ .


ಅಕ್ಷೋಹಿಣೀತ್ರಯಾನ್ವಿತಾಃ ಸಮಸ್ತಯಾದವಾಸ್ತದಾ ।

ತ್ರಿಲೋಚನಾನುಗೌ ಚ ತೌ ನ್ಯವಾರಯನ್ ಸರಾಕ್ಷಸೌ ॥೧೭.೨೫೩॥

ಆ ಸಮಯದಿ ಮೂರು ಅಕ್ಷೋಹಿಣೀ ಸೇನೆಯುಳ್ಳ ಯಾದವರು ,

ರಕ್ಕಸಸೇನೆ , ಅವೆರಡೂ ಭೂತ ಮತ್ತು ಹಿಡಿಂಬನ ಎದುರಿಸಿದರು.

 

ಹರಿರ್ವಿಚಕ್ರಮೋಜಸಾ ಮಹಾಸ್ತ್ರಶಸ್ತ್ರವರ್ಷಿಣಮ್ ।

ವಿವಾಹನಂ ನಿರಾಯುಧಂ ಕ್ಷಣಾಚ್ಚಕಾರ ಸಾಯಕೈಃ ॥೧೭.೨೫೪॥

ಅಸ್ತ್ರ ಶಸ್ತ್ರಗಳ ಮಳೆಗರೆಯುತ್ತಿದ್ದ ಆ ವಿಚಕ್ರನೆದುರಿಸಿದ ಸ್ವಾಮಿ ಕೃಷ್ಣ ,

ಕೆಲಕ್ಷಣಗಳಲ್ಲಿ ಬಾಣಗಳಿಂದ ಅವನ ಮಾಡಿದ ಆಯುಧ ವಾಹನಹೀನ .

 

ಪುನಶ್ಚ ಪಾದಪಾನ್ ಗಿರೀನ್ ಪ್ರಮುಞ್ಚತೋsರಿಣಾsರಿಹಾ ।

ಶಿರೋ ಜಹಾರ ದೇವತಾ ವಿನೇದುರತ್ರ ಹರ್ಷಿತಾಃ ॥೧೭.೨೫೫ ॥

ಮತ್ತೆ ವಿಚಕ್ರ ಮರ ಬಂಡೆಗಳ ಪ್ರಯೋಗಿಸಿದ,

ಶ್ರೀಕೃಷ್ಣ ತನ್ನ ಚಕ್ರದಿಂದ ಅವನ ತಲೆಯ ತರಿದ ,

ದೇವತೆಗಳಿಂದಾಯಿತು ಆಗ ಹರ್ಷದ ಸಿಂಹನಾದ .

 

ಪ್ರಸೂನವರ್ಷಿಭಿಃ ಸ್ತುತಶ್ಚತುರ್ಮ್ಮುಖಾದಿಭಿಃ ಪ್ರಭುಃ ।

ಸಸಾರ ತೌ ಹರಾನುಗೌ ಪ್ರಭಕ್ಷಕೌ ಸ ಸಾತ್ತ್ವತಾಮ್ ॥೧೭.೨೫೬ ॥

ಬ್ರಹ್ಮಾದಿಗಳು ಕೃಷ್ಣನ ಸ್ತೋತ್ರ ಮಾಡುತ್ತಾ ಸುರಿಸುತ್ತಿರಲು ಹೂಮಳೆಯನ್ನು ,

ಕೃಷ್ಣ ಎದುರುಗೊಂಡ ಯಾದವರ ತಿನ್ನುತ್ತಿದ್ದ ಶಿವಗಣದ ಆ ಭೂತಗಳನ್ನು .

No comments:

Post a Comment

ಗೋ-ಕುಲ Go-Kula