Friday 7 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 202 - 212

ತತಃ ಪುರಾ ಸ್ಯಮನ್ತಕಂ ಹ್ಯವಾಪ ಸೂರ್ಯ್ಯಮಣ್ಡಲೇ

ಸ್ಥಿತಾದ್ಧರೇಃ ಸ ಸತ್ರಜಿತ್ ಸದಾsತ್ರ ಕೇಶವಾರ್ಚ್ಚಕಃ ॥೧೭.೨೦೨

ಹಿಂದೆ ಸೂರ್ಯಮಂಡಲದಲ್ಲಿನ ಕೇಶವನ ಪೂಜಿಸುತ್ತಿದ್ದ ಸತ್ರಜಿತ್ ಎಂಬ ಯಾದವ

ಸೂರ್ಯಮಂಡಲದಲ್ಲಿನ ನಾರಾಯಣನಿಂದ ವರವಾಗಿ ಸ್ಯಮಂತಕಮಣಿ ಪಡೆದಿದ್ದವ .

 ಸದಾsಸ್ಯ ವಿಷ್ಣುಭಾವಿನೋsಪ್ಯತೀವ ಲೋಭಮಾನ್ತರಮ್

ಪ್ರಕಾಶಯನ್ ರಮಾಪತಿರ್ಯ್ಯಯಾಚ ಈಶ್ವರೋ ಮಣಿಮ್ ॥೧೭.೨೦೩

ಮೂಲತಃ ವಿಷ್ಣುಭಕ್ತನಾಗಿದ್ದರೂ ಸತ್ರಜಿತ್ ಒಳಗಿತ್ತು ಭಾರೀ ಲೋಭತನ

ಇದನ್ನ ಜಗಕೆ ತೋರಲೆಂದೇ ಸ್ಯಮಂತಕ ಮಣಿ ಕೇಳಿದನಂತೆ ಜನಾರ್ದನ .

 ಸ ತಂ ನ ದತ್ತವಾಂಸ್ತತೋsನುಜೋ ನಿಬದ್ಧ್ಯ ತಂ ಮಣಿಮ್

ವನಂ ಗತಃ ಪ್ರಸೇನಕೋ ಮೃಗಾಧಿಪೇನ ಪಾತಿತಃ ॥೧೭.೨೦೪

ಶ್ರೀಕೃಷ್ಣ ಕೇಳಿದ ಸ್ಯಮಂತಕ ಮಣಿ ಕೊಡಲು ಸತ್ರಜಿತನಿಂದ ನಕಾರ

ಧರಿಸಿ ಬೇಟೆಗೆ ಹೋದ ಅವನ ತಮ್ಮ ಪ್ರಸೇನನ ಸಿಂಹ ಮಾಡಿತು ಸಂಹಾರ .

 ತದಾ ಸ ಸತ್ರಜಿದ್ಧರಿಂ ಶಶಂಸ ಸೋದರಾನ್ತಕಮ್

ಉಪಾಂಶು ವರ್ತ್ಮನಾ ತತೋ ಹರಿಃ ಸಯಾದವೋ ಯಯೌ ॥೧೭.೨೦೫

ಹೀಗಾದಮೇಲೆ ಕೃಷ್ಣ ತನ್ನ ತಮ್ಮನ ಕೊಂದನೆಂದು ಸತ್ರಜಿತನ ಮೆಲುಆಪಾದನೆ

ಯಾದವರ ಕೂಡಿಕೊಂಡು ಪ್ರಸೇನ ಹೋದ ಹಾದಿ ಹಿಡಿದು ಹೊರಟ ಕೃಷ್ಣ ತಾನೇ .

 ವನೇ ಸ ಸಿಂಹಸೂದಿತಂ ಪದೈಃ ಪ್ರದರ್ಶ್ಯ ವೃಷ್ಣಿನಾಮ್

ಪ್ರಸೇನಮೃಕ್ಷಪಾತಿತಂ ಸ ಸಿಂಹಮಪ್ಯದರ್ಶಯತ್ ॥೧೭.೨೦೬

ಹೆಜ್ಜೆ ಗುರುತಿಂದ ಸಿಂಹವೇ ಪ್ರಸೇನನ ಕೊಂದಿದೆ ಎಂದು ನಿರೂಪಿಸಿದ ಗೋವಿಂದ

ಕರಡಿಯಿಂದ (ಜಾಂಬವಂತ) ಸಿಂಹವೂ ಕೊಲ್ಲಲ್ಪಟ್ಟಿದೆ ಎಂದು ತೋರಿದ ಮುಕುಂದ .

 ತತೋ ನಿಧಾಯ ತಾನ್ ಬಿಲಂ ಸ ಜಾಮ್ಬವತ್ಪರಿಗ್ರಹಮ್

ವಿವೇಶ ತತ್ರ  ಸಂಯುಗಂ ಬಭೂವ ತೇನ ಚೇಶಿತುಃ ॥೧೭.೨೦೭

ಆನಂತರ ತನ್ನ ಜೊತೆ ಬಂದ ಯಾದವರ ಹೊರಗೆಬಿಟ್ಟ ಕೃಷ್ಣ ತಾನು

ಜಾಂಬವಂತನಿದ್ದ ಗುಹೆ ಹೊಕ್ಕು ಭಾರೀ ಯುದ್ಧವನ್ನೇ ಮಾಡಿದನು .

  ಯುಯೋಧ ಮನ್ದಮೇವ ಸಃ ಪ್ರಭುಃ ಸ್ವಭಕ್ತ ಇತ್ಯಜಃ

ಚಕಾರ ಚೋಗ್ರಮನ್ತತಃ ಪ್ರಕಾಶಯನ್ ಸ್ವಮಸ್ಯ ಹಿ ॥೧೭.೨೦೮

ತನ್ನ ಭಕ್ತನೆಂದು ಕೃಷ್ಣ ಮೊದಲು ತೋರಿದ ಮಂದಗತಿ

ಕೊನೆಗೆ ಜಾಂಬವಂತಗೆ ತೋರಿದ ಯುದ್ಧದ ಉಗ್ರನೀತಿ .

 ಸ ಮುಷ್ಟಿಪಿಷ್ಟವಿಗ್ರಹೋ ನಿತಾನ್ತಮಾಪದಂ ಗತಃ

ಜಗಾಮ ಚೇತಸಾ ರಘೂತ್ತಮಂ ನಿಜಂ ಪತಿಂ ಗತಿಮ್ ॥೧೭.೨೦೯

ಭಗವಂತನ ಪೆಟ್ಟುಗಳಿಂದ ತತ್ತರಿಸಿಹೋದ ಜಾಂಬವಂತ

ಮೂಡಿತು ಸಾಯುತ್ತೇನೇನೋ ಎಂಬ ಆತಂಕದಾಘಾತ .

ಮನದಲ್ಲೇ ತನ್ನೊಡೆಯನ ನೆನೆದ

ಗತಿಕೊಡುವ ಶ್ರೀರಾಮನ ಸ್ಮರಿಸಿದ .

 ಸ್ಮೃತಿಂ ಗತೇ ತು ರಾಘವೇ ತದಾಕೃತಿಂ ಯದೂತ್ತಮೇ;  

ಸಮಸ್ತಭೇದವರ್ಜ್ಜಿತಾಂ ಸಮೀಕ್ಷ್ಯ ಸೋsಯಮಿತ್ಯವೇತ್ ॥೧೭.೨೧೦

ಸ್ಮರಿಸಿದಾಗ ಕೃಷ್ಣನಲ್ಲಿ ರಾಮಾಕೃತಿಯ ನೋಡಿದ

ಅವನೇ ಇವನಾದ ಭಗವಂತನಿಗ್ಯಾವ ಥರದ ಭೇದ .

 ತತಃ ಕ್ಷಮಾಪಯನ್ ಸುತಾಂ ಪ್ರದಾಯ ರೋಹಿಣೀಂ ಶುಭಾಮ್

ಮಣಿಂ ಚ ತಂ ನುನಾವ ಸಃ ಪ್ರಪನ್ನ ಆಶು ಪಾದಯೋಃ ॥೧೭.೨೧೧

ತನ್ನೆದುರು ನಿಂತ ಕೃಷ್ಣ ಶ್ರೀರಾಮನೇ ಎಂದರಿತ

ಕ್ಷಮೆ ಕೋರಿ ಮಗಳು ರೋಹಿಣಿಯ ಕೃಷ್ಣಗಿತ್ತ .

ಪಾದದಿ ಬಿದ್ದು ಸ್ತುತಿಸುತ್ತಾ ಮಣಿಯನ್ನೂ ಇತ್ತ .

 ವಿಧಾಯ ಚಕ್ರದಾರಿತಂ ಸುಜೀರ್ಣ್ಣದೇಹಮಸ್ಯ ಸಃ

ಯುವಾನಮಾಶು ಕೇಶವಶ್ಚಕಾರ ವೇದನಾಂ ವಿನಾ ॥೧೭.೨೧೨

 ಕೃಷ್ಣ ಮುಪ್ಪಾದ ಜಾಂಬವಂತನ ಜೀರ್ಣಶರೀರವ ಸೀಳಿದ

ಅವನಿಗ್ಯಾವ ನೋವು ಮಾಡದೇ ಯುವಕನನ್ನಾಗಿ ಮಾಡಿದ .

No comments:

Post a Comment

ಗೋ-ಕುಲ Go-Kula