Saturday 15 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 265 - 271

 ಗದಸ್ತು ಸಾಲ್ವಭೂಭೃತಾ ವಯೋಗತೇನ ಯೋಧಯನ್ ।

ವಿವಾಹನಂ ನಿರಾಯುಧಂ ಚಕಾರ ಸೋsಪ್ಯಪಾದ್ರವತ್ ॥೧೭.೨೬೬ ॥

ಗದ ಮುದುಕ ಸಾಲ್ವನೊಂದಿಗೆ ಕಾದಾಡಿದ ,

ಅವನ ಮಾಡಿದ ರಥಹೀನ ಮತ್ತು ನಿರಾಯುಧ ,

ಸಾಲ್ವನಾಗ ಯುದ್ಧಭೂಮಿಯಿಂದ ಓಡಿಹೋದ .

 

ಸುತೇನ ತಸ್ಯ ಕನ್ಯಸಾ ಯುಯೋಧ ಸಾತ್ಯಕೀ ರಥೀ ।

ವರಾಸ್ತ್ರಶಸ್ತ್ರಯೋಧಿನೌ ವಿಜಹ್ರತುಶ್ಚ ತಾವುಭೌ ॥೧೭.೨೬೭ ॥

ಡಿಭಕನೊಡನೆ ರಥಿಕನಾದ ಸಾತ್ಯಕಿಯ ಹೋರಾಟ ,

ಉತ್ತಮ ಅಸ್ತ್ರ ಶಸ್ತ್ರಗಳಿಂದ ಅವರಿಬ್ಬರ ಕಾದಾಟ .

 

ಚಿರಂ ಪ್ರಯುದ್ಧ್ಯ ಸಾತ್ಯಕಿಃ ಸ ಹಂಸಕನ್ಯಸಾ ಬಲೀ ।

ಶತಂ ಸಪಞ್ಚಕಮ್  ರಣೇ ಚಕರ್ತ್ತ ತಸ್ಯ ಧನ್ವನಾಮ್ ॥೧೭.೨೬೮ ॥

ಬಲಿಷ್ಠನಾದ ಸಾತ್ಯಕಿ ಹಂಸನ ತಮ್ಮ ಡಿಭಕನೊಂದಿಗೆ ಮಾಡಿದ ಯುದ್ಧ ,

ಬಹುಕಾಲ ಯುದ್ಧಾನಂತರ ಅವನ ನೂರಾಐದು ಬಿಲ್ಲುಗಳ ಕತ್ತರಿಸಿದ .

 

ಸ ಖಢ್ಗಚರ್ಮ್ಮಭೃದ್ ರಣೇsಭ್ಯಯಾತ್ ಸುತಾತ್ಮಜಂ ಶಿನೇಃ ।

ಸ ಚೈನಮಭ್ಯಯಾತ್ ತಥಾ ವರಾಸಿಚರ್ಮ್ಮಭೃದ್ ವಿಭೀಃ ॥೧೭.೨೬೯ ॥

ಡಿಭಕ ಕತ್ತಿ ಗುರಾಣಿಗಳೊಂದಿಗೆ ಸಾತ್ಯಕಿಯ ಎದುರಿಸಿದ ,

ಸಾತ್ಯಕಿಯೂ ಅಂಜದೆ ಖಡ್ಗ ಢಾಲುಗಳಿಂದ ಎದುರಾದ .

 

ದ್ವಿಷೋಡಶಪ್ರಭೇದಕಂ ವರಾಸಿಯುದ್ಧಮಶ್ರಮೌ ।

ಪ್ರದರ್ಶ್ಯ ನಿರ್ವಿಶೇಷಕಾವುಭೌ ವ್ಯವಸ್ಥಿತೌ ಚಿರಮ್ ॥೧೭.೨೭೦ ॥

ನಡೆಯಿತು ಮೂವತ್ತೆರಡು ರೀತಿಯ ಕತ್ತಿ ಕಾಳಗ ,

ಯಾರೂ ಸೋಲದೇ ಹಾಗೆಯೇ ನಿಂತುಬಿಟ್ಟರಾಗ .

 

ಪರಸ್ಪರಾನ್ತರೈಷಿಣೌ ನಚಾನ್ತರಂ ವ್ಯಪಶ್ಯತಾಮ್ ।

ತತೋ ವಿಹಾಯ ಸಙ್ಗರಂ ಗತೌ ನಿರರ್ತ್ಥಕಂ ತ್ವಿತಿ ॥೧೭.೨೭೧॥

ಪರಸ್ಪರ ಅವಕಾಶ ಬಯಸುತ್ತಾ ಕಾದಿದರಿಬ್ಬರು ,

ಇಬ್ಬರೂ ಯಾವ ಅವಕಾಶವನ್ನು ಕಾಣದಾದರು ,

ನಿರರ್ಥಕವಾದ ಯುದ್ಧ ಬಿಟ್ಟುಕೊಟ್ಟು ತೆರಳಿದರು.

No comments:

Post a Comment

ಗೋ-ಕುಲ Go-Kula