Thursday 6 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 181 - 186

ತಯಾ ರಮನ್ ಜನಾರ್ದ್ದನೋ ವಿಯೋಗಶೂನ್ಯಯಾ ಸದಾ।

ಅಧತ್ತ ಪುತ್ರಮುತ್ತಮಂ ಮನೋಭವಂ ಪುರಾತನಮ್ ॥೧೭.೧೮೧॥

ವಿಯೋಗವಿರದ ರುಗ್ಮಿಣಿಯೊಂದಿಗೆ ಶ್ರೀಕೃಷ್ಣನ ಕ್ರೀಡಾ ವಿನೋದ ,

ಅತ್ಯಂತ ಹಿಂದಿನವನಾದ, ಮನದಿಂದ ಹುಟ್ಟಿದ ಉತ್ಕೃಷ್ಟ ಮಗನಾದ ,

ಕಾಮನನ್ನು (ಮನ್ಮಥ) ಹೆಂಡತಿ ರುಗ್ಮಿಣಿಯ ಗರ್ಭದಲ್ಲಿ ಇಟ್ಟವನಾದ .

 

ಚತುಸ್ತನೋರ್ಹರೇಃ ಪ್ರಭೋಸ್ತೃತೀಯರೂಪಸಂಯುತಃ ।

ತತಸ್ತದಾಹ್ವಯೋSಭವತ್ ಸ ರುಗ್ಮಿಣೀಸುತೋ ಬಲೀ ॥೧೭.೧೮೨॥

ಬಲಿಷ್ಠನಾದ ಆ ರುಗ್ಮಿಣೀಪುತ್ರ ಭಗವಂತನ ನಾಕು ರೂಪಗಳಲ್ಲಿ ಮೂರನೇ ರೂಪ ,

ಪ್ರದ್ಯುಮ್ನ ರೂಪದಿಂದ ಪ್ರವಿಷ್ಟನಾಗಿ ಪ್ರದ್ಯುಮ್ನನೆಂದೇ ಕರೆಸಿಕೊಂಡ ಆ ಭೂಪ .

 

ಪುರೈವ ಮೃತ್ಯವೇsವದತ್ ತಮೇವ ಶಮ್ಬರಸ್ಯ ಹ ।

ಪ್ರಜಾತಮಬ್ಜಜಾಙ್ಕಜಸ್ತವಾನ್ತಕೋsಯಮಿತ್ಯಪಿ ॥೧೭.೧೮೩॥

ಬ್ರಹ್ಮನ ತೊಡೆಯಿಂದ ಹುಟ್ಟಿದ ಮುನಿ ನಾರದ ,

ಶಂಬರನ ಕೊಲ್ಲುವವ ಹುಟ್ಟಲಿದ್ದಾನೆಂದು ಹೇಳಿದ್ದ ,

ಪ್ರದ್ಯುಮ್ನ ಹುಟ್ಟಿದ ಮೇಲೆ ಅವನೇ ನಿನ್ನ ಮೃತ್ಯುವೆಂದ.

 

ಸ ಮಾಯಯಾ ಹರೇಃ ಸುತಂ ಪ್ರಗೃಹ್ಯ ಸೂತಿಕಾಗೃಹಾತ್ ।

ಅವಾಕ್ಷಿಪನ್ಮಹೋದಧಾವುಪೇಕ್ಷಿತೋsರಿಪಾಣಿನಾ ॥೧೭.೧೮೪॥

ತಮಗ್ರಸಜ್ಜಲೇಚರಃ ಸ ದಾಶಹಸ್ತಮಾಗತಃ ।

ಕುಮಾರಮಸ್ಯ ತೂದರೇ ನಿರೀಕ್ಷ್ಯ ಶಮ್ಬರೇ ದದುಃ ॥೧೭.೧೮೫॥

 

ಭಗವಂತನಿಂದ ಉಪೇಕ್ಷಿತನಾಗಿ ಶಂಬರ ತನ್ನ ಕೂಟ ವಿದ್ಯೆಯಿಂದ ,

ಪ್ರಸವಗೃಹದಿಂದ ಪ್ರದ್ಯುಮ್ನನ ಅಪಹರಿಸಿ ಸಮುದ್ರದ  ಒಳಗೆ ಎಸೆದ .

ಹಾಗೆ ಎಸೆದ ಮಗುವನ್ನು ನುಂಗಿತೊಂದು ಮೀನು ,

ಮೀನು ಹಿಡಿವ ಬೆಸ್ತನೊಬ್ಬನ ಕೈಸೇರಿತು ತಾನು ,

ಮೀನಲ್ಲಿ ಮಗುವ ಕಂಡು ಶಂಬರಗೇ ಕೊಟ್ಟ ಬೆಸ್ತರವನು.

 

ವಿಪಾಟ್ಯ ಮತ್ಸ್ಯಕೋದರಂ ಸ ಶಮ್ಬರಃ ಕುಮಾರಕಮ್ ।

ನ್ಯವೇದಯನ್ಮನೋಭವಪ್ರಿಯಾಕರೇ ಸುರೂಪಿಣಮ್ ॥೧೭.೧೮೬॥

 ಮೀನಿನ ಹೊಟ್ಟೆಯ ಸೀಳಿದ ಶಂಬರಾಸುರ ,

ಕಂಡ ಬಾಲಕ ಪ್ರದ್ಯುಮ್ನನಿದ್ದ ಬಲುಸುಂದರ ,

ಮಾಡಿದ ಮಗುವನ್ನ ಪ್ರದ್ಯುಮ್ನ ಸತಿಗೆ ಹಸ್ತಾಂತರ .

(ಈ ಹಿನ್ನೆಲೆಯಲ್ಲಿನ ಕಥೆಯನ್ನು ಮುಂದೆ ಹೇಳುತ್ತಾರೆ:)

No comments:

Post a Comment

ಗೋ-ಕುಲ Go-Kula