Friday 28 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 87 - 96

 ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,

ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .

ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,

ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,

ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .

ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,

ಅದು ನಾನು ನಿನ್ನ ಬಂಧಿಸದಿರುವ ಮರ್ಮ .

ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,

ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .

ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,

ಗಂಗೆಯ ಉತ್ತರದ ಪ್ರದೇಶ ನನ್ನದು .

 

 

ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

ದ್ರೋಣರೆಂದರು-ನಾನು ರಾಜನಾಗದ ಹೊರತು ,

ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .

ಈಗ ನೋಡು ನಾವಿಬ್ಬರೂ ರಾಜರು ,

ಹಾಗೆಯೇ ನಾವಿಬ್ಬರೂ ಸ್ನೇಹಿತರು .

ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,

ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .

ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,

ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .

 

ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,

ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .

ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,

ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,

ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .

ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,

ಅದು ನಾನು ನಿನ್ನ ಬಂಧಿಸದಿರುವ ಮರ್ಮ .

ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,

ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .

ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,

ಗಂಗೆಯ ಉತ್ತರದ ಪ್ರದೇಶ ನನ್ನದು .

 

ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

ದ್ರೋಣರೆಂದರು-ನಾನು ರಾಜನಾಗದ ಹೊರತು ,

ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .

ಈಗ ನೋಡು ನಾವಿಬ್ಬರೂ ರಾಜರು ,

ಹಾಗೆಯೇ ನಾವಿಬ್ಬರೂ ಸ್ನೇಹಿತರು .

ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,

ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .

ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,

ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .


 

ಧಾರ್ತ್ತರಾಷ್ಟ್ರೈಸ್ತು ಭೀಮಸ್ಯ ಭಯಾತ್ ಪಾದೌ ಪ್ರಣಮ್ಯ ಚ ।

ಶರಣಾರ್ತ್ಥಂ ಯಾಚಿತತ್ವಾತ್ ಸಪುತ್ರೋ ಯುಯುಧೇ ಪರೈಃ ॥೧೮.೯೩ ॥

ದುರ್ಯೋಧನಾದಿಗಳಿಗೆ ಆವರಿಸಿತ್ತು ಭೀಮನ ಭಯ ,

ದ್ರೋಣಪಾದಕೆ ಬಿದ್ದು ಬೇಡಿದರು ರಕ್ಷಣೆಯ ಅಭಯ .

ಮಗ ಅಶ್ವತ್ಥಾಮನೊಡಗೂಡಿ ಯುದ್ಧಗೈದರು ಆಚಾರ್ಯ.

 

ಏವಂ ಹರೀಚ್ಛಯೈವಾಸೌ ಕ್ಷಾತ್ರಂ ಧರ್ಮ್ಮಮುಪೇಯಿವಾನ್ ।

ದ್ರುಪದಸ್ತು ದಿವಾರಾತ್ರಂ ತಪ್ಯಮಾನಃ ಪರಾಭವಾತ್ ॥೧೮.೯೪ ॥

ಭೀಮಾರ್ಜ್ಜುನಬಲಂ ದೃಷ್ಟ್ವಾ ಚೇಚ್ಛನ್ ಪಾಣ್ಡವಸಂಶ್ರಯಮ್ ।

ಸಮ್ಬನ್ಧೀತ್ಯರ್ಜ್ಜುನವಚಶ್ಚಿಕೀರ್ಷುಃ ಸತ್ಯಮೇವ ಚ ॥೧೮.೯೫ ॥

ಮಾರ್ದ್ದವಂ ಚಾರ್ಜ್ಜುನೇ ದೃಷ್ಟ್ವಾ ಸುತಾಮೈಚ್ಛತ್ ತದರ್ತ್ಥತಃ ।

ಪುತ್ರಂ ಚ ದ್ರೋಣಹನ್ತಾರಮಿಚ್ಛನ್ ವಿಪ್ರವರೌ ಯಯೌ ॥೧೮.೯೬ ॥

ಹೀಗೆ ದ್ರೋಣರಿಂದ ಭಗವದಿಚ್ಛೆಯಂತೆ ಕ್ಷತ್ರಿಯಧರ್ಮ ಪಾಲನೆ ,

ದ್ರುಪದನಿಗಾದರೋ ಹಗಲುರಾತ್ರಿ ಪರಾಜಯದ್ದೇ ಪರಿತಪನೆ .

ದ್ರುಪದ ಗಮನಿಸಿದ ಭೀಮಾರ್ಜುನರ ಬಲ ಮತ್ತು ಶೌರ್ಯ ,

ಸತ್ಯಮಾಡಲು 'ಇವ ಸಂಬಂಧಿ' ಎಂಬ ಪಾರ್ಥನುಡಿಯ ಆಂತರ್ಯ,

ತಿಳಿದು ಅರ್ಜುನನಲ್ಲಿ ತನ್ನ ಬಗೆಗಿದ್ದ ಮೃದುಸ್ವಭಾವ ,

ಬಂತವನಲ್ಲಿ ಅವನಿಗಾಗಿ ಮಗಳ ಪಡೆಯುವ ಭಾವ .

ಹಾಗೆಯೇ ದ್ರೋಣನ ಕೊಲ್ಲುವ ಮಗನೊಬ್ಬನನ್ನು ಬಯಸಿ ,

ತೆರಳಿದ ಯಾಜ ಉಪಯಾಜರೆಂಬ ಶ್ರೇಷ್ಠವಿಪ್ರರನ್ನು ಅರಸಿ.

No comments:

Post a Comment

ಗೋ-ಕುಲ Go-Kula